ಅಯೋಧ್ಯೆ ರಾಮ. ಇಲ್ಲಿ ಒಂದು ದೇವಸ್ಥಾನ ಕಟ್ಟುವುದಕ್ಕೆ ನಡೆದದ್ದು ದಿನ, ತಿಂಗಳು ವರ್ಷಗಳ ಹೋರಾಟ ಅಲ್ಲ. ದಶಕಗಳ ಹೋರಾಟವೂ ಅಲ್ಲ. 5 ಶತಮಾನಗಳಿಗೂ ಹೆಚ್ಚು ಕಾಲ ನಡೆದ ಸುದೀರ್ಘ ಹೋರಾಟ. ಇದೊಂದು ರಾಮ ಮಂದಿರಕ್ಕಾಗಿ ಅದೆಷ್ಟು ಜನ ಜೀವ ಬಿಟ್ಟಿದ್ದಾರೋ.. ಲೆಕ್ಕ ಇಟ್ಟವರಿಲ್ಲ. ಇಂತಹ ಐತಿಹಾಸಿಕ ದೇವಸ್ಥಾನ ಆರಂಭವಾಗಿ 2 ವರ್ಷ ಕಳೆಯುವ ಹೊತ್ತಿಗೆ ಇದೇ ದೇವಸ್ಥಾನದಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ಆರೋಪಿಗಳು ಸಿಕ್ಕು ಬಿದ್ದಿದ್ದಾರೆ. ಒಬ್ಬೊಬ್ಬರ ಮನೆಯಲ್ಲೂ ಕೋಟಿ ಕೋಟಿ ಆಸ್ತಿ. ಸಂಬಳ ಮಾತ್ರ ಜಸ್ಟ್ 14 ರಿಂದ 20 ಸಾವಿರ. ಅಂದಹಾಗೆ ಶ್ರೀರಾಮಚಂದ್ರನ ರಾಮರಾಜ್ಯದಲ್ಲಿ ಈ ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಇರುತ್ತಿತ್ತು ಗೊತ್ತಾ..?
ಅಯೋಧ್ಯೆಯಲ್ಲಿ ಸ್ಥಾಪಿತವಾಗಿರುವ ರಾಮಲಲ್ಲಾನ ಆ ಸುಂದರ ರೂಪವನ್ನು ನೋಡಲೆಂದೇ ಇಲ್ಲಿಗೆ ಪ್ರತಿನಿತ್ಯ ಲಕ್ಷ ಲಕ್ಷ ಭಕ್ತರು ಬರ್ತಾರೆ. ಅದು ರಾಮನ ಮೇಲಿನ ನಂಬಿಕೆ.. ಆ ರಾಮಮಂದಿರವೇ ಈಗ ವಿವಾದದ ಕೇಂದ್ರ ಬಿಂದು. ರಾಮ ಮಂದಿರಕ್ಕೆ ಪ್ರತಿನಿತ್ಯ ಭೇಟಿ ನೀಡುವ ಭಕ್ತರ ಸಂಖ್ಯೆ ಮತ್ತು ಕಾಣಿಕೆಯ ಅಧಿಕೃತ ಲೆಕ್ಕಾಚಾರಗಳನ್ನ ನೋಡಿದರೇನೇ.. ಅಬ್ಬಾ ಎನಿಸುತ್ತೆ. ಎಂಥದ್ದೇ ದಿನ ಇರಲಿ.. ಅಲ್ಲಿಗೆ ಬರುವ, ಶ್ರೀರಾಮನ ದರ್ಶನ ಪಡೆಯುವ ಭಕ್ತರು ದಿನವೊಂದಕ್ಕೆ ಒಂದರಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು. ಹಬ್ಬಹರಿದಿನಗಳಾದರಂತೂ ಮುಗಿದೇ ಹೋಯ್ತು.. ಎರಡೂವರೆ, ಮೂರು ಲಕ್ಷ ದಾಟಿಬಿಡುತ್ತದೆ. ಹೀಗೆ ಬರುವ ಭಕ್ತರು ಹಾಕುವ ಕಾಣಿಕೆಯ ಮೇಲೆ ಖದೀಮರ ಕಣ್ಣು ಬಿದ್ದಿದೆ. ದಿನವೊಂದಕ್ಕೆ ಅಯೋಧ್ಯೆಯಲ್ಲಿ ಸಂಗ್ರಹವಾಗುವ ಕಾಣಿಕೆ ಹುಂಡಿಯ ಹಣದ ಅಂದಾಜು ಲೆಕ್ಕವೇ 10 ಲಕ್ಷಕ್ಕೂ ಹೆಚ್ಚು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಟ್ರಸ್ಟ್ನ ಒಟ್ಟು ವಾರ್ಷಿಕ ಆದಾಯ ಸುಮಾರು 327 ಕೋಟಿಯಾಗಿದ್ದರೆ, ಇದರಲ್ಲಿ ಕೇವಲ ಭಕ್ತರು ನೀಡಿದ ನೇರ ಕಾಣಿಕೆ ಮತ್ತು ಉಡುಗೊರೆಗಳ ಪಾಲು 153 ಕೋಟಿ ಇದೆ. ಇಷ್ಟೊಂದು ದುಡ್ಡು ಸಂಗ್ರಹವಾಗುವ ಜಾಗದಲ್ಲಿ ಒಂದಿಷ್ಟು ಕದ್ದರೆ.. ಯಾರಿಗೂ ಗೊತ್ತಾಗಲ್ಲ ಅಂದ್ಕೊಂಡು ಕದ್ದವರು.. ಈಗ ಸಿಕ್ಕುಬಿದ್ದಿದ್ದಾರೆ. ಆ ಕಳ್ಳರ ಮಾಹಿತಿಯನ್ನೊಮ್ಮೆ ನೋಡಿಕೊಂಡು ಬಿಡಿ. ಅಂದಹಾಗೆ ಒಬ್ಬ ಕಳ್ಳನ ಹೆಸರು ಲವಕುಶ. ಶ್ರೀರಾಮನ ಮಕ್ಕಳ ಹೆಸರು.
ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳ ನಂ.1
=========================
ಲವಕುಶ ಮಿಶ್ರಾ : ಹುಂಡಿ ಎಣಿಕೆ ನೌಕರ. ಈತನ ಸಂಬಳ ಕೇವಲ 18 ಸಾವಿರ ರೂ. ಈತನ ಮನೆಯ ಗೊಬ್ಬರದ ರಾಶಿಯಲ್ಲಿ 10 ಲಕ್ಷ ಕ್ಯಾಷ್ ಸಿಕ್ಕಿದೆ. ಈತ 40 ಲಕ್ಷದ ಫ್ಲ್ಯಾಟ್ ಖರೀದಿಸಿದ್ದ. ಮತ್ತೊಂದು ಮನೆ ಖರೀದಿಸಿದ್ದ . ಕೆಲಸಕ್ಕೆ ಸೇರುವ ಮೊದಲು ಕಾರ್ ಮೆಕ್ಯಾನಿಕ್ ವೃತ್ತಿ ಮಾಡ್ತಿದ್ದವನು ಈಗ ಕೋಟಿಗೆ ಬಾಳುತ್ತಾನೆ.
ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳ ನಂ.2
=====================
ಅನುಕಲ್ಪ್ ಮಿಶ್ರಾ : ಈತನೂ ಹುಂಡಿ ಎಣಿಕೆ ನೌಕರ, ಸಂಬಳ 20 ಸಾವಿರ. ಆದರೆ ಇವನ ಮನೆಯಲ್ಲಿ ಸಿಕ್ಕ ಕ್ಯಾಷ್ 20 ಲಕ್ಷಕ್ಕೂ ಹೆಚ್ಚು. ಈತನ ಬಳಿ 65 ಲಕ್ಷದ ಮನೆ, ಹಳ್ಳಿಯಲ್ಲಿ ಫಾರ್ಮ್ ಹೌಸ್, 3 ಎಕರೆ ಜಮೀನು ಖರೀದಿಸಿದ್ದ. ಈಗ ಆರೋಪಿ ಲವ್ ಕುಶನ ಭಾವಮೈದುನ.
ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳ ನಂ.3
=====================
ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ . ಈತ ಟ್ರಸ್ಟ್ ಜನರಲ್ ಸೆಕ್ರಟರಿ ಚಂಪತ್ ರೈಗೆ ಪರಮಾಪ್ತ. ಮಂದಿರಕ್ಕೆ ಕೆಲಸಗಾರರನ್ನು ಕರೆತರುವುದು ಉದ್ಯೋಗ ಮಾಡ್ತಿದ್ದ ಇವನ ಬಳಿ ಅಯೋಧ್ಯೆ, ಲಖನೌನಲ್ಲಿ 50 ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ. ಈತ 70 ರೂಂ ಇರುವ ಹಾಸ್ಟೆಲ್, 3 ರೆಸ್ಟೋರೆಂಟ್, ಬಂಗಲೆ ಮಾಲೀಕ. ಆಟೋ ಡ್ರೈವರ್ ಆಗಿದ್ದವನು ಈಗ ಫಾರ್ಚೂನರ್ ಮಾಲೀಕನಾಗಿದ್ಧಾನೆ.
