ಪ್ರಧಾನಿ ಮೋದಿ 75 ವರ್ಷ ತುಂಬುತ್ತಿದ್ದಂತೆ ಅಧಿಕಾರ ಬಿಡ್ತಾರೆ ಅನ್ನೋ ರಾಜಕೀಯ ವಿರೋಧಿಗಳ ಹೇಳಿಕೆಯೇ ಬೇರೆ. ಭವಿಷ್ಯ ಹೇಳುವವರ ಮಾತೇ ಬೇರೆ. ಈಗ ಇನ್ನೂ ಒಂದು ವರ್ಷ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ಯಾವುದೇ ಕಂಟಕ ಇಲ್ಲ ಆದರೆ 2025 ರ ಅಗಸ್ಟ್ ನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬಹುದು. ಸಿದ್ದರಾಮಯ್ಯ ಅಲ್ಲದೇ ದೇಶದ ಪ್ರಧಾನಿ ನರೇಂದ್ರ ಮೋದಿ ಕೊಡ ಮುಂದಿನ ವರ್ಷ ಅಗಸ್ಟ್ ನಲ್ಲಿ ಅಧಿಕಾರದಿಂದ ಕೆಳಗೆ ಇಳಿಯಲ್ಲಿದ್ದಾರೆ. ಮೋದಿ ಅವರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ ಬಾರ್ಕೂರು ಸಂಸ್ಥಾನ ಮಠದ ಸಂತೋಷ ಗುರೂಜಿ.
ವಿಶೇಷ ಎಂದರೆ.. ಇದೇ ಸಂತೋಷ್ ಗುರೂಜಿ ಸಿದ್ಧರಾಮಯ್ಯ ಪರ ಬ್ಯಾಟಿಂಗ್ ಮಾಡಿದ್ದಾರೆ. ಮುಡಾ ಹಗರಣ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪವೇ ಹೊರತು, ಸಿದ್ದರಾಮಯ್ಯ ಅವರು ಪ್ರಾಮಾಣಿಕರಾಗಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಅವರ ಪಾತ್ರವಿಲ್ಲ, ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಅವರ ಪರ ಇದ್ದೇವೆ, ಹಿಂದುಳಿದ ವರ್ಗಗಳು ಮಾತ್ರ ಅಲ್ಲ ಎಲ್ಲಾ ಸಮುದಾಯ ಕೊಡ ಸಿಎಂ ಪರ ನಿಲ್ಲಬೇಕು ಎಂದು ಹೇಳಿದ್ದಾರೆ ಸಂತೋಷ್ ಗುರೂಜಿ.
2025 ರ ಅಗಸ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವುದು ಖಚಿತ, ಆದರೆ ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನಕ್ಕೆ ಏರುವ ಅವಕಾಶ ಕಡಿಮೆ ಇದೆ ಎಂದಿರುವ ಸಂತೋಷ್ ಗುರೂಜಿ ಹಿಂದುಳಿದ ವರ್ಗದ ಕೆಲ ಮಠಾಧೀಶ್ವರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ. ನಾವೂ ಅವರ ಬೆಂಬಲಕ್ಕೆ ಇದ್ದೇವೆ. ಹಿಂದುಳಿದ ವರ್ಗದವರು ಮಾತ್ರವಲ್ಲ; ಎಲ್ಲಾ ಲಿಂಗಾಯತ ಮಠದ ಸ್ವಾಮೀಜಿಗಳೂ ಸಿದ್ದರಾಮಯ್ಯ ಜೊತೆ ನಿಲ್ಲಬೇಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
‘ಮುಖ್ಯಮಂತ್ರಿ ವಿಚಾರದಲ್ಲಿ ಜಾತಿ ನೋಡಬಾರದು. ಆ ಸ್ಥಾನಕ್ಕೆ ಜಾತಿ ಇಲ್ಲ. ಮುಖ್ಯಮಂತ್ರಿ ಜಾತಿವಾದಿ ಆಗಿರಬಾರದು. ಇಲ್ಲಿವರೆಗೆ ಬಂದ ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ನಿಜವಾಗಿಯೂ ಭ್ರಷ್ಟರಲ್ಲ. ಸಿದ್ದರಾಮಯ್ಯ ಸರ್ಕಾರ ಉರುಳಿಸಲು ಬಿಜೆಪಿ ಹಾಗೂ ಜೆಡಿಎಸ್ ಮುಡಾ ವಿಚಾರ ಮುಂದಿಟ್ಟುಕೊಂಡಿವೆ. ಪಾರ್ವತಮ್ಮನರ ಜಮೀನಿಗೆ ಬದಲಾಗಿ ಬೇರೆ ನಿವೇಶನ ಕೊಡಲಾಗಿದೆ ಅಷ್ಟೆ. ಹಿಂದಿನ ಮುಖ್ಯಮಂತ್ರಿಗಳು ಎಷ್ಟು ಹಗರಣ ಮಾಡಿದ್ದಾರೆ, ಎಷ್ಟು ದುಡ್ಡು ಮಾಡಿದ್ದಾರೆ ಎಂಬುದೆಲ್ಲಾ ನಮಗೆ ಗೊತ್ತಿದೆ. ಕೆಲ ರಾಜಕಾರಣಿಗಳಿಗೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಇಂಥವರು ಸಭೆ ಮಾಡುತ್ತಾರೆ ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಲು ಕರ್ನಾಟಕದ ಜನ ದಡ್ಡರಲ್ಲ. ಹೀಗಾಗಿ, ಸಿದ್ದರಾಮಯ್ಯ ಅವರಿಗೆ ಬೆಂಬಲ ಅಗತ್ಯವಿದೆ. ಅದಕ್ಕೆ ನಾವು ಬದ್ಧ ಎಂದಿದ್ದಾರೆ.
ಅಷ್ಟೇ ಅಲ್ಲ 2025ರ ಆಗಸ್ಟ್ನಲ್ಲಿ ಪ್ರಧಾನಿ ಮೋದಿ ಅವರಿಗೂ ಕಂಟಕವಿದೆ. ನರೇಂದ್ರ ಮೋದಿ ಕೊಡ ಮುಂದಿನ ವರ್ಷ ಅಗಸ್ಟ್ ನಲ್ಲಿ ಅಧಿಕಾರದಿಂದ ಕೆಳಗೆ ಇಳಿಯಲ್ಲಿದ್ದಾರೆ. ಮೋದಿ ಅವರಿಗೆ ಆರೋಗ್ಯ ಸಮಸ್ಯೆ ಕಾಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.



