ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನು ಅಗಲಿ 13 ವರ್ಷಗಳಾಗಿವೆ. ಈ ಹಂತದಲ್ಲಿ ವಿಷ್ಣುವರ್ಧನ್ ಸ್ಮಾರಕಕ್ಕಾಗಿ ನಡೆದ ಹೋರಾಟಗಳು ಅದೆಷ್ಟೋ ಏನೋ.. 



ಮೈಸೂರಿನ ಹಾಲಾಳು ಗ್ರಾಮದಲ್ಲಿ ಸರ್ಕಾರ ಸ್ಮಾರಕ ನಿರ್ಮಾಣಕ್ಕೆ 5 ಎಕರೆ ಭೂಮಿ ನೀಡಿತ್ತು. ಭೂಮಿ ವ್ಯಾಜ್ಯ ಇಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ನಿರ್ಮಾಣ ಕಾರ್ಯವೂ ಆಗುತ್ತಿತ್ತು. ಕೊನೆಗೂ ಎಲ್ಲ ಕಾನೂನು ಹೋರಾಟ ಮುಗಿಸಿ ಸ್ಮಾರಕ ನಿರ್ಮಾಣ ಪೂರ್ಣಗೊಂಡಿದೆ. 5 ಎಕರೆ ಪ್ರದೇಶದಲ್ಲಿ 3 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದು ನಟ, ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಹೇಳಿದ್ದಾರೆ.
ಸ್ಮಾರಕದಲ್ಲಿ ಏನೆಲ್ಲ ಇರಲಿದೆ?

ಸ್ಮಾರಕದ ಎದುರು ವಿಭೂತಿ ಧಾರಿಯಾಗಿರುವ ವಿಷ್ಣುವರ್ಧನ್ ಅವರ 6 ಅಡಿ ಎತ್ತರದ ಪ್ರತಿಮೆ ಸ್ವಾಗತಿಸಲಿದೆ. ಸ್ಮಾರಕದಲ್ಲಿ ಫೋಟೋಗ್ಯಾಲರಿ ಇದ್ದು, ವಿಷ್ಣುವರ್ಧನ್ ಅವರ 600 ಅಪರೂಪದ ಚಿತ್ರಗಳಿರುತ್ತವೆ. ವಿಷ್ಣುವರ್ಧನ್ ಬಳುಸುತ್ತಿದ್ದ ಕೆಲವು ವಸ್ತುಗಳನ್ನೂ ನೋಡಬಹುದು ಸ್ಮಾರಕದಲ್ಲಿ ಒಂದು ಸಭಾಂಗಣವಿದ್ದು, ಇಲ್ಲಿ ನಾಟಕ ಹಾಗೂ ಸಿನಿಮಾಗಳ ಪ್ರದರ್ಶನಕೆಕ ಅವಕಾಶವಿದೆ. ಜೊತೆಗೆ ರಂಗ ತರಬೇತಿ ಕೇಂದ್ರವೂ ಇರಲಿದೆ.
ಸಭಾಂಗಣದಲ್ಲಿಯೇ ಕಚೇರಿ ಹಾಗೂ ಎರಡು ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್, ಸುಸಜ್ಜಿತ ಶೌಚಾಲಯಗಳು, ಕ್ಲಾಸ್ ರೂಂ, ಕ್ಯಾಂಟೀನ್, ಸುಂದರವಾದ ಕಾರಂಜಿ, ಉದ್ಯಾನವನ ಎಲ್ಲವೂ ಇರಲಿವೆ.
ಸ್ಮಾರಕಕ್ಕೆ ಶ್ರಮಿಸಿದವರು..!
ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದಿದ್ದು ಅಭಿಮಾನ್ ಸ್ಟುಡಿಯೋದಲ್ಲಿ. ಆದರೆ ಹಲವು ಕಾರಣಗಳಿಂದ ಅದು ಈಡೇರಲಿಲ್ಲ. ವಿವಾದ ತಾರಕಕ್ಕೇರಿ ಭಾರತಿ ಮತ್ತು ವಿಷ್ಣುವರ್ಧನ್ ಅಭಿಮಾನಿಗಳ ನಡುವಿನ ಸಂಘರ್ಷಕ್ಕೂ ಕಾರಣವಾಗಿತ್ತು.









