ಸಿದ್ದರಾಮಯ್ಯ ಅವರಿಗೆ ತಾವೇ ಆಡಿದ್ದ ಮಾತುಗಳು ಯಾವ್ಯಾವ ರೀತಿ ಉಲ್ಟಾ ಹೊಡೆಯುತ್ತಿವೆ ಎಂದರೆ ಅವರ ಮಾತುಗಳೇ ಅವರಿಗೆ ತಿರುಗೇಟು ಕೊಡುತ್ತಿವೆ.
ಸಿದ್ದರಾಮಯ್ಯ ಇರೋದೇ ಹಾಗೆ. ಸಿದ್ದರಾಮಯ್ಯ ತಮ್ಮ ಪಕ್ಷದ ಹಿರಿ ಕಿರಿಯ ನಾಯಕರನ್ನೆಲ್ಲ ಅತ್ಯಂತ ಬಹುವಚನದಿಂದ, ಗೌರವ ಪೂರ್ವಕವಾಗಿಯೇ ಮಾತನಾಡುತ್ತಾರೆ. ಆದರೆ ಪ್ರತಿಪಕ್ಷಗಳ ನಾಯಕರ ವಿಚಾರಕ್ಕೆ ಬಂದರೆ.. ಸಿದ್ದರಾಮಯ್ಯ ಬದಲಾಗುತ್ತಾರೆ. ಏಕ್`ದಂ ಏಕವಚನ.. ಅವನಿಗೆ ತಲೆ ಸರಿ ಇಲ್ಲ.. ಅವನಿಗೆ ಬುದ್ದಿ ಇಲ್ಲ.. ಅವನೊಬ್ಬ ದಡ್ಡ.. ಮೂರ್ಖ.. ಎನ್ನುತ್ತಲೇ ಎದುರಾಳಿಗಳ ಜನ್ಮ ಜಾಲಾಡಿ ಬಿಡುತ್ತಾರೆ.
ಒಮ್ಮೊಮ್ಮೆ ಆ ಮಾತು ವಿವಾದವಾಗುವುದೂ ಉಂಟು. ಶ್ರೀರಾಮುಲು, ಈಶ್ವರಪ್ಪ, ಯಡಿಯೂರಪ್ಪ, ಕುಮಾರಸ್ವಾಮಿ, ಮೋದಿ, ಅಮಿತ್ ಶಾರನ್ನು ಟೀಕಿಸುವಾಗ ಏಕವಚನದ ಬಳಕೆಯೂ ಹಳಿತಪ್ಪಿ, ಉಲ್ಟಾ ಹೊಡೆಯವುದೂ ಉಂಟು. ಆಗೆಲ್ಲ ಅವರ ಬಳಿ ಒಂದು ಸಿದ್ಧ ಉತ್ತರ ಇರುತ್ತದೆ. ನನ್ನದು ಆಡುಭಾಷೆ. ನಮ್ಕಡೆ ಹಿಂಗೆಯಾ ಮಾತಾಡ್ದು.. ಹಳ್ಳಿ ಭಾಸೆ.. ಹೀಗೆ ಆನ್ಸರ್ ಕೊಡುವ ಸಿದ್ದರಾಮಯ್ಯ, ವಿವಾದವಾದ ಎರಡೇ ದಿನಗಳಲ್ಲಿ ಮತ್ತದೇ ಟ್ರ್ಯಾಕ್`ಗೆ ಮರಳಿರುತ್ತಾರೆ.
