ಮಲ್ಲಿಕಾರ್ಜುನ ಖರ್ಗೆ. ಎಐಸಿಸಿ ಅಧ್ಯಕ್ಷರಾಗಿರುವ ಖರ್ಗೆ ಅವರಿಗೆ ಸುದೀರ್ಘ ರಾಜಕೀಯ ಅನುಭವವಿದೆ. ಕೆಲವೇ ವರ್ಷಗಳ ಹಿಂದೆ ಖರ್ಗೆ ಅವರು ಹೀಗಿರಲಿಲ್ಲ. ಮಾತಿನಲ್ಲಿ ತೂಕವಿರುತ್ತಿತ್ತು. ಆದರೆ ಇತ್ತೀಚೆಗೆ ಮಾತುಗಳು ಪದೇ ಪದೇ ಹಳಿ ತಪ್ಪುತ್ತಿವೆ. ಅವರ ಈ ಹೇಳಿಕೆಗಳನ್ನೇ ಗಮನಿಸಿ ನೋಡಿ..
ಖರ್ಗೆಯವರ ವಿವಾದಾತ್ಮಕ ಹೇಳಿಕೆಗಳನ್ನು ಗಮನಿಸಿ ನೋಡಿ..
ಪ್ರಧಾನಿ ಮೋದಿಯನ್ನು “ಟೆರರಿಸ್ಟ್” (ಭಯೋತ್ಪಾದಕ) ಎಂದು ಕರೆದಿದ್ದು ವಿವಾದವಾಗಿದೆ. ಮೋದಿ ಒಬ್ಬ ಟೆರರಿಸ್ಟ್… ಅವರು ಸಮಾನತೆಯನ್ನು ನಂಬುವುದಿಲ್ಲ ಎಂದು ಹೇಳಿ ನಂತರ “ನಾನು ಮೋದಿಯನ್ನು ಟೆರರಿಸ್ಟ್ ಎಂದು ಕರೆಯಲಿಲ್ಲ. ಅವರು ಜನರನ್ನು ಮತ್ತು ವಿರೋಧ ಪಕ್ಷಗಳನ್ನು ಟೆರರೈಸ್ (ಭಯಪಡಿಸುತ್ತಾರೆ) ಮಾಡುತ್ತಿದ್ದಾರೆ ಎಂದು ಹೇಳಿದ್ದೇನೆ. ED, CBI, IT ಇತ್ಯಾದಿ ಸಂಸ್ಥೆಗಳನ್ನು ಬಳಸಿ ವಿರೋಧಿಗಳನ್ನು ಬೆದರಿಸುತ್ತಿದ್ದಾರೆ” ಎಂದು ವಿವರಣೆ ಕೊಟ್ಟಿದ್ಧಾರೆ.
ಇದಕ್ಕೆ ಸ್ವಲ್ಪ ದಿನಗಳ ಹಿಂದಷ್ಟೇ ಗುಜರಾತಿಗಳನ್ನು “ಇಲ್ಲಿಟರೇಟ್” (ಅನಕ್ಷರಸ್ಥರು/ಅಜ್ಞಾನಿಗಳು) ಎಂದು ಕರೆದಿದ್ದು ವಿವಾದವಾಗಿತ್ತು. “ಕೇರಳದ ಜನರು ಬುದ್ಧಿವಂತರು ಮತ್ತು ಶಿಕ್ಷಿತರು. ಮೋದಿ ಅಥವಾ ಪಿನರಾಯಿ ವಿಜಯನ್ ಅವರು ಗುಜರಾತ್ ಅಥವಾ ಇತರೆಡೆಯ ‘ಇಲ್ಲಿಟರೇಟ್’ ಜನರನ್ನು ಮರುಳು ಮಾಡಬಹುದು, ಆದರೆ ಕೇರಳದವರನ್ನು ಅಲ್ಲ” ಎಂದು ಹೇಳಿಕೆ ನೀಡಿ ನಂತರ ಕ್ಷಮೆ ಕೇಳಿದ್ದರು. “ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪು ತಿರುಗಿಸಲಾಗಿದೆ. ಗುಜರಾತಿಗಳ ಬಗ್ಗೆ ನನಗೆ ಎಂದಿನಂತೆ ಗೌರವವಿದೆ. ಅವರ ಭಾವನೆಗಳನ್ನು ನೋಯಿಸುವ ಉದ್ದೇಶವಿರಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು.
