ಗೃಹಲಕ್ಷ್ಮಿ ಯೋಜನೆ ಶುರುವಾಗಿದ್ದು ಆಗಸ್ಟ್ ತಿಂಗಳಲ್ಲಿ. ಆದರೆ ಮೊದಲ ತಿಂಗಳು ಉತ್ಸಾಹದಿಂದ ಶುರುವಾದ ಯೋಜನೆ, ಎರಡು ಮತ್ತು ಮೂರನೇ ತಿಂಗಳು ಕುಂಟುತ್ತಾ ಸಾಗುತ್ತಿದೆ. ಕಾರಣ ಏನೆಂದು ನೋಡಿದರೆ ಸಮಸ್ಯೆ ಇರುವುದು ಸಂಪನ್ಮೂಲದಲ್ಲಿ ಅಲ್ಲ. ಆರ್ಥಿಕ ಶಕ್ತಿಯೇನೋ ಇದೆ. ಸರ್ಕಾರದ ಬಳಿ ಹಣವೂ ಇದೆ. ಆದರೆ ಸಮಸ್ಯೆ ಇರುವುದು ಆ ಹಣವನ್ನು ತಲುಪಿಸುವುದರಲ್ಲಿ. ಹೀಗಾಗಿಯೇ ಗೃಹಲಕ್ಷ್ಮೀ ಯೋಜನೆ ಹಣವನ್ನು ಈ ತಿಂಗಳು ಅಂದರೆ ನವೆಂಬರ್ ತಿಂಗಳಲ್ಲಿಯೇ 100% ತಲುಪಿಸುವಂತೆ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi hebbalkar) ಹೇಳಿದ್ದಾರೆ.
Gruhalakshmi scheme money will reach will reach each and everyone who are eligible : Minister Lakshmi hebbalkar
ಲೆಕ್ಕ ಸಿಕ್ಕಿರುವ ಮೈಸೂರು ಜಿಲ್ಲೆಯನ್ನೇ ತೆಗೆದುಕೊಂಡರೆ ಮೈಸೂರಿನಲ್ಲಿ 6.5 ಲಕ್ಷ ಫಲಾನುಭವಿಗಳ ಪೈಕಿ 6.1 ಲಕ್ಷ ಮಂದಿ ಖಾತೆಗೆ 2 ಸಾವಿರ ರೂ. ಜಮೆ ಆಗಿದ್ದು, 44 ಸಾವಿರ ಮಹಿಳೆಯರಿಗೆ ಇನ್ನೂ ಹಣ ಪಾವತಿಯಾಗದೆ ನಿರಾಸೆ ಅನುಭವಿಸುತ್ತಿದ್ದಾರೆ. ಇದು ಎಲ್ಲ ಜಿಲ್ಲೆಗಳ ಸಮಸ್ಯೆಯೂ ಹೌದು.
ಕೆಲವರಿಗೆ ಬಂದಿದೆ..ಕೆಲವರಿಗೆ ಬಂದಿಲ್ಲ..ಯಾರನ್ನು ಕೇಳಬೇಕೋ ಗೊತ್ತಿಲ್ಲ :
ಫಲಾನುಭವಿಗಳಲ್ಲಿ (Gruha laskhmi) ಕೆಲವರಿಗೆ ಎಲ್ಲಾದಾಖಲೆಗಳನ್ನು ಸಲ್ಲಿಸಿಯೂ ಸಿಡಿಪಿ ಲಾಗಿನ್ನಲ್ಲಿ ಮಂಜೂರಾಗದೇ (CDP login problem) ಬಾಕಿ ಇದ್ದರೆ, ಕೆಲವರಿಗೆ ಐಡಿ ವ್ಯಾಲಿಡೇಶನ್ ಮತ್ತು ಆಧಾರ್ ಸೀಡಿಂಗ್ ID Validation and adhar reading ಸಮಸ್ಯೆ, ವ್ಯಾಲಿಡೇಶನ್ ಫೇಲ್ validation failure ಆಗಿದೆ. ಹೀಗೆ ನಾನಾ ಕಾರಣಗಳಿಂದ ಫಲಾನುಭವಿಗಳು ಅರ್ಹರಾಗಿದ್ದರೂ 2 ತಿಂಗಳಿನಿಂದ ಖಾತೆಗೆ ಹಣ ವರ್ಗಾವಣೆಯಾಗಿಲ್ಲ. ಹಲವರಿಗೆ ಎರಡು ತಿಂಗಳ ಹಣ ಖಾತೆಗೆ ಜಮೆ ಆಗಿದ್ದರೆ, ಇನ್ನೂ ಕೆಲವರಿಗೆ ಒಂದೂ ತಿಂಗಳ ಹಣವೂ ಕೈ ಸೇರಿಲ್ಲ. ಹಣ ಬಂದಿಲ್ಲಎಂಬುದನ್ನು ಯಾರ ಬಳಿ ಕೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಸಹಾಯವಾಣಿಯನ್ನೂ ತೆರೆದಿಲ್ಲ. ಅಕಾರಿಗಳ ಸಂಪರ್ಕ ಸಂಖ್ಯೆಯನ್ನು ವೆಬ್ಸೈಟಿನಲ್ಲಾದರೂ ಪ್ರಕಟಿಸಿದ್ದರೆ ಅನುಕೂಲವಾಗುತ್ತಿತ್ತು. ಪಡಿತರ ಕಾರ್ಡ್ನೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿದ್ದರೂ ನನಗೆ ಹಣ ಬಂದಿಲ್ಲಎನ್ನುವುದು ಗೃಹಲಕ್ಷ್ಮೀ ಫಲಾನುಭವಿಗಳ ಆಕ್ರೋಶ.
ಡೋಂಟ್ ವರಿ, ಆತಂಕ ಬೇಡ :
ಎಲ್ಲಾ ಫಲಾನುಭವಿಗಳ ಪಟ್ಟಿ ಮತ್ತು ಹಣವನ್ನೂ ಬ್ಯಾಂಕ್ಗಳಿಗೆ ನೀಡಲಾಗಿದೆ. ಎಲ್ಲರಿಗೂ ಏಕಕಾಲಕ್ಕೆ ಹಣ ಕಳುಹಿಸಲು ಆಗುವುದಿಲ್ಲ. ಯಾರೂ ಆತಂಕ, ನಿರಾಸೆ ಅನುಭವಿಸುವುದು ಬೇಡ. ಹಂತಹಂತವಾಗಿ ಎಲ್ಲರ ಖಾತೆಗೆ ಹಣ ಜಮೆ ಆಗಲಿದೆ. ಈ ನಿಟ್ಟಿನಲ್ಲಿಎಲ್ಲಾಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಸವರಾಜು ಹೇಳಿದ್ಧಾರೆ.
100% ಹಣ ಸಂದಾಯ ಮಾಡುತ್ತೇವೆ : ಲಕ್ಷ್ಮೀ ಹೆಬ್ಬಾಳ್ಕರ್
ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ತ್ವರಿಗತಿಯಲ್ಲಿ ಹಣ ಸಂದಾಯ ಮಾಡಬೇಕು. ತಾಂತ್ರಿಕ ಕಾರಣಗಳಿಂದ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಖಾತೆಗೆ ಶೀಘ್ರ ಹಣ ಸಂದಾಯವಾಗುವಂತೆ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದ್ದಾರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್. ಆಗಸ್ಟ್ ತಿಂಗಳಿನಲ್ಲಿ ಶೇಕಡ 88 ರಷ್ಟು ಮಂದಿಗೆ ಹಣ ಸಂದಾಯವಾಗಿದ್ದು, ಸೆಪ್ಟೆಂಬರ್ ತಿಂಗಳ ಹಣ ಹಂತ ಹಂತವಾಗಿ ಸಂದಾಯವಾಗುತ್ತಿದೆ. ಅಕ್ಟೋಬರ್ ತಿಂಗಳ ಹಣ ಶೇಕಡ 100ರಷ್ಟು ಫಲಾನುಭವಿಗಳಿಗೆ ಸಂದಾಯವಾಗುವಂತೆ ಮಾಡಬೇಕು ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಇಲಾಖೆಯ ಉಪ ನಿದೇಶಕರು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇ-ಗವರ್ನೆನ್ಸ್ ಇಲಾಖೆಯ ಸಹಕಾರದೊಂದಿಗೆ ಆಗಿರುವ ಕೆಲವೊಂದು ತಾಂತ್ರಿಕ ನೂನ್ಯತೆಗಳನ್ನು ಪರಿಪಡಿಸಬೇಕು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ನೋಂದಣಿಯಲ್ಲಿ ಆಗಿರುವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನವೆಂಬರ್ ತಿಂಗಳು ಮುಗಿಯುವ ಹೊತ್ತಿಗೆ ಎಲ್ಲ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ. ಹಳೆಯ ತಿಂಗಳ ಬಾಕಿಯೂ ಸೇರಿ ಹಣವನ್ನು ಸಂದಾಯ ಮಾಡುವುದಾಗಿ ಇಲಾಖೆಯ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರೆ.



