ಭಾರತದಲ್ಲಿ ಹಿಂದೂ ದೇಗುಲಗಳ (Hindu temples) ಧ್ವಂಸ ಹೊಸದೇನಲ್ಲ. ಶತಶತಮಾನಗಳಿಂದಲೂ ದೇವಸ್ಥಾನಗಳ ಧ್ವಂಸ ಕಾರ್ಯಾಚರಣೆ ನಡೆಯುತ್ತಲೇ ಬಂದಿದೆ. ಘಜ್ನಿ, ಘೋರಿ, ಚೆಂಗೀಸ್ ಖಾನ್, ಔರಂಗಜೇಬ್, ಮಲ್ಲಿಕಾಫರ್, ಖಿಲ್ಜಿ, ಜಹಂಗೀರ್, ಷಹಜಹಾನ್, ಟಿಪ್ಪೂ ಸುಲ್ತಾನ್.. ಹೀಗೆ ದೇವಸ್ಥಾನಗಳನ್ನು ಧ್ವಂಸ ಮಾಡಿದ ಸಾಮ್ರಾಟರ ದೊಡ್ಡ ಪಟ್ಟಿಯೇ ಇದೆ. ಆದರೆ ಇತಿಹಾಸದ ಕಥೆ ಈ ರೀತಿ ಯಾರೋ ಒಬ್ಬರ ಕನಸಿನಲ್ಲಿ ಬರುವುದು, ಕನಸಿನಲ್ಲಿ ಕಂಡ ಪ್ರದೇಶದಲ್ಲಿ ಅಗೆದಾಗ ವಾಸ್ತವದಲ್ಲಿ ಅದು ನಿಜವಾಗುವುದು ಹೊಸದು. ಕನಸಿನಲ್ಲಿ ಕಂಡ ವಿಷ್ಣುವಿನ ಮಾತಿನಂತೆ ನೆಲವನ್ನು 15 ಅಡಿಗಳಷ್ಟು ಅಗೆದಾಗ ಆ ಸ್ಥಳದಲ್ಲಿ ಹಿಂದೂಗಳ ದೇವಸ್ಥಾನವೊಂದು ಇತ್ತು ಎಂಬ ವಿಷಯ ಸಾಕ್ಷಿ ಸಮೇತ ಹೊರಬಂದಿದೆ.
Tipu sultan destroyed ancient gopalakrishna temple found at belthangady in Dakshina kannada district under 15 feet digging̤ god shows the hint of idol in the dream̤
ಘಟನೆ ನಡೆದದ್ದು ಹೀಗೆ..
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಎಂಬಲ್ಲಿ ಈ ಘಟನೆ ಜರುಗಿದೆ. ಕಳೆದ 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ಲಕ್ಷ್ಮಣ ಎಂಬವರಿಂದ ತೆಕ್ಕಾರು ಬಳಿ ಜಾಗ ಖರೀದಿ ಮಾಡಿದ್ದರು. ಈ ವೇಳೆ ಪ್ರಶ್ನಾ ಚಿಂತನೆ ವೇಳೆ ಲಕ್ಷ್ಮಣರ ಜಾಗದ ಸಮೀಪವೇ ಗೋಪಾಲಕೃಷ್ಣನ ದೇವಸ್ಥಾನ ಇರೋ ಸುಳಿವು ಸಿಕ್ಕಿತ್ತು. ಆದರೆ ಲಕ್ಷ್ಮಣರ ಜಾಗದ ಪಕ್ಕದಲ್ಲಿ ಇದ್ದದ್ದು ಹಾಮದ್ ಬಾವಾ ಎಂಬವರ ಜಾಗ. ಗೊಂದಲ ಹೆಚ್ಚಾಯ್ತು. ಪ್ರಶ್ನಾ ಚಿಂತನೆಯಲ್ಲಿ ಸುಳಿವು ದೊರೆತ ಜಾಗದಲ್ಲಿ ಬಾವಾಗೆ ಸೇರಿದ ಅಡಿಕೆ ತೋಟವಿತ್ತು. ಈ ಮಧ್ಯೆ ಲಕ್ಷಣ್ ಅವರ ಕನಸಿನಲ್ಲಿ ವಿಷ್ಣು ಬಂದು ಇರುವಿಕೆ ತೋರಿತ್ತು. ಬಾವಿಯ ಆಳದಲ್ಲಿ ವಿಷ್ಣುವಿನ ವಿಗ್ರಹದ ಮಾದರಿ ಕನಸಿನಲ್ಲಿ ಕಂಡಿತ್ತು. ಮತ್ತೊಮ್ಮೆ ಪ್ರಶ್ನಾ ಚಿಂತನೆ ಮಾಡಿದಾಗ ಆ ಮುಸ್ಲಿಂ ವ್ಯಕ್ತಿಯ ಜಾಗ ಸರ್ಕಾರಿ ಜಾಗ ಎನ್ನುವುದು ಸರ್ಕಾರದ ದಾಖಲೆಗಳಿಂದಲೇ ಗೊತ್ತಾಯ್ತು. ಅದಾದ ಮೇಲೆ ಊರಿನ ಗ್ರಾಮಸ್ಥರೆಲ್ಲ ಸೇರಿ ಆ ಜಾಗವನ್ನು ಹಾಮದ್ ಬಾವಾ ಅವರಿಂದ ಖರೀದಿ ಮಾಡಿ, ದೇವಸ್ಥಾನದ ವಶಕ್ಕೆ ಕೊಟ್ಟರು. ಶಾಸಕ ಹರೀಶ್ ಪೂಂಜಾ ಮಧ್ಯಪ್ರವೇಶದೊಂದಿಗೆ ಎಲ್ಲವೂ ಸೌಹಾರ್ದಯುತವಾಗಿಯೇ ಬಗೆಹರಿದಿದೆ.
