ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಗಿದೆ. ಆದರೆ.. ಅಚ್ಚರಿಯಾಗುತ್ತಿರುವುದು ಡಿಕೆ ಶಿವಕುಮಾರ್ ಮೌನದ ಬಗ್ಗೆ. ಡಿಕೆ ಸುರೇಶ್ ಕೂಡಾ ಮಾಧ್ಯಮಗಳಿಂದ ಡಿಸ್ಟೆನ್ಸ್ ಮೈಂಟೇನ್ ಮಾಡ್ತಿದ್ದರೆ, ಡಿಕೆಶಿ ಅವರಂತೂ ಮೀಡಿಯಾ ಮೈಕುಗಳನ್ನು ದೂರ ತಳ್ಳುತ್ತಿದ್ಧಾರೆ. ಸಂಭ್ರಮದ ವಿಷಯದಲ್ಲಿ ಮೌನವೇಕೆ.. ಇಷ್ಟೊಂದು ಸಂಯಮ ಏಕೆ ಎಂದರೆ ಓಪನ್ ಆಗುವ ಕಥೆಯೇ ಬೇರೆ.
ಡಿಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಫಿಕ್ಸ್ ಎಂದಿದ್ದರೂ, ಅಂತಿಮ ಹಂತದ ಕಸರತ್ತು ಇನ್ನೂ ಮುಗಿದಿಲ್ಲ. ಏಕೆಂದರೆ ರಾಹುಲ್ ಗಾಂಧಿ ಜೊತೆಗಿನ ಸಭೆಯಲ್ಲಿ ಡಿಕೆ ಸಿಎಂ ಆಗುವುದಕ್ಕೆ ತಮಗೆ ಇರುವ ಅಸಮಾಧಾನವನ್ನು ಸಿದ್ದರಾಮಯ್ಯ ತೋರಿಸಿಬಿಟ್ಟಿದ್ದಾರೆ. ಡಿಕೆ ಬಿಟ್ಟು ಬೇರೆಯವರಿಗೆ ಅವಕಾಶ ನೀಡಿದರೆ ಉತ್ತಮ ಎಂದೂ ಹೇಳಿದ್ದಾರೆ. ಆದರೆ ಎಲ್ಲಿಯೂ ತಮ್ಮ ಆಯ್ಕೆ ಎಂದು ಹೆಸರು ಹೇಳಿಲ್ಲ. ಪರಮೇಶ್ವರ್, ಖರ್ಗೆ ಸೇರಿದಂತೆ ಯಾರ ಹೆಸರನ್ನೂ ಖುದ್ದು ಸಿದ್ದರಾಮಯ್ಯ ಹೇಳಿಲ್ಲ. ಆದರೆ ತಮ್ಮ ಮನಸ್ಸಿನಲ್ಲಿ ಏನಿದೆ ಎಂಬ ಬಗ್ಗೆ ಸಂದೇಶವನ್ನಂತೂ ಕೊಟ್ಟಿದ್ಧಾರೆ. ಡಿಕೆಗೆ ಅಸಮಾಧಾನವಾಗಿರುವುದೇ ಅದು.
ಹೀಗಾಗಿಯೇ ಡಿಕೆ ಶಿವಕುಮಾರ್ ʻತಮ್ಮ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ನಾನೂ ಅವರನ್ನು ಅನುಮೋದಿಸುತ್ತಿದ್ದೇನೆ. ನನಗೆ ನೀಡಿದ್ದ ಸಹಕಾರವನ್ನೇ ಇನ್ನು ಮುಂದೆ ಶಿವಕುಮಾರ್ ಅವರಿಗೂ ನೀಡಬೇಕುʼ ಎಂದು ಸಿದ್ದರಾಮಯ್ಯ ಅವರಿಂದ ಹೇಳಿಸಬೇಕು. ಅದಾದ ನಂತರವೇ ತಾನು ಮಾತನಾಡಬೇಕು ಎಂದು ನಿರ್ಧರಿಸಿದ್ದಾರಂತೆ. ಹೀಗಾಗಿ ಡಿಕೆ ಶಿವಕುಮಾಋ ತಾವಷ್ಟೇ ಅಲ್ಲ, ತಮ್ಮ ತಮ್ಮ ಸುರೇಶ್ ಅವರಿಗೂ ಸೈಲೆಂಟ್ ಆಗಿರುವಂತೆ ಸೂಚನೆ ಕೊಟ್ಟಿದ್ದಾರೆ.
