ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಪ್ರಯೋಜನವನ್ನು ಅರ್ಹರಿಗಿಂತ ಇತರರೆ ಹೆಚ್ಚು ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 22 ಲಕ್ಷಕ್ಕೂ ಹೆಚ್ಚು ಅಧಿಕ ಕಾರ್ಡುಗಳನ್ನು ಸರ್ಕಾರ ರದ್ದು ಮಾಡ್ತಾ ಇದೆ. ರಾಜ್ಯದಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಸುಮಾರು 22 ಲಕ್ಷಕ್ಕೂ ಹೆಚ್ಚು ಕಾರ್ಡ್ಗಳನ್ನು ರದ್ದುಪಡಿಸಲು ಆಹಾರ ಇಲಾಖೆ ಮುಂದಾಗಿದೆ.
ಪ್ರಸ್ತುತ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(ಎನ್ ಎಫ್ಎಸ್ಎ) ನಿಯಮಕ್ಕಿಂತ 14 ಲಕ್ಷ ಹೆಚ್ಚುವರಿ ಕಾರ್ಡ್ಗಳು ಇವೆ. ಇವುಗಳನ್ನು ಮಾತ್ರ ರದ್ದು ಪಡಿಸುವ ಕುರಿತ ಚರ್ಚೆ ಹಿಂದಿನಿಂದಲೂ ನಡೆಯುತ್ತಿತ್ತು. ಆದರೆ, ಈಗ 22 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಿ ರದ್ದುಪಡಿಸಲು ಮುಂದಾಗಿದೆ.
ರಾಜ್ಯದಲ್ಲಿ ಒಟ್ಟು 22,62,413 ಅನರ್ಹ ಅಂತ್ಯೋದಯ