ಡಾ.ರಾಜ್ (Dr.Rajkumar) ನಂದಿನಿಗೆ (KMF) ರಾಯಭಾರಿಯಾಗಿದ್ದೇ ವಿಶೇಷ ಕಥೆ. ನಂದಿನಿ ಉತ್ಪನ್ನವೊಂದರ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದ ಫೋಟೋ ಅಚಾನಕ್ ಆಗಿ ಜಾಹೀರಾತು ರೂಪ ಪಡೆದಿದ್ದೇ ಸ್ಪೆಷಲ್ ಸ್ಟೋರಿ. ಜಾಹೀರಾತು (Advertisement) ರೂಪದಲ್ಲಿ ಅದನ್ನು ಪ್ರಕಟಿಸಿದಾಗ ಮೊದಲಿಗೆ ರಾಜ್ (Dr.Rajkumar) ಅವರ ಅನುಮತಿ ಪಡೆದಿರಲಿಲ್ಲವಂತೆ. ಅದಾದ ಮೇಲೆ ರಾಜ್ ಅವರಿಗೆ ಕೆಎಂಎಫ್`ನವರೇ ಇದನ್ನು ಗಮನಕ್ಕೆ ತಂದಾಗ ನನ್ನ ಒಂದು ಫೋಟೋ ಹಾಕಿಕೊಂಡರೆ ರೈತರಿಗೆ ಲಾಭವಾಗುತ್ತೆ ಅನ್ನೋದಾದ್ರೆ ಆಗಲಿ ಬಿಡಿ. ಅದಕ್ಕೆಲ್ಲ ಹಣ ಬೇಡ. ರೈತರಿಗೆ (Farmers) ಲಾಭವಾದರೆ ಅಷ್ಟೇ ಸಾಕು ಎಂದಿದ್ದರಂತೆ ಡಾ.ರಾಜ್.
ಅದೇ ಮಾದರಿಯಲ್ಲಿ ಡಾ.ಪುನೀತ್ ರಾಜ್`ಕುಮಾರ್ (Dr.Puneeth Rajkumar) ಕೂಡಾ ಇದ್ದರು. ಉಚಿತವಾಗಿಯೇ ಕೆಎಂಎಫ್ (KMF) ಉತ್ಪನ್ನಗಳಿಗೆ ರಾಯಭಾರಿಯಾಗಿದ್ದರು. ಅಪ್ಪ ಮತ್ತು ತಮ್ಮನ ನಂತರ ಈಗ ಅಣ್ಣ ಶಿವಣ್ಣ (Dr. Shiva raj kumar) ನಂದಿನಿ (Nandini) ರಾಯಭಾರಿಯಾಗಿದ್ದಾರೆ. ಕೆಎಂಎಫ್ (KMF) ಉತ್ಪನ್ನಗಳಿಗೆ ರಾಯಭಾರಿಯಾಗಿ ಡಾ.ಶಿವ ರಾಜ್`ಕುಮಾರ್ (Dr. Shiva raj kumar) ಅವರನ್ನು ಆಯ್ಕೆ ಮಾಡಲಾಗಿದೆ. ಮೊದಲಿಗೆ ಅಪ್ಪ, ಆಮೇಲೆ ತಮ್ಮ ರಾಯಭಾರಿಯಾಗಿದ್ದ ಅದೇ ಕೆಎಂಎಫ್ ನಂದಿನಿಗೆ ಇನ್ನು ಮುಂದೆ ಶಿವಣ್ಣ ರಾಯಭಾರಿಯಾಗಲಿದ್ದಾರೆ. ಶಿವಣ್ಣ ಅವರನ್ನು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಭೇಟಿಯಾಗಿ, ಅಭಿನಂದಿಸಿದ್ದಾರೆ.
1996ರಲ್ಲಿ ಡಾ ರಾಜ್ಕುಮಾರ್ ಮೊದಲ ಬಾರಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ನಂದಿನಿ ರಾಯಭಾರಿಯೂ ಆಗಿದ್ದ ಅವರು, ಇದ್ಯಾವುದಕ್ಕೂ ಒಂದು ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿರಲಿಲ್ಲ. ಅದೇ ರೀತಿ ಡಾ ಪುನೀತ್ ರಾಜ್ಕುಮಾರ್ ಅವರು ಕೂಡ ನಂದಿನಿ ಉತ್ಪನ್ನಗಳಿಗೆ ಉಚಿತವಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಶಿವರಾಜ್ಕುಮಾರ್ ಅವರು ನಂದಿನಿ ರಾಯಭಾರಿಯಾಗಿದ್ದಾರೆ.