ಈ ಹಿಂದೆ ಕೂಡಾ ಇಂತದ್ದೇ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. : “ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಬೇಕು. ಬಹುತೇಕ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಬಿಜೆಪಿ-ಆರ್ಎಸ್ಎಸ್ನಿಂದ ಬರುತ್ತಿವೆ” ಎಂದು ಹೇಳಿದ್ದ ಖರ್ಗೆ ಹಾವಿಗೆ ಹೋಲಿಸಿದ್ದರು.
ಅಲ್ಲದೆ ಮುಸ್ಲಿಮರನ್ನುದ್ದೇಶಿಸಿ ಮಾತನಾಡುತ್ತಾ “ವಿಷಕಾರಿ ಹಾವುಗಳನ್ನು ನಮಾಜ್ ಮಾಡುವಾಗಲೂ ಕೊಲ್ಲಬೇಕು. ಆರ್ಎಸ್ಎಸ್ ಒಂದು ವಿಷಕಾರಿ ಹಾವು” ಎಂದು ಹೇಳಿದ್ದರು.
ಮಹಾಕುಂಭವನ್ನು ಹಿಂದೂ ಸಮಾಜಕ್ಕೆ ಅಪಮಾನ ಎಂಬರ್ಥದ ಹೇಳಿಕೆ, ಸನಾತನ ಧರ್ಮಕ್ಕೆ ವಿರುದ್ಧವಾಗಿ ಮಾಡಿರುವ ಟೀಕೆಗಳು ವಿವಾದವನ್ನು ಹುಟ್ಟುಹಾಕಿವೆ. ಖರ್ಗೆ ಅವರ ಹೇಳಿಕೆಗಳು ಸಾಮಾನ್ಯವಾಗಿ ತೀವ್ರ ರಾಜಕೀಯ ಟೀಕೆಯ ಭಾಗವಾಗಿರುತ್ತವೆ. ಬಿಜೆಪಿ ಇವುಗಳನ್ನು “ದ್ವೇಷದ ರಾಜಕಾರಣ” ಎಂದು ಟೀಕಿಸುತ್ತದೆ, ಆದರೆ ಕಾಂಗ್ರೆಸ್ ಇವುಗಳನ್ನು “ಸತ್ಯದ ಧ್ವನಿ” ಎಂದು ಸಮರ್ಥಿಸುತ್ತದೆ.
ಆದರೆ ಈ ರೀತಿಯ ಮಾತುಗಳನ್ನು ಯಾವ ರೀತಿ ಸಮರ್ಥನೆ ಮಾಡುವುದು.. ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಯಸ್ಸಾಗಿದೆ. ಅವರೇನೂ ನಿನ್ನೆ ಮೊನ್ನೆ ಶಾಸಕ ಅಥವಾ ಸಂಸದರಾದವರಲ್ಲ. ಮುಖ್ಯಮಂತ್ರಿ ಆಗಲಿಲ್ಲ ಎನ್ನುವುದನ್ನು ಬಿಟ್ಟರೆ ಒಂದು ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಹುದ್ದೆ, ಕೆಪಿಸಿಸಿ ಅಧ್ಯಕ್ಷ, ಕೇಂದ್ರದಲ್ಲಿ ಸಚಿವ, ಎಐಸಿಸಿ ಅಧ್ಯಕ್ಷರಾಗಿ ಅನುಭವ ಇದೆ. ಇಷ್ಟು ಅನುಭವ ಇರುವ ನಾಯಕ ಪದೇ ಪದೇ ನಾಲಗೆ ಮೇಲಿನ ಹತೋಟಿ ಕಳೆದುಕೊಳ್ಳುತ್ತಿರುವುದು ಕಾಂಗ್ರೆಸ್ಗೆ ಶುಭ ಸೂಚನೆ ಅಲ್ಲ.



