Tuesday, August 18, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home News

ಬಿಜೆಪಿಯ ಹೊಸ ಟೀಂನಲ್ಲಿ ಪ್ರೊ.ನಾಗರಾಜ್ : ಸಿದ್ದರಾಮಯ್ಯಗೆ ಪ್ರತಿಶಕ್ತಿಯಾ..?

SpeciallU by SpeciallU
August 18, 2026
in News, Politics
Reading Time: 1 min read
0 0
0
ಬಿಜೆಪಿಯ ಹೊಸ ಟೀಂನಲ್ಲಿ ಪ್ರೊ.ನಾಗರಾಜ್ : ಸಿದ್ದರಾಮಯ್ಯಗೆ ಪ್ರತಿಶಕ್ತಿಯಾ..?

ಬಿಜೆಪಿಯ ಹೊಸ ಟೀಂ ಘೋಷಣೆಯಾಗಿದೆ. ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬೀನ್‌ 2029ರ ಲೋಕಸಭಾ ಚುನಾವಣೆ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದಾರೆ. ಹೊಸ ಪಟ್ಟಿಯಲ್ಲಿ ಒಟ್ಟು 65 ಪದಾಧಿಕಾರಿಗಳಿದ್ದು, ಅದರಲ್ಲಿ 51 ಮಂದಿ ಹೊಸಬರಾಗಿದ್ದಾರೆ. ಕರ್ನಾಟಕದ ಬಿ.ಎಲ್‌.ಸಂತೋಷ್‌ ಮತ್ತು ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಹೊಸ ತಂಡದಲ್ಲಿ ಸ್ಥಾನ ಪಡೆದ ಇಬ್ಬರು ಕನ್ನಡಿಗರಾಗಿದ್ದಾರೆ. ಅಂದಹಾಗೆ ಪ್ರೊ.ಎಂ ನಾಗರಾಜ್‌, ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರತಿಶಕ್ತಿಯಾಗುತ್ತಾರಾ.. ಹೀಗೊಂದು ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಒಂದೇ ಒಂದು.

ಪ್ರೊ. ಎಂ. ನಾಗರಾಜು ಅವರು ಕರ್ನಾಟಕದ ಹಿರಿಯ ರಾಜಕಾರಣಿ, ಶಿಕ್ಷಣ ತಜ್ಞ ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ (BJP) ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ. ಆಗಸ್ಟ್ 17, 2026ರಂದು ಬಿಜೆಪಿ ಕೇಂದ್ರ ಸಮಿತಿಯು ತನ್ನ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಆಗಿರುವ ನಾಗರಾಜು, ಮೂಲತಃ ಧಾರವಾಡ ಜಿಲ್ಲೆಯವರು. ರಾಜಕೀಯಕ್ಕೆ ಬರುವ ಮುನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ (RSS) ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ನಾಗರಾಜು, ಜಾತಿಯಲ್ಲಿ ಕುರುಬರು.

Related posts

ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!

ಮೋದಿಯ ʻಕ್ಲೋಸ್‌ ಫ್ರೆಂಡ್ಸ್‌ʼ ಪ್ರಧಾನಿ ನಿವಾಸದಲ್ಲೇ ಇದ್ದಾರೆ : ಯಾರು ಹೇಳಿ..?

ಹೌದು, ಇದೊಂದೇ ಒಂದು ಕಾರಣಕ್ಕೆ ನಾಗರಾಜು ಅವರು ಬಿಜೆಪಿಯಲ್ಲಿ ಸಿದ್ದರಾಮಯ್ಯ ಅವರಿಗೆ ಪರ್ಯಾಯವಾಗಿ ಬೆಳೆಯುವ ಅವಕಾಶ ಇದೆ ಎಂಬ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಬಿಜೆಪಿ ಕರ್ನಾಟಕ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ನಾಗರಾಜು, ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿ ಬೆಳೆಯುವ ಗುರಿ ಹೊಂದಿದ್ದಾರೆ. ಇವರು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವವರೂ ಹೌದು.

ಹೈವೇ ಇಂಜಿನಿಯರಿಂಗ್ (Highway Engineering) ವಿಷಯದಲ್ಲಿ ಪಿಎಚ್.ಡಿ (PhD) ಪದವಿ ಪಡೆರುವ ನಾಗರಾಜು, ಸುಮಾರು 22 ವರ್ಷಗಳಿಗೂ ಹೆಚ್ಚು ಕಾಲ ಶಿಕ್ಷಕರಾಗಿ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ದೀರ್ಘ ಅನುಭವ ಹೊಂದಿದ್ದಾರೆ. ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ (KPSC) ಸದಸ್ಯರಾಗಿಯೂ ಇವರು ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ.