ಒಂದು ಮೂಲದ ಪ್ರಕಾರ ಈ ಬಾರಿಯೂ ನೋಡೋಣ, ಕಾಯೋಣ ಎಂದು ಹೇಳುವುದಕ್ಕೆ ರಾಹುಲ್ ಸಿದ್ಧರಾಗಿದ್ದರಂತೆ. ಆದರೆ ಡಿಕೆ ಶಿವಕುಮಾರ್ ಈ ಬಾರಿ 100% ರೆಡಿಯಾಗಿಯೇ ಹೋಗಿದ್ದರು. ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಆಗಿದೆ. ಬೇರೆಯರನ್ನು ನೇಮಕ ಮಾಡಿ. ಇನ್ನು ಸಿಎಂ ಪಟ್ಟ ಕೊಡುವುದು ಸಾಧ್ಯವಾಗದೇ ಹೋದರೆ ಪರವಾಗಿಲ್ಲ. ನಾನು ಕಾಯುತ್ತೇನೆ. ಆದರೆ ಪಕ್ಷದ ಯಾವುದೇ ಜವಾಬ್ದಾರಿಯಲ್ಲಿ ನಾನು ಇರುವುದಿಲ್ಲ. ಡಿಸಿಎಂ ಸ್ಥಾನ ಸೇರಿ ಎಲ್ಲ ಹುದ್ದೆಗಳಿಂದಲೂ ಮುಕ್ತನಾಗುತ್ತೇನೆ. ಪಕ್ಷ ವಿರೋಧಿ ಚಟುವಟಿಕೆಯನ್ನಂತೂ ಮಾಡುವುದಿಲ್ಲ ಎಂದು ಹೇಳಲು ಡಿಸೈಡ್ ಮಾಡಿದ್ದರಂತೆ. ಈ ಮಾಹಿತಿ ತರಿಸಿಕೊಂಡ ರಾಹುಲ್ ಗಾಂಧಿ ಇದನ್ನು ಹೀಗೇ ಬಿಟ್ಟರೆ ಮತ್ತೊಂದು ರಾಜಸ್ತಾನ, ಮಧ್ಯಪ್ರದೇಶ ನಿರ್ಮಾಣವಾಗಬಹುದು ಎಂದು ಆತಂಕಗೊಂಡರಂತೆ. ಅಂತಿಮವಾಗಿ ಡಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟು, ಸಿದ್ದುಗೆ ಬೈಬೈ ಎಂದರಂತೆ.
ಏಕೆಂದರೆ ದೆಹಲಿಯ ಇಂದಿರಾ ಭವನದಲ್ಲಿ ಆರಂಭದಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗಿನ ಸಭೆಯು ಕೇವಲ ಸಚಿವ ಸಂಪುಟ ಪುನಾರಚನೆ ಮತ್ತು ಆಡಳಿತಾತ್ಮಕ ವಿಷಯಗಳಿಗಷ್ಟೇ ಸೀಮಿತವಾಗಿತ್ತು. ಆದರೆ, ಮಧ್ಯಾಹ್ನ 3:30ರ ಸುಮಾರಿಗೆ ಇಡೀ ರಾಜಕೀಯ ಚಿತ್ರಣವೇ ಬದಲಾಯಿತು. ಮಧ್ಯಾಹ್ನ ರಾಹುಲ್ ಗಾಂಧಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ರಾಹುಲ್, ತಂಗಿ ಪ್ರಿಯಾಂಕಾ ಜೊತೆಯಲ್ಲೂ ಮಾತುಕತೆ ನಡೆಸಿದ್ರು. ಸಂಜೆ 4:20ಕ್ಕೆ ಪುನಃ ಸಭೆಗೆ ಆಗಮಿಸಿದ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವಯುತವಾಗಿ ‘ರಾಜ್ಯಸಭಾ ಸದಸ್ಯತ್ವದ ಆಫರ್’ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆತರುವ ಈ ತಂತ್ರದ ಹಿಂದೆ ಪ್ರಿಯಾಂಕಾ ಗಾಂಧಿ ಅವರದ್ದೇ ಮುಖ್ಯಪಾತ್ರ ಎನ್ನಲಾಗುತ್ತಿದೆ.



