ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ವಿಧೇಯಕ (Women reservation bill) ನಾರಿ ಶಕ್ತಿ ವಂದನ್ ಮಸೂದೆ (nari shakthi vandana) ಅಂಗೀಕಾರವಾಗಿದೆ. ಲೋಕಸಭೆಯಲ್ಲಿ (Loksabha) ಸ್ಲಿಪ್ ಮತದಾನದಲ್ಲಿ ಮಸೂದೆಯನ್ನು ಬೆಂಬಲಿಸಿ 454 ಹಾಗೂ ವಿರುದ್ಧವಾಗಿ 2 ಮತಗಳು ಚಲಾವಣೆಯಾದವು. ರಾಜ್ಯಸಭೆಯಲ್ಲೂ (rajyasabha) ಮಸೂದೆಗೆ ಗ್ರೀನ್ಸಿಗ್ನಲ್ ಸಿಕ್ಕ ಬಳಿಕ ರಾಷ್ಟ್ರಪತಿಗಳ (president of bharath) ಅನುಮೋದನೆಗೆ ಹೋಗಲಿದೆ. ರಾಷ್ಟ್ರಪತಿಗಳ ಒಪ್ಪಿಗೆ ದೊರೆತ ಬಳಿಕ ಇದು ಕಾನೂನಾಗಿ ರೂಪುಗೊಳ್ಳಲಿದೆ. ಮಸೂದೆ ಮೇಲಿನ ಚರ್ಚೆಯಲ್ಲಿ 60 ಸಂಸದರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಂದಹಾಗೆ ಇದು ನನ್ನ ಪತಿ ಕನಸು ಕಂಡಿದ್ದ ಮಸೂದೆಯಾಗಿತ್ತು ಎಂದರು (Sonia gandhi) ಸೋನಿಯಾ ಗಾಂಧಿ.
ವಾಸ್ತವದಲ್ಲಿ ಸಂಸತ್ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡುವ ಮಸೂದೆ ಮೊದಲ ಬಾರಿಗೆ ಮಂಡನೆಯಾಗಿದ್ದು ದೇವೇಗೌಡರು ಪ್ರಧಾನಿಯಾಗಿದ್ದಾಗ. ಹಾಗಾದರೆ ಸೋನಿಯಾ ಸುಳ್ಳು ಹೇಳಿದರಾ ಎನ್ನುವಂತಿಲ್ಲ. ಸೋನಿಯಾ ಗಾಂಧಿಯವರ ಪತಿ ರಾಜೀವ್ ಗಾಂಧಿ (Rajeev gandhi) ತರಲು ಬಯಸಿದ್ದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕುರಿತಂತೆ. ರಾಜೀವ್ ಕಾಲದಲ್ಲಿ ಮಂಡನೆಯಾಗಿದ್ದ ಮಸೂದೆಯಲ್ಲಿ ವಿಧಾನಸಭೆ, ಲೋಕಸಭೆಗಳ ಪ್ರಸ್ತಾಪವೂ ಇರಲಿಲ್ಲ. ಆದರೆ ಸಂಪೂರ್ಣ ಪ್ರಚಂಡ ಬಹುಮತ ಇದ್ದರೂ, ಆ ಮಸೂದೆಗೆ ಗೆಲುವು ಸಿಗಲಿಲ್ಲ. ಕೊನೆಗೆ ಅದು ಜಾರಿಯಾಗಿದ್ದು ಪಿವಿ ನರಸಿಂಹರಾವ್ (PV Narasimha rao) ಪ್ರಧಾನಿ ಆಗಿದ್ದಾಗ.
ದೇವೇಗೌಡರು (HD Devegowda) ಪ್ರಧಾನಿಯಾಗಿದ್ದಾಗ ಈ ಮಸೂದೆ ಮೊದಲ ಬಾರಿ ಮಂಡನೆಯಾಯಿತಾದರೂ, ಅವರ ಜೊತೆಯಲ್ಲೇ ಇದ್ದ ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಲಾಲೂ ಪ್ರಸಾದ್ ಯಾದವ್ ವಿರೋಧಿಸಿದ್ದರು. ಲಾಲೂ ಅವರಂತೂ ಇದು ಜಾರಿಯಾದರೆ ನನ್ನ ಹೆಣದ ಮೇಲೆ ಎಂದಿದ್ದರು. ಈಗ ಇವರೆಲ್ಲರೂ ಸ್ವಾಗತ ಮಾಡಿದ್ದಾರೆ, ಅದು ಬೇರೆಯ ವಿಷಯ.
ಕೊನೆಗೆ ದೇವೇಗೌಡರು ಮಂಡಿಸಿದ್ದ ಮಹಿಳಾ ಮೀಸಲಾತಿ ಸೋತು, ಅದನ್ನು ಮತ್ತೆ ಮಂಡಿಸಿದ್ದು ವಾಜಪೇಯಿ. ಸತತವಾಗಿ 4 ಬಾರಿ ಪ್ರಯತ್ನ ಪಟ್ಟರೂ, ವಾಜಪೇಯಿ ಅವರಿಗೂ ಗೆಲುವು ಸಿಗಲಿಲ್ಲ. ಏಕೆಂದರೆ ಮಸೂದೆ ಜಾರಿಗೆ ಮೂರನೇ ಎರಡರಷ್ಟು ಸಮ್ಮತಿ ಬೇಕಿತ್ತು. ದೇವೇಗೌಡರಿಗಾಗಲೀ, ವಾಜಪೇಯಿ ಅವರಿಗಾಗಲೀ ಸಂಪೂರ್ಣ ಬಹುಮತದ ಸರ್ಕಾರ ಸಿಕ್ಕಿರಲಿಲ್ಲ. ಬೇರೆಯವರ ಮರ್ಜಿಗೆ ಕಾಯಲೇಬೇಕಿತ್ತು.