ರಾಜ್ಯಸಭಾ ಸದಸ್ಯರ ಪಟ್ಟಿಯಲ್ಲಿ ಹೆಸರು ಬಂದಾಗ ಯಾರಿದು ನಾಗರಾಜ್‌ ಎಂದು ತಲೆಕೆಡಿಸಿಕೊಂಡಿದ್ದರು. ಜೂನ್ 2026ರಲ್ಲಿ ಬಿಜೆಪಿಯು ಪ್ರೊ. ಎಂ. ನಾಗರಾಜು ಅವರ ಹೆಸರನ್ನು ರಾಜ್ಯಸಭೆಗೆ ಘೋಷಿಸಿದಾಗ, ರಾಜ್ಯ ರಾಜಕಾರಣದ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಇದು ದೊಡ್ಡ ಅಚ್ಚರಿ ಮೂಡಿಸಿತ್ತು. ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ದಶಕಗಳಿಂದ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದರಾದರೂ, ಮುಂಚೂಣಿಯ ಮಾಧ್ಯಮಗಳಲ್ಲಾಗಲಿ ಅಥವಾ ಬೆಂಗಳೂರಿನ ಪ್ರಭಾವಿ ರಾಜಕೀಯ ವಲಯದಲ್ಲಾಗಲಿ ಇವರ ಹೆಸರು ಹೆಚ್ಚಾಗಿ ಕೇಳಿಬಂದಿರಲಿಲ್ಲ. ಇದನ್ನು ಸ್ವತಃ ಬಿಜೆಪಿ ರಾಜ್ಯ ಉಸ್ತುವಾರಿಗಳು ಮತ್ತು ನಾಯಕರು ಸಮರ್ಥಿಸಿಕೊಂಡು, “ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಸಾಮಾನ್ಯ ಕಾರ್ಯಕರ್ತನಿಗೆ ಹೈಕಮಾಂಡ್ ನೀಡಿದ ಉಡುಗೊರೆ ಇದು” ಎಂದು ಹೇಳಿಕೆ ನೀಡಿದ್ದರು.

ಹೆಸರು ಪ್ರಕಟವಾದ ತಕ್ಷಣ ಸಾರ್ವಜನಿಕವಾಗಿ ಇವರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿಲ್ಲದ ಕಾರಣ, “ಯಾರೀ ನಾಗರಾಜು?” ಎಂಬ ಶೀರ್ಷಿಕೆಗಳ ಅಡಿಯಲ್ಲಿ ಹಲವು ಪತ್ರಕರ್ತರು ವರದಿ ಮಾಡಿದ್ದರು. ಆರಂಭದಲ್ಲಿ ಪಕ್ಷದ ಕೆಲವು ಸ್ಥಳೀಯ ನಾಯಕರಿಗೂ ಇವರ ಹಿನ್ನೆಲೆಯ ಬಗ್ಗೆ ತಕ್ಷಣಕ್ಕೆ ಸ್ಪಷ್ಟ ಮಾಹಿತಿ ಇರಲಿಲ್ಲ ಎಂಬುದು ನಿಜ.

ಒಟ್ಟಾರೆಯಾಗಿ ಹೇಳುವುದಾದರೆ, ಅವರು ತೆರೆಮರೆಯಲ್ಲಿದ್ದು ಸಂಘಟನಾತ್ಮಕವಾಗಿ ಕೆಲಸ ಮಾಡಿದ ಹಿರಿಯ ನಾಯಕರಾಗಿದ್ದರಿಂದ, ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ ಅವರ ಆಯ್ಕೆ ದಿಢೀರ್ ಆಶ್ಚರ್ಯವನ್ನು ಉಂಟುಮಾಡಿತ್ತು.

ವಿಶೇಷ ಎಂದರೆ ಬಿಜೆಪಿಯ ಹಲವು ಉನ್ನತ ನಾಯಕರಿಗೆ ನಾಗರಾಜ್‌ ಅವರ ಮುಖ ಪರಿಚಯ ಇರಲಿಲ್ಲ. ಜೂನ್‌ ತಿಂಗಳಲ್ಲಿ ರಾಜ್ಯಸಭಾ ಸದಸ್ಯರಾಗಿ, ಇದೀಗ ಕರ್ನಾಟಕದಿಂದ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿರುವ ನಾಗರಾಜು ಅಚ್ಚರಿ ಹುಟ್ಟಿಸಿದ್ದಾರೆ.

ಅಂದಹಾಗೆ ರಾಷ್ಟ್ರೀಯ ಉಪಾಧ್ಯಕ್ಷರ ಸಂಖ್ಯೆಯನ್ನು 11ರಿಂದ 13ಕ್ಕೆ ಹೆಚ್ಚಿಸಲಾಗಿದ್ದು, ಆರ್‌ಎಸ್‌ಎಸ್‌ ಮುಖಂಡ ರಾಮ್ ಮಾಧವ್, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹಾಗೂ ಡಿ. ಪುರಂದೇಶ್ವರಿ ಉಪಾಧ್ಯಕ್ಷರ ಹೊಸ ಪಟ್ಟಿಯಲ್ಲಿದ್ದಾರೆ. ಜತೆಗೆ ಇತ್ತೀಚೆಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಎಂ. ನಾಗರಾಜ್, ಪಂಜಾಬ್‌ನ ಮನ್‌ಪ್ರೀತ್ ಸಿಂಗ್ ಬಾದಲ್ ಮತ್ತು ಅಲೀಗಢ ಮುಸ್ಲಿಂ ವಿವಿಯ ಮಾಜಿ ಉಪಕುಲಪತಿ ಪ್ರೊ. ತಾರಿಕ್ ಮನ್ಸೂರ್ ಸೇರಿದಂತೆ 9 ಹೊಸ ಮುಖಗಳಿಗೆ ಉಪಾಧ್ಯಕ್ಷ ಸ್ಥಾನ ಕಲ್ಪಿಸಲಾಗಿದೆ.