ಇಂಥದ್ದೊಂದು ಅವಕಾಶ ನಮ್ಮ ಫ್ಯಾಮಿಲಿಗೆ ಸಿಗುತ್ತಿರುವುದಕ್ಕೆ ನಮಗೆ ಖುಷಿಯಾಗುತ್ತದೆ. ಮೊದಲು ಅಪ್ಪಾಜಿ ಆಗಿದ್ರು, ಆಮೇಲೆ ಅಪ್ಪು. ಈಗ ನನಗೆ ಬಂದಿದೆ. ಇದರ ಭಾಗವಾಗುವುದಕ್ಕೆ ನನಗೂ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ ಶಿವರಾಜ್ಕುಮಾರ್.
ಇದು ರೈತರಿಗೆ ಸಂಬಂಧಿಸಿದ ಕೆಲಸವಾಗಿರೋ ಕಾರಣ ಖುಷಿ ಎನಿಸುತ್ತದೆ. ನಂದಿನಿ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲೇ ಅತೀ ಬೇಡಿಕೆ ಇರುವ ಪ್ರಾಡಕ್ಟ್. ಆ ಬೇಡಿಕೆಯನ್ನು ಹಾಗೇ ಉಳಿಸಿಕೊಳ್ಳುವುದಕ್ಕೆ ನಮ್ಮ ಸಹಕಾರ ಖಂಡಿತ ಇರುತ್ತದೆ. ಸದ್ಯ ಒಂದು ಜಾಹೀರಾತು ಮಾಡಲು ಅವರು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ. ನಂದಿನಿ ಹಾಲಿನ ಗುಣಮಟ್ಟ ಜಾಸ್ತಿ ಇರೋದ್ರಿಂದ ದರ ಹೆಚ್ಚಾದರೂ, ತೊಂದರೆ ಆಗುವುದಿಲ್ಲ ಎಂದಿದ್ದಾರೆ ಶಿವಣ್ಣ.
ಶಿವಣ್ಣ ಕೂಡಾ ಅಪ್ಪ ಮತ್ತು ಅಪ್ಪು ಹಾದಿಯಲ್ಲೇ ಸಾಗಿದ್ದಾರೆ. ಸಂಭಾವನೆ ಪಡೆದಿಲ್ಲ. ಇದು ಸರ್ಕಾರದ ಕಾರ್ಯಕ್ರಮ, ಅಲ್ಲದೆ ನಮ್ಮ ಪ್ರಾಡಕ್ಟ್. ರೈತರಿಗೋಸ್ಕರ ನಾವು ಸದಾ ಬೆಂಬಲವಾಗಿ ಇರಬೇಕು. ಸಂಭಾವನೆ ಪಡೆಯದೇ ಇರುವುದು ದೊಡ್ಡ ತ್ಯಾಗ ಏನಲ್ಲ. ಇದು ನಮ್ಮ ಕರ್ತವ್ಯ. ಇಂಥ ಕಾರ್ಯಗಳಿಗೆ ನಾವು ಮೊದಲು ಬಂದು ನಿಂತುಕೊಳ್ಳಬೇಕು. ಇದರಿಂದ ನಾವು ಏನನ್ನೂ ನಿರೀಕ್ಷೆ ಮಾಡಬಾರದು ಎಂದಿದ್ದಾರೆ ಶಿವಣ್ಣ.
ಕೆಎಂಎಫ್ಗೆ ಯಾರನ್ನು ರಾಯಭಾರಿ ಮಾಡಬೇಕು ಎಂಬ ಚರ್ಚೆ ಬಂದಾಗ ಮೊದಲು ನಾನು ಹೇಳಿದ್ದೇ ಡಾ ಶಿವರಾಜ್ಕುಮಾರ್ ಅವರ ಹೆಸರು. ಡಾ ರಾಜ್ಕುಮಾರ್, ಡಾ ಪುನೀತ್ ರಾಜ್ಕುಮಾರ್ ಅವರು ಸಂಭಾವನೆ ಪಡೆಯದೇ ಕೆಎಂಎಫ್ಗೆ ರಾಯಭಾರಿ ಆಗಿದ್ದರು. ಶಿವರಾಜ್ಕುಮಾರ್ ಅವರನ್ನೇ ರಾಯಭಾರಿಯನ್ನಾಗಿ ನೇಮಕ ಮಾಡಬೇಕು ಎಂದು ಎಲ್ಲರೂ ಸೇರಿ ತೀರ್ಮಾನ ಕೈಗೊಂಡೆವು. ಶಿವಣ್ಣ ಅವರು ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ರಾಜ್ಯದ ಸಮಸ್ತ ರೈತರ ಪರವಾಗಿ ಶಿವರಾಜ್ಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್. ಹಣ ಪಡೆಯುವುದಿಲ್ಲ ಎನ್ನುವುದು ತ್ಯಾಗವಲ್ಲ. ಅದು ನಮ್ಮ ಕರ್ತವ್ಯ ಎನ್ನುವ ಮೂಲಕ ಶಿವಣ್ಣ ಗ್ರೇಟ್ ಎನಿಸಿಕೊಂಡಿದ್ದಾರೆ.



