ತೆಲುಗು ಚಿತ್ರರಂಗದ ಖ್ಯಾತ ಸ್ಟಾರ್ ನಿರ್ಮಾಪಕ ಅಲ್ಲು ಅರವಿಂದ್ (Allu arvavind) ಮತ್ತೊಮ್ಮೆ ವಿವಾದಕ್ಕೀಡಾಗಿದ್ಧಾರೆ. ಯಶ್ (Yash) ಕುರಿತ ಅಲ್ಲು ಅರವಿಂದ್ ಹೇಳಿಕೆ ಯಶ್ ಅಭಿಮಾನಿಗಳನ್ನು ಕೆರಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಅಲ್ಲು ಅರವಿಂದ್ ಮಾತಿಗೆ ಟೀಕೆಗಳ ಸುರಿಮಳೆಯೇ ಆಗುತ್ತಿದೆ. ಆದರೆ ಇದು ಕಾಂಟ್ರವರ್ಸಿ ಅಲ್ಲ, ಇದ್ದದ್ದನ್ನು ಇದ್ದಂತೆಯೇ ಹೇಳಿದ್ಧಾರೆ ಎಂಬ ಮಾತೂ ಕೇಳಿ ಬರುತ್ತಿದೆ.
ಅಲ್ಲು ಅರವಿಂದ್ ಮೆಗಾಸ್ಟಾರ್ ಚಿರಂಜೀವಿ (megastar) ಕುಟುಂಬಕ್ಕೆ ಸಂಬಂಧಿಕರು. ಅಲ್ಲು ಅರ್ಜುನ್ (allu arjun) ಅವರ ತಂದೆ. ಈ ಎಲ್ಲ ಕಾರಣಗಳೂ ಸೇರಿ ಅಲ್ಲು ಅರವಿಂದ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಆದರೆ ಅಲ್ಲು ಅರವಿಂದ್ ಹೇಳಿದ ಮಾತಿನ ಅರ್ಥವೇ ಬೇರೆ. ಕೆಲವು ಅಭಿಮಾನಿಗಳು ಅರ್ಥ ಮಾಡಿಕೊಂಡಿದ್ದೇ ಬೇರೆ ಎಂಬ ಮಾತು ಚರ್ಚೆಯಾಗುತ್ತಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ನಡೆದ ‘ಕೋಟಬೊಮ್ಮಲಿ ಪಿಎಸ್’ (kotabomali PS) ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಿರ್ಮಾಪಕ ಅಲ್ಲು ಅರವಿಂದ್ ಭಾಗಿ ಆಗಿದ್ದರು. ಇದೇ ವೇಳೆ ಸ್ಟಾರ್ ನಟರ ಸಂಭಾವನೆ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಅರವಿಂದ್ ಉತ್ತರಿಸಿದ್ದರು. ಆಗ ಅಲ್ಲು ಅರವಿಂದ್ ಅವರ ಬ್ಯಾನರ್ ಇತ್ತೀಚೆಗೆ ಸಣ್ಣ ಬಜೆಟ್ ಚಿತ್ರಗಳನ್ನಷ್ಟೇ ಮಾಡ್ತಾ ಇದೆ. ದೊಡ್ಡ ಬಜೆಟ್ ಸಿನಿಮಾಗಳಿಲ್ಲ ಏಕೆ ಎನ್ನುವ ಪ್ರಶ್ನೆ ಎದುರಾಯಿತು. ಕಲಾವಿದರ ದುಬಾರಿ ಸಂಭಾವನೆಯೇ ಇದಕ್ಕೆಲ್ಲ ಕಾರಣವೇ ಎಂಬ ಪ್ರಶ್ನೆಯೂ ಎದುರಾಯಿತು. ಆಗ ಉತ್ತರ ನೀಡುತ್ತಾ ಅಲ್ಲು ಅರವಿಂದ್ ʻʻಇತ್ತೀಚೆಗೆ ಹೆಚ್ಚಾದ ಸಿನಿಮಾ ಬಜೆಟ್ನಲ್ಲಿ ಹೀರೋಗಳು ಗರಿಷ್ಠ 20 ರಿಂದ 25%ರಷ್ಟು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ. ಹಾಗಾಗಿ ಹೀರೋಗಳಿಂದ ಖರ್ಚು ಹೆಚ್ಚುತ್ತದೆ ಎಂದು ಹೇಳುವುದಕ್ಕಿಂತ, ನಿರ್ಮಾಣ ವೆಚ್ಚ ಹೆಚ್ಚಿಸಿದ ಸಿನಿಮಾಗಳಲ್ಲಿ ಹೀರೋಗಳು ಇರ್ತಾರೆ. . ಹೀರೋಗಳಿಂದಾಗಿ ಪ್ರೊಡಕ್ಷನ್ ಬಜೆಟ್ ಹೆಚ್ಚಿದೆ, ಅದಕ್ಕೆ ನಿರ್ಮಾಪಕರು ಸಿನಿಮಾ ಮಾಡದೇ ದೂರ ಉಳಿಯುತ್ತಿದ್ದಾರೆ ಎನ್ನುವುದು ಸರಿಯಲ್ಲ. ಈಗ ದೊಡ್ಡ ಚಿತ್ರಗಳನ್ನು ಅದ್ಧೂರಿಯಾಗಿ ತೋರಿಸದ ಹೊರತು ಪ್ರೇಕ್ಷಕರು ಒಪ್ಪಿಕೊಳ್ಳುವುದಿಲ್ಲ. ಹೀರೋಗಳು ಯಾರೇ ಆಗಿರಲಿ, ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಬೇಕು. ‘ಏಉಈ’ ಸಿನಿಮಾ ಬರುವ ಮುನ್ನ ಆತ (ಯಶ್) ಯಾರು? ಆತ ಎಷ್ಟು ದೊಡ್ಡ ಹೀರೋ? ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಆ ಸಿನಿಮಾ ಗೆದ್ದಿತು. ಇದೊಂದು ಉದಾಹರಣೆ ಅಷ್ಟೇ.. ಎಂದು ಉದಾಹರಣೆ ಕೊಟ್ಟಿದ್ದಾರೆ.
ಕೆಜಿಎಫ್ KGF ಬರೋದಕ್ಕೂ ಮುಂಚೆಯೇ ಯಶ್ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದರು ಎಂದು ಅಲ್ಲು ಅರವಿಂದ್ ಕಿಡಿ ಕಾರುತ್ತಿದ್ಧಾರೆ ಯಶ್ ಫ್ಯಾನ್ಸ್.
ತೆಲುಗಿನಲ್ಲಿ ಕೆಜಿಎಫ್ ಬಂದಾದ ಮೇಲೆ ಯಶ್ ದೊಡ್ಡ ಸ್ಟಾರ್ ಆಗಿದ್ದು, ತೆಲುಗು ಚಿತ್ರರಂಗದ ಸ್ಟಾರ್ ನಟರಿಗೆ ಪುಕಪುಕ ಶುರುವಾಗಿದೆ ಎಂಬ ಮಾತಿದೆ. ಅಲ್ಲು ಅರವಿಂದ್ ಕುಟುಂಬದ ಸ್ಟಾರ್ ನಟರಲ್ಲಿ ಅಲ್ಲು ಅರ್ಜುನ್ (Allu arjun), ಅಲ್ಲು ಶಿರೀಶ್ (allu shireesh) ಅಷ್ಟೇ ಅಲ್ಲ, ರಾಮ್ʻಚರಣ್ ತೇಜ (ramcharn teja ), ವರುಣ್ ತೇಜ್ Varun tej, ಚಿರಂಜೀವಿ Chiranjeevi, ಪವನ್ ಕಲ್ಯಾಣ್ Pavan kalyan ಎಲ್ಲರೂ ಇದ್ದಾರೆ. ಈ ಕಾರಣಕ್ಕಾಗಿಯೇ ಅಲ್ಲು ಅರವಿಂದ್ ಈ ಮಾತು ಹೇಳಿದ್ದಾರೆ ಎಂಬ ಮಾತಿದೆ.