ಪಕ್ಷದ ವಿವಿಧ ಮೋರ್ಚಾಗಳಿಗೂ ಹೊಸ ಅಧ್ಯಕ್ಷರ ನೇಮಕ ಮಾಡಲಾಗಿದೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಸಂಸದ ತೇಜಸ್ವಿ ಸೂರ್ಯ ಸ್ಥಾನಕ್ಕೆ ಗುಜರಾತ್‌ನ ಹೇಮಾಂಗ್ ಜೋಶಿ ಅವರನ್ನು ನೇಮಿಸಲಾಗಿದೆ. ಮಹಿಳಾ ಮೋರ್ಚಾಗೆ ರೂಪ್ ಕುಮಾರಿ ಚೌಧರಿ, ಒಬಿಸಿ ಮೋರ್ಚಾಗೆ ಅಮರ್‌ಪಾಲ್ ಮೌರ್ಯ, ಕಿಸಾನ್ ಮೋರ್ಚಾಗೆ ಬನ್ಸಿಲಾಲ್ ಗುರ್ಜರ್, ಎಸ್‌ಸಿ ಮೋರ್ಚಾಗೆ ಶಿವೇಶ್ ಕುಮಾರ್ ರಾಮ್ ಮತ್ತು ಎಸ್‌ಟಿ ಮೋರ್ಚಾಗೆ ಮನ್ನಾಲಾಲ್ ರಾವತ್ ಅಧ್ಯಕ್ಷರಾಗಿದ್ದಾರೆ.

ಖಜಾಂಚಿಯಾಗಿ ಗೋಯಲ್‌:

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಲಾಗಿದ್ದು, ಇಡೀ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ ಏಕೈಕ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಟಿ ಸೆಲ್‌ ನಾಯಕತ್ವ ಬದಲಾವಣೆ:

ಸುದೀರ್ಘ ಕಾಲ ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯರನ್ನು ಬದಲಿಸಿ, ಛತ್ತೀಸ್‌ಗಢದ ದೀಪಕ್ ಮ್ಹಸ್ಕೆ ಅವರಿಗೆ ಐಟಿ ಹಾಗೂ ಸಾಮಾಜಿಕ ಮಾಧ್ಯಮದ ಹೊಣೆ ನೀಡಲಾಗಿದೆ. ಅನಿಲ್ ಬಲೂನಿ ರಾಷ್ಟ್ರೀಯ ಮಾಧ್ಯಮ ಸಂಚಾಲಕರಾಗಿ ಮುಂದುವರಿದಿದ್ದು, ಪ್ರದೀಪ್ ಭಂಡಾರಿ ಸೇರಿದಂತೆ ಮೂವರು ಹೊಸ ಸಹ-ಸಂಚಾಲಕರನ್ನು ನೇಮಿಸಲಾಗಿದೆ.

Tags: #ಪ್ರೊ. ಎಂ. ನಾಗರಾಜು #ನಿತಿನ್‌ ನಬೀನ್‌ #ಬಿಜೆಪಿ #ಸಿದ್ದರಾಮಯ್ಯ #Prof. M. Nagaraju #Nitin Nabin #BJP #Siddaramaiah
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!
  • ಬಿಜೆಪಿಯ ಹೊಸ ಟೀಂನಲ್ಲಿ ಪ್ರೊ.ನಾಗರಾಜ್ : ಸಿದ್ದರಾಮಯ್ಯಗೆ ಪ್ರತಿಶಕ್ತಿಯಾ..?
  • ಮೋದಿಯ ʻಕ್ಲೋಸ್‌ ಫ್ರೆಂಡ್ಸ್‌ʼ ಪ್ರಧಾನಿ ನಿವಾಸದಲ್ಲೇ ಇದ್ದಾರೆ : ಯಾರು ಹೇಳಿ..?

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!

ದೇಶದ ನಂ.1 ಬೈಕ್‌ ಈಗ  77,777 ರೂ.  ಹೀರೋ ಸ್ಪ್ಲೆಂಡರ್..!

August 18, 2026
ಬಿಜೆಪಿಯ ಹೊಸ ಟೀಂನಲ್ಲಿ ಪ್ರೊ.ನಾಗರಾಜ್ : ಸಿದ್ದರಾಮಯ್ಯಗೆ ಪ್ರತಿಶಕ್ತಿಯಾ..?

ಬಿಜೆಪಿಯ ಹೊಸ ಟೀಂನಲ್ಲಿ ಪ್ರೊ.ನಾಗರಾಜ್ : ಸಿದ್ದರಾಮಯ್ಯಗೆ ಪ್ರತಿಶಕ್ತಿಯಾ..?

August 18, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.