ಆ ಕಾಲ ಮುಗಿದ ಮೇಲೆ ಮನಮೋಹನ್ ಸಿಂಗ್ ಎರಡು ಬಾರಿ ಪ್ರಧಾನಿಯಾದರಾದರು. ಎರಡು ಬಾರಿಯೂ ಪ್ರಯತ್ನ ಪಟ್ಟರು. ಆದರೆ ಆಗಲೂ ನಿತೀಶ್, ಲಾಲೂ, ಮುಲಾಯಂ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ವಿರೋಧಿಸಿದ್ದವು. ವಿಶೇಷವೆಂದರೆ ಆಗ ಪ್ರತಿಪಕ್ಷವಾಗಿದ್ದ ಬಿಜೆಪಿ ಅದಕ್ಕೆ ಬೆಂಬಲ ಕೊಟ್ಟಿತ್ತು. ಆದರೂ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗಲೇ ಇಲ್ಲ. ಏಕೆಂದರೆ ಮೂರನೇ ಎರಡರಷ್ಟು ಮತ ಸಿಗುವ ನಂಬಿಕೆ ಕಾಂಗ್ರೆಸ್ಸಿಗೆ ಇರಲಿಲ್ಲ. ಇದೀಗ ದೇವೇಗೌಡರು ಪ್ರಧಾನಿಯಾಗಿದ್ದಾಗ ಮೊದಲ ಬಾರಿ ಮಂಡಿಸಿದ್ದ ಶೇ.33ರ ಮೀಸಲಾತಿ ಮಸೂದೆ ಅಂಗೀಕೃತವಾಗಿದೆ. ಆದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಏಕೆಂದರೆ ಮೊದಲಿಗೆ ಇದು ಜಾರಿಯಾಗುವುದಕ್ಕೆ ಇನ್ನೂ ಪ್ರಕ್ರಿಯೆಗಳಿವೆ.
ಜಾರಿಯಾಗುವ ಮುನ್ನ ಏನೇನೆಲ್ಲ ಆಗಬೇಕು?
ಲೋಕಸಭೆಯಲ್ಲಷ್ಟೇ ಅಲ್ಲ, ರಾಜ್ಯಸಭೆಯಲ್ಲೂ ಮಸೂದೆ ಅಂಗೀಕಾರವಾಗಬೇಕು. ಆಗುವ ಸೂಚನೆ ಇದೆ. ಅದಾದ ಮೇಲೆ ಅದೇ ಮಸೂದೆಯನ್ನು ದೇಶದ 30 ರಾಜ್ಯಗಳ ಪೈಕಿ, ಶೇ.50ರಷ್ಟು ರಾಜ್ಯಗಳು ಒಪ್ಪಿಕೊಳ್ಳಬೇಕು. ಅಲ್ಲಿಯ ವಿಧಾನಸಭೆಗಳಲ್ಲಿ ಮಂಡನೆಯಾಗಿ ಅಂಗೀಕೃತವಾಗಬೇಕು. ಅದಾದ ಮೇಲೆ ಮಸೂದೆ ರಾಷ್ಟ್ರಪತಿಗಳ ಅಂಗೀಕಾರ ಪಡೆಯಬೇಕು. ಅದಾದ ಮೇಲೆಯೂ ಕೂಡಾ ಪ್ರಕ್ರಿಯೆಗಳಿವೆ. ಕ್ಷೇತ್ರ ಪುನರ್ ವಿಂಗಡಣೆ ಆಗುವ ಮೊದಲು ಮೀಸಲಾತಿ ಬದಲಿಸುವ ಹಾಗಿಲ್ಲ. ಅಕಸ್ಮಾತ್ ಹೋದರೆ ಯರಾದರೂ ಅದನ್ನು ಪ್ರಶ್ನಿಸಿ ಕೋರ್ಟಿಗೆ ಹೋದರೆ, ಸಂವಿಧಾನದ ಪ್ರಕಾರವೇ ಮೀಸಲಾತಿ ಕಾನೂನು ನಿಲ್ಲಲ್ಲ. ಅಮಿತ್ ಶಾ ಹೇಳಿದ್ದರಲ್ಲಿ ಸತ್ಯವಿದೆ. ಸ್ಸೋ.. ಮೀಸಲಾತಿ ಪ್ರಕ್ರಿಯೆ ನಡೆಯಬೇಕು ಎಂದರೆ ಈಗ ನಡೆಯುತ್ತಿರುವ ದೇಶದ ಜನಗಣತಿ ಮುಗಿಯಬೇಕು. ಅದು ಮುಗಿಯುವುದಕ್ಕೆ 2027 ಆಗಬಹುದು. ಆಗಿನ ಅಂಕಿ ಅಂಶ ಆಧರಿಸಿ ಹೊಸ ಮೀಸಲಾತಿ ಘೋಷಣೆಯಾಗಲಿದೆ. ಅಲ್ಲಿಯವರೆಗೂ.. ಇದು ಜಾರಿ ಅಸಾಧ್ಯ.