ಅದಷ್ಟೇ ಅಲ್ಲ, ಇತ್ತಿಚೆಗೆ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸೋಕೆ ಹೋಗಿದ್ದಾಗ ತಮ್ಮ ಮೊಮ್ಮಗ ಧವನ್`ರನ್ನು ತಮ್ಮ ವಾರಸ್ದಾರ ಎಂದು ಘೋಷಿಸಿಬಿಟ್ಟರು. ತಮ್ಮ ಮಗ ಯತೀಂದ್ರ ಹಾಗೂ ಮೊಮ್ಮಗ ತಮ್ಮ ಉತ್ತರಾಧಿಕಾರಿಗಳು ಎಂದು ವೇದಿಕೆಯಲ್ಲೇ ಹೇಳಿದರು. ಈ ವೇಳೆ ಸಿದ್ದರಾಮಯ್ಯ ತಾವು ಜೆಡಿಎಸ್ ಬಿಟ್ಟಿದ್ದಕ್ಕೆ ಕಾರಣ ಮತ್ತು ಹೋರಾಡಿದ್ದು ವಂಶ ರಾಜಕೀಯದ ವಿರುದ್ಧ ಎಂದು ಮರೆತೇಬಿಟ್ಟರು. ನೀವು ಹೋರಾಡಿದ್ದು ವಂಶ ರಾಜಕೀಯ ಬೇಡ ಎಂದೇ ಅಲ್ವಾ.. ಎಂದು ಪ್ರಶ್ನಿಸಿದರೆ ನಾನೆಲ್ಲಿ ಹಾಗೆ ಹೇಳಿದ್ದೇನೆ ಎಂದು ಉಲ್ಟಾ ಹೊಡೆಯುವ ಕಲೆ ಸಿದ್ದರಾಮಯ್ಯ ಅವರಿಗೆ ಸರಿಯಾಗಿ ಸಿದ್ಧಿಸಿದೆ.


ಸಿದ್ದರಾಮಯ್ಯ ಅವರನ್ನು ಬೆಂಬಲಿಸುವ ಬುದ್ದಿಜೀವಿಗಳು ಉತ್ತರ ಕೊಟ್ಟರು. ಇನ್ನೂ ಚಿಕ್ಕ ಹುಡುಗ, ವಯಸ್ಸಿನ್ನೂ 17, ವೋಟು ಹಾಕುವ ವಯಸ್ಸೂ ಆಗಿಲ್ಲ. ತಿದ್ದಿಕೊಳ್ತಾನೆ, ಕನ್ನಡ ಕಲಿಯುತ್ತಾನೆ ಬಿಡಿ ಎಂದು ಟ್ರೋಲಿಗರನ್ನು ಸಮಾಧಾನ ಪಡಿಸುವ ಮಾತನ್ನಾಡಿದರು.
ಇದೆಲ್ಲಕ್ಕಿಂತ ಸಿದ್ದರಾಮಯ್ಯಗೆ ಉಲ್ಟಾ ಹೊಡೆದಿದ್ದು ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡಾಗ. ಏಕೆಂದರೆ ಇದೇ ಸಿದ್ದರಾಮಯ್ಯ ಲಕ್ಷ್ಮಣ ಸವದಿಯವರ ಸದನದೊಳಗೆ ಬ್ಲೂ ಫಿಲ್ಮ್ ಪ್ರಕರಣವನ್ನು ಅದ್ಯಾವ ರೀತಿ ಲೇವಡಿ ಮಾಡಿದ್ದರೆಂದರೆ, ಆ ಮಾತು ಈಡೇರಬೇಕೆಂದರೆ ಲಕ್ಷ್ಮಣ ಸವದಿ ರಾಜಕೀಯ ಜೀವನದಿಂದ ಹೊರಹೋಗಿ ಮನೆಯಲ್ಲಿರಬೇಕಷ್ಟೆ. ಆದರೆ ಅದೇ ಲಕ್ಷ್ಮಣ ಸವದಿಗೆ ಬಿಜೆಪಿ ಟಿಕೆಟ್ ಕೊಡದೇ ಹೋದಾಗ, ಅವರಿಗೆ ರಾಜಕೀಯ ಜೀವನ ನೀಡಿದ್ದೂ ಇದೇ ಸಿದ್ದರಾಮಯ್ಯ. ಒನ್ಸ್ ಎಗೇನ್ ಇಲ್ಲಿಯೂ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಉತ್ತರ ಕೊಡಲಿಲ್ಲ.