ಅದಾದ ಮೇಲೆ ತೋಟದ ಜಾಗದಲ್ಲಿ ಪ್ರಶ್ನಾಚಿಂತನೆ ಪ್ರಕಾರ ತೋರಿಸಿದ್ದ ಜಾಗದಲ್ಲಿ 15 ಅಡಿ ಅಗೆದಾಗ ದೇವರ ವಿಗ್ರಹ, ಪಾಣಿಪೀಠ, ಪಂಚಾಂಗದ ಕಲ್ಲುಗಳು ಪತ್ತೆಯಾಗಿವೆ. ಪ್ರಶ್ನಾ ಚಿಂತನೆ ಹಿನ್ನೆಲೆಯಲ್ಲಿ ಉತ್ಖನನದ ವೇಳೆ 15 ಅಡಿ ಆಳದಲ್ಲಿ ಪತ್ತೆಯಾಗಿದೆ. ತೆಕ್ಕಾರು ಗ್ರಾಮದ ಜನರನ್ನು ಅಚ್ಚರಿಗೆ ತಳ್ಳಿದ ದೇವರ ಪವಾಡ. ನೂರಾರು ವರ್ಷಗಳ ಹಿಂದೆಯೇ ಟಿಪ್ಪು ಸುಲ್ತಾನ್ ದಾಳಿಗೆ ತುತ್ತಾಗಿದೆ ಎನ್ನಲಾದ ಗೋಪಾಲಕೃಷ್ಣ ದೇವಸ್ಥಾನ ಈಗ ಪತ್ತೆಯಾಗಿದೆ.
ಈ ವಿಷಯ ಊರಿನ ಜನರಿಗೂ ಗೊತ್ತಿರಲಿಲ್ಲ. ಗೊತ್ತಿದ್ದವರು ಮುಂದಿನ ಪೀಳಿಗೆಯವರಿಗೆ ತಿಳಿಸದರೆ ಸತ್ತು ಹೋಗಿದ್ದರು. ಹೀಗಾಗಿ ಅಲ್ಲೊಂದು ದೇವಸ್ಥಾನ ಇತ್ತು, ಟಿಪ್ಪುವಿನ ಕಾಲದಲ್ಲಿ ನಡೆದ ದಾಳಿಯಲ್ಲಿ ಅದನ್ನು ಧ್ವಂಸ ಮಾಡಿ ಮಣ್ಣು ಮಾಡಲಾಗಿತ್ತು ಎಂಬ ವಿಷಯವೂ ಗೊತ್ತಿರಲಿಲ್ಲ. ಆ ಪ್ರದೇಶದಲ್ಲಿ ತೋಟವಿತ್ತು. ಬಾವಿಯೂ ಇತ್ತು. ಅದು ಒಬ್ಬ ವ್ಯಕ್ತಿಯ ಕನಸಿನಲ್ಲಿ ಬರುವುದು, ಅದರಂತೆಯೇ ಅಲ್ಲಿ ದೇವಸ್ಥಾನ ಪತ್ತೆಯಾಗುವುದು ಅಚ್ಚರಿ ಹುಟ್ಟಿಸಿದೆ. ದೇವರಿದ್ಧಾನೆ..!