ಅಯೋಧ್ಯೆಯಲ್ಲಿ ಸಿಕ್ಕಿಬಿದ್ದ ಕಳ್ಳರ ಸಂಖ್ಯೆ ದೊಡ್ಡದು. ಅವನೀಶ್ : 5 ಲಕ್ಷ ಕ್ಯಾಷ್ ಜಪ್ತಿ ಯಾಗಿದೆ. ಇನ್ನೊಬ್ಬ ಕೆಡಿ ತಿವಾರಿ ಬಳಿಯೂ 20 ಲಕ್ಷ ಕ್ಯಾಷ್ ಸಿಕ್ಕಿದೆ. ಕರುಣ್, ರಾಜೇಶ್ ಪಾಠಕ್, ಟಿನ್ನು ಯಾದವ್ ಸಂಬಂಧಿಕ ಮನೀಶ್ ಯಾದವ್ ಹೀಗೆ ಇವರೆಲ್ಲರ ಕೆಲಸ ಏನ್ ಗೊತ್ತಾ.. ಪ್ರತಿದಿನ ಹುಂಡಿಗೆ ಬಿದ್ದ ಭಕ್ತರ ಕಾಣಿಕೆ ಹಣವನ್ನ ಲೆಕ್ಕ ಮಾಡೋದು. ಅದರಲ್ಲಿ ಸ್ವಲ್ಪ ಹಣವನ್ನ ತೆಗೆದುಕೊಳ್ಳೋದು.. ದಿನಕ್ಕೆ 8 ರಿಂದ 10 ಲಕ್ಷ ಅಧಿಕೃತವಾಗಿ ಲೆಕ್ಕಕ್ಕೆ ಕೊಟ್ಟಿದ್ಧಾರೆ ಎಂದರೆ.. ಇವರೆಲ್ಲ ಸೇರಿ ದಿನವೊಂದಕ್ಕೆ ಅದೆಷ್ಟು ಹಣವನ್ನ ಲೂಟಿ ಮಾಡಿರಬೇಕು ಲೆಕ್ಕ ಹಾಕಿ..
ಶ್ರೀರಾಮಚಂದ್ರನ ರಾಮ ರಾಜ್ಯದಲ್ಲಿ ಶಿಕ್ಷೆ ಏನು..?
ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಕಳ್ಳತನ ಮಾಡಿದ ವ್ಯಕ್ತಿಯನ್ನು ರಾಜನ ಮುಂದೆ ಹಾಜರುಪಡಿಸಬೇಕಿತ್ತು. ರಾಜನು ಸ್ವತಃ ತನ್ನ ಕೈಯಲ್ಲಿ ದೊಣ್ಣೆ ಅಥವಾ ಗದೆಯಿಂದ ಹೊಡೆಯೇಕಿತ್ತು. ದೇವಸ್ಥಾನದ ಅಥವಾ ಸಾರ್ವಜನಿಕ ನಿಧಿಯ ದುಡ್ಡು ಕದ್ದರೆ ಮರಣದಂಡನೆಯೇ ಶಿಕ್ಷೆಯಾಗಿತ್ತು. ಕಳ್ಳನ ಕೈ ಅಥವಾ ಕಾಲಿನ ಅರ್ಧ ಭಾಗವನ್ನು ಕತ್ತರಿಸುವ ಶಿಕ್ಷೆ ಇರುತ್ತಿತ್ತು. ಕಳ್ಳತನ ಮಾಡಿದ್ದವರು ಸುಶಿಕ್ಷಿತರಾಗಿದ್ದರೆ ಅಂತಹವರಿಗೆ ಸಾಮಾನ್ಯ ಕಳ್ಳರಿಗೆ ವಿಧಿಸುತ್ತಿದ್ದ ಶಿಕ್ಷೆಗಿಂತ 100 ಪಟ್ಟು ಹೆಚ್ಚು ಶಿಕ್ಷೆ ವಿಧಿಸಲಾಗುತ್ತಿತ್ತು. ಅದು ರಾಮರಾಜ್ಯ. ಈಗಿನ ಕಾನೂನುಗಳಲ್ಲಿ ಕಳ್ಳತನಕ್ಕೆ ಮರಣ ದಂಡನೆಯನ್ನಂತೂ ನೀಡೋದಿಲ್ಲ. ಕೈ ಕಾಲು ಕಟ್ ಮಾಡೋಕೆ ಕಾನೂನು ಅವಕಾಶ ಕೊಡೋದಿಲ್ಲ. ಗರಿಷ್ಠ ಎಂದರೆ ಜೈಲು ಶಿಕ್ಷೆ.. ಅಷ್ಠೇ ಇರೋದು.



