ಮೊದಲಿಗೆ ಕುಮಾರಸ್ವಾಮಿ (HD Kumaraswamy) ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ (JDS+Congress govt) ಮೈತ್ರಿ ಸರ್ಕಾರ. ಆ ಸರ್ಕಾರದ ಪತನಕ್ಕೆ ಕುಮಾರಸ್ವಾಮಿ ಹೇಗೆ ಕಾರಣರೋ.. ರಮೇಶ್ ಜಾರಕಿಹೊಳಿ ಕೂಡಾ ಅಷ್ಟೇ ಕಾರಣ. ರಮೇಶ್ ಜಾರಕಿಹೊಳಿಗೆ (Ramesh jarakiholi) ಲಕ್ಷ್ಮೀ ಹೆಬ್ಬಾಳ್ಕರ್ (Lakshmi hebbalkar) ಮೇಲೆ ಆಕ್ರೋಶವಿತ್ತು. ಆ ಆಕ್ರೋಶ ಕೊನೆಗೆ ಕುಮಾರಸ್ವಾಮಿ ಅವರ ಸರ್ಕಾರವನ್ನೇ ಬಲಿ ತೆಗೆದುಕೊಂಡಿದ್ದು ಇತಿಹಾಸ.
ಅದಾದ ಮೇಲೆ ರಮೇಶ್ ಜಾರಕಿಹೊಳಿ ಯಡಿಯೂರಪ್ಪ (BS yaddyurappa) ಸರ್ಕಾರದಲ್ಲಿ ಸಚಿವರಾದರೂ, ಅಧಿಕಾರ ಇದ್ದ ಅಷ್ಟೂ ದಿನ ಬೆಳಗಾವಿಯ ಬೆಂಕಿ ಯಡಿಯೂರಪ್ಪ ಅವರನ್ನು ಸುಡುತ್ತಲೇ ಇತ್ತು. ರಮೇಶ್ ಜಾರಕಿಹೊಳಿ ವಿಷಯದಲ್ಲಿ ಆಡಿಯೋ, ವಿಡಿಯೋಗಳು ಹೊರಬಂದು ಸರ್ಕಾರದ ಘನತೆಗೂ ಪೆಟ್ಟು ಬಿತ್ತು. ಅದಾದ ಮೇಲೆ ಬಸವರಾಜ ಬೊಮ್ಮಾಯಿ (Basavarja bommai) ಸಿಎಂ ಆದರು. ಅವರಿಗೆ ಡಬಲ್ ಕಾಟ. ರಮೇಶ್ ಜಾರಕಿಹೊಳಿ ಜೊತೆಗೆ ಕೊನೆಯಲ್ಲಿ ಸಿಡಿದೆದ್ದು ಹೋದ ಲಕ್ಷ್ಮಣ ಸವದಿ. ಒನ್ಸ್ ಎಗೇನ್ ಬೆಳಗಾವಿ ಜಿಲ್ಲಾ ರಾಜಕಾರಣ ಬೊಮ್ಮಾಯಿಗೂ ಕಾಟವಾಗಿದ್ದು ಸುಳ್ಳಲ್ಲ. ಇದೀಗ ಸಿದ್ದರಾಮಯ್ಯ ಅವರಿಗೂ ಬೆಳಗಾವಿಯೇ ಸಮಸ್ಯೆಯಾಗುವ ಸೂಚನೆ ಕೊಟ್ಟಿದೆ.
ಇದು ಸಿದ್ದರಾಮಯ್ಯ ಅವರಿಗೆ ಮುಳ್ಳಾಗುವ ಸಮಸ್ಯೆಯೋ.. ವರವಾಗುವ ಸಮಸ್ಯೆಯೋ.. ಒಂದಿಷ್ಟು ಗೊಂದಲ ಇದೆಯಾದರೂ, ಸದ್ಯಕ್ಕೆ ಹೊರಗಿನಿಂದ ನೋಡುವವರಿಗೆ ಮುಳ್ಳಾಗಿರುವುದು ಸುಳ್ಳಲ್ಲ. ಇಲ್ಲಿಯೂ ಲಕ್ಷ್ಮೀ ಹೆಬ್ಬಾಳ್ಕರ್ (Lakshmi hebbalkar) ಅವರೇ ಮೂಲ.
ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಭಾಳ್ಕರ್ ನಡುವಿನ ಪ್ರತಿಷ್ಠೆ, ಜಿಲ್ಲೆಯಲ್ಲಿ ಹಿಡಿತ ಸಾಧಿಸುವ ಹಠವೇ ಎಲ್ಲದಕ್ಕೂ ಕಾರಣ ಎನ್ನಲಾಗುತ್ತಿದೆ. ಆದರೆ ಜಾರಕಿಹೊಳಿ ಬೆನ್ನಿಗೆ ಸಿದ್ದರಾಮಯ್ಯ (CM siddaramaiah) ಹಾಗೂ ಜಾರಕಿಹೊಳಿಯವರ (jarakiholi family) ನಾಯಕ ಸಮುದಾಯ (ST community ) ಇದ್ದರೆ, ಲಕ್ಷ್ಮೀ ಹೆಬ್ಬಾಳ್ಕರ್ ಬೆನ್ನ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ (DK shivakumar) ಹಾಗೂ ಲಿಂಗಾಯತ ಸಮುದಾಯ (Lingayath community) ಇದೆ. ಸಮಸ್ಯೆ ಇರುವುದೇ ಇಲ್ಲಿ. ಸತೀಶ್ ಜಾರಕಿಹೊಳಿ ನನ್ನ ಮೌನವನ್ನು ವೀಕ್ʻನೆಸ್ ಎಂದು ಭಾವಿಸಬೇಡಿ ಎನ್ನುತ್ತಿದ್ದರೆ, ಲಕ್ಷ್ಮೀ ಹೆಬ್ಬಾಳ್ಕರ್ ಕೂಡಾ ನನ್ನ ಮೌನವನ್ನೂ ವೀಕ್ʻನೆಸ್ ಎಂದು ಪರಿಗಣಿಸಬೇಡಿ ಎನ್ನುತ್ತಿದ್ದಾರೆ. ಈಗ ಯಾರು ಯಾರಿಗೆ ವೀಕ್ʻನೆಸ್ ಆಗಿದ್ಧಾರೆ ಎನ್ನುವುದೇ ಗೊಂದಲ.
ಸತೀಶ್ ಜಾರಕಿಹೊಳಿ : ಬಿಜೆಪಿ, ಜೆಡಿಎಸ್ ಗಳಲ್ಲಿ ಗುಂಪಿರುವ ಹಾಗೆ ಸ್ವಾಭಾವಿಕವಾಗಿ ನಮ್ಮಲ್ಲೂ ಗುಂಪಿದೆ. ಇಲ್ಲಾ ಅಂತೇನಿಲ್ಲ. ಜಿಲ್ಲೆಯಲ್ಲಿ ನಮ್ಮದು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರದು ಬೇರೆ, ಬೇರೆ ಗುಂಪು ಇದ್ದರೂ ಚುನಾವಣೆ ಬಂದಾಗ ಒಂದಾಗುತ್ತೇವೆ. ಈಗಿನ ಹೇಳಿಕೆಗಳೂ ಅಷ್ಟೆ, ಸಂದೇಶ ಏನೂ ಇಲ್ಲ. ನಾವೆಲ್ಲ ಕೂಡಿ ಇದ್ದೇವೆ. ಪಕ್ಷದಲ್ಲಿ ಯಾವ ಗೊಂದಲ ಇಲ್ಲ. ಚಮಕ್ ಕೊಟ್ಟು ಮುಂದುವರಿಸಬೇಕು ಅಷ್ಟೆ. ಮೆಜಾರಿಟಿ ಜನ ನಮ್ಮ ಜತೆಗೆ ಇರುತ್ತಾರೆ. ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸುವ ಕೆಲಸ ಬೇಡ. ಸಿಎಂ ಇದ್ದಾರೆ, ಅಧ್ಯಕ್ಷರಿದ್ದಾರೆ, ಸಮಸ್ಯೆ ಇದ್ದರೆ ಅವರ ಗಮನಕ್ಕೆ ತರುತ್ತೇವೆ. ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ನಾನು ಸೀರಿಯಸ್ ಆಗಿರಲಿಲ್ಲ. ಸರ್ಕಾರದಲ್ಲಿ ಎಲ್ಲವೂ ನಾವು ಹೇಳಿದಂತೆ ಆಗಬೇಕಂತಿಲ್ಲ, ಒಂದೊಂದು ಸಲ ಫೇಲ್ ಆಗುತ್ತೆ. ಎಲ್ಲರ ಮಾತನ್ನೂ ನಾಯಕರು ಕೇಳಬೇಕಾಗುತ್ತೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರದ್ದು, ನಮ್ಮದು ಏನೂ ಇಲ್ಲ. ಸುತ್ತಿ ಬಳಸಿ ಯಾಕೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ತೆಗೆಯುತ್ತೀರಾ?. ಲಕ್ಷ್ಮೀ ಹೆಬ್ಬಾಳ್ಕರ್ಗೆ ವಿರೋಧ ಮಾಡೋದಾದರೆ ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಗೆ ವಿರೋಧ ಮಾಡುತ್ತಿರಲಿಲ್ಲ. ನಾವು ಸ್ಟ್ರಾಂಗೂ ಇರಲ್ಲ, ವೀಕೂ ಇರಲ್ಲ. ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ. ಚಮಕ್ ಕೊಟ್ಟು ಮುಂದುವರಿಯಬೇಕು ಅಷ್ಟೆ. ಸ್ವಲ್ಪ ಗಾಳಿ ಬಿಟ್ಟಾಗ ವಿಮಾನ ಅಲುಗಾಡುತ್ತೆ. ಈಗ ಅಲುಗಾಡಿ ಶಾಂತವಾಗಿದೆ. ರಾಜಕೀಯದಲ್ಲಿ ಎಲ್ಲವೂ ನಡೆಯುತ್ತೆ.
ಲಕ್ಷ್ಮೀ ಹೆಬ್ಬಾಳ್ಕರ್ : ನನ್ನ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಲೇ ನನ್ನ ಮೌನವೂ ವೀಕ್ನೆಸ್ ಅಲ್ಲ. ನಾವೂ ಅವರೂ ಬಹಳ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು ಮೈಸೂರಿಗೆ ಹೋಗಲು ಪ್ಲಾನ್ ಮಾಡಲಾಗಿತ್ತು. ಸತೀಶ್ ಜಾರಕಿಹೊಳಿ ನನ್ನನ್ನು ಕರೆದಿದ್ದರು. ನನ್ನ ಟಿಕೆಟ್ ಕೂಡ ಬುಕ್ ಮಾಡಿದ್ದರು. ಆದರೆ ಸಕ್ಕರೆ ಕಾರ್ಖಾನೆ ಬಾಯ್ಲರ್ ಪೂಜೆ ಹಿನ್ನೆಲೆಯಲ್ಲಿ ನಾನು ಹೋಗಲಿಲ್ಲ. ನೆಕ್ಸ್ಟ್ ಎಪಿಸೋಡ್ ಸತೀಶ್ ಅವರನ್ನೇ ಕೇಳಿ.
Conclussion
ಇಷ್ಟೆಲ್ಲ ಆದ ನಂತರ ಇಬ್ಬರೂ ಬೆಳಗಾವಿಗೆ ಒಟ್ಟಿಗೇ ವಿಮಾನ ಪ್ರಯಾಣ ಮಾಡುವುದರೊಂದಿಗೆ ಸದ್ಯಕ್ಕೆ ಮುಕ್ತಾಯವಾಗಿದೆ. ಮುಂದಿನ ಭಾಗದಲ್ಲಿ..



