ಕರ್ನಾಟಕ ರಾಜಕೀಯ ಚುನಾವಣೆಯೆಂಬ ರಣರಂಗಕ್ಕೆ ಸಿದ್ಧವಾಗುತ್ತಿರುವಾಗಲೇ ಬಿಜೆಪಿಯಲ್ಲೊಂದು ತಳಮಳ. ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗುತ್ತಿದೆ ಎಂಬುದಕ್ಕೆ ಕೌಂಟರ್ ಅಟ್ಯಾಕ್ ಮಾಡಲು ಅವರ ಬಳಿ ಏನೂ ಅಸ್ತ್ರವಿಲ್ಲ. ಯಡಿಯೂರಪ್ಪ ಅವರೇನೋ ಪಕ್ಷದ ಸಮಾವೇಶಗಳಲ್ಲಿ ಮಾತನಾಡುತ್ತಿದ್ದಾರೆ. ಆದರೆ ಆಕ್ಟಿವ್ ಆಗುವುದಕ್ಕೆ ಬೇಕಾದ ಸ್ವಾತಂತ್ರ್ಯ ಮತ್ತು ಅಧಿಕಾರ ಎರಡೂ ಇರುವಂತೆ ಕಾಣುತ್ತಿಲ್ಲ. ಮೋದಿ ಮೆಚ್ಚುತ್ತಾರೆ. ಅಮಿತ್ ಶಾ ಹೊಗಳ್ತಾರೆ. ಕಟೀಲು, ಬಿ.ಎಲ್.ಸಂತೋಷ್, ಸಿ.ಟಿ.ರವಿ ಮೊದಲಾದವರೆಲ್ಲ ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಇರೋಕ್ ಸಾಧ್ಯವಾ.. ಎಂದು ಮಾತನಡುತ್ತಾರೆ. ಆದರೆ ಮಾತು ಕೃತಿಗೆ ಬರುವಾಗ ಮಾತ್ ಮಾತಲ್ಲೇ ಇರುತ್ತೆ.


ಜೆಡಿಎಸ್ನಲ್ಲಿಯೂ ಯಡಿಯೂರಪ್ಪ ಅವರಿಗೆ ಆಗಿರುವುದು ಸಂಭ್ರಮ ಹೆಚ್ಚಿಸಿದೆ.
ಚಿಂತೆಯಾಗಿರುವುದು ರಾಜ್ಯ ಬಿಜೆಪಿ ನಾಯಕರಿಗೆ. ಬಿಜೆಪಿಯಲ್ಲಿ ಒಂದು ಭಾಷಣ, ಒಂದು ರ್ಯಾಲಿ, ಒಂದು ಸಮಾವೇಶದ ಮೂಲಕ ಮತದಾರರನ್ನು ಪೋಲರೈಸ್ ಮಾಡುವ ಇನ್ನೊಬ್ಬ ಸ್ಥಳೀಯ ನಾಯಕ ಬಿಜೆಪಿಯಲ್ಲಿಲ್ಲ. ಯಡಿಯೂರಪ್ಪ ಏನೂ ಮಾಡದೆ ಸ್ವಲ್ಪ ಮೌನವಾದರೂ ಸಾಕು, ಬುಟ್ಟಿಯೊಳಗಿನ ಮತಗಳೂ ಹಾರುತ್ತವೆ ಎಂಬ ಭಯ ಬಿಜೆಪಿಯವರದ್ದು. ಯಡಿಯೂರಪ್ಪ ಇದ್ದಿದ್ದರೆ ಈ ಲಿಂಗಾಯತರ ಹೋರಾಟವನ್ನು ಮನವೊಲಿಸಿ ಶಮನ ಮಾಡುತ್ತಿದ್ದರು. ಹೀಗೆ ಸುಡುವ ಬೆಂಕಿಯಾಗುತ್ತಿರಲಿಲ್ಲ ಎನ್ನುವ ಮಾತನ್ನು ಖುದ್ದು ಬಿಜೆಪಿಯವರೂ ಒಪ್ಪುತ್ತಾರೆ. ಯಡಿಯೂರಪ್ಪ ಹೋದಲ್ಲಿ ಬಂದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ. ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಗುಡುಗುತ್ತಾರೆ. ವಿಜಯೇಂದ್ರ ಯಡಿಯೂರಪ್ಪ ನಮ್ಮನ್ನೇನು ಸೈಡ್ ಲೈನ್ ಮಾಡಿಲ್ಲ ಎನ್ನುತ್ತಾರೆ. ಆದರೆ ಅದನ್ನು ನಂಬುವುದು ಹೇಗೆ? ಈ ಅಪನಂಬಿಕೆಯಲ್ಲಿರುವಾಗಲೇ ಮೋದಿ ಮತ್ತು ಬಿಎಸ್ವೈ ಮಧ್ಯೆ 15 ನಿಮಿಷಗಳ ಮೀಟಿಂಗ್ ಆಗಿದೆ. ದೆಹಲಿಯಲ್ಲಿ.