ಅಷ್ಟೆಲ್ಲ ಏಕೆ, ಶೆಟ್ಟರ್ ವಿಷಯದ್ಲಲೇ ನಂಬಿದವರನ್ನು ಕೈಬಿಟ್ಟರು. ಮೋಸ ಮಾಡಿದರು ಎನ್ನುವವರು ದಲಿತ ಅಖಂಡ ಶ್ರೀನಿವಾಸ ಮೂರ್ತಿಯನ್ನೇಕೆ ಕಡೆಗಣಿಸಿದಿರಿ ಎಂಬ ಪ್ರಶ್ನೆಗೂ ಉತ್ತರ ಕೊಡಲ್ಲ. ವಿಚಿತ್ರ ಮತ್ತು ವಿಪರ್ಯಾಸವೆಂದರೆ ಲಿಂಗಾಯತ, ಒಕ್ಕಲಿಗರ ವಿಚಾರಗಳಲ್ಲಿ ಎಂಟ್ರಿ ಕೊಡುವ ಶಕ್ತಿ ಮಠಗಳಿಗೆ, ಸ್ವಾಮಿಗಳಿಗೆ ಇದೆ. ಆದರೆ ಅಷ್ಟೇ ಪ್ರಬಲವಾಗಿರುವ ದಲಿತ ಸಂಘಟನೆಗಳು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂದು ಸುಮ್ಮನಿದ್ದು ಬಿಡುತ್ತಿರುವುದು. ಬಿಡಿ, ಆದರೆ ಇಲ್ಲಿಯೂ ಕಾಂಗ್ರೆಸ್ ಉತ್ತರ ಕೊಡಲ್ಲ. ಜಾಣ್ಮೆಯಿಂದ ಜಾರಿಕೊಳ್ಳುತ್ತಿದೆ.
ಅಷ್ಟೇ ಅಲ್ಲ, ಇದೀಗ ಈಶ್ವರಪ್ಪ ಅವರ ಜೊತೆ ಮೋದಿ ಮಾತನಾಡಿದ್ದನ್ನು ಪ್ರಶ್ನಿಸುತ್ತಿರುವ, ಒಬ್ಬ ಕೊಲೆಗಾರನ ಜೊತೆ ಮಾತನಾಡುತ್ತಿರುವುದು ತಪ್ಪು. ಅಪರಾಧ. ಅವಮಾನ ಎನ್ನುತ್ತಿರುವ ಕಾಂಗ್ರೆಸ್ ನಾಯಕರಾರೂ, ವಿನಯ್ ಕುಲಕರ್ಣಿ ವಿಷಯವನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಉತ್ತರ ಕೊಡದೆ ನುಣುಚಿಕೊಳ್ಳುತ್ತಿದ್ದಾರೆ. ಅಂದಹಾಗೆ ವಿನಯ್ ಕುಲಕರ್ಣಿ ಆರೋಪಿಯಾಗಿರುವುದು ಬಿಜೆಪಿ ಮುಖಂಡನ ಹತ್ಯೆ ಕೇಸಿನಲ್ಲಿ. ಆಗ ಇದೇ ವಿನಯ್ ಕುಲಕರ್ಣಿ ವಿರುದ್ಧ ಹೋರಾಟ ನಡೆಸಿದ್ದವರು ಮಾಜಿ ಬಿಜೆಪಿ ಹಾಲಿ ಕಾಂಗ್ರೆಸ್ಸಿಗ ಜಗದೀಶ್ ಶೆಟ್ಟರ್. ವಿನಯ್ ಕುಲಕರ್ಣಿ ಪ್ರಕರಣಕ್ಕೆ ಉತ್ತರ ಕೊಡುತ್ತಿಲ್ಲ.
ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿರುವ ಸಿದ್ದರಾಮಯ್ಯ, ಹಲವು ಪ್ರಶ್ನೆಗಳಿಗೆ ಉತ್ತರ ಕೊಡುತ್ತಿಲ್ಲ. ದಟ್ ಈಸ್ ಪಾಲಿಟಿಕ್ಸ್. ಹಾಗಾದರೆ ಬಿಜೆಪಿಯವರಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಗಳಿವೆಯಾ.. ಅವುಗಳನ್ನು ಇನ್ನೊಮ್ಮೆ ಕೇಳೋಣ. ಮುಂದಿನ ಭಾಗದಲ್ಲಿ..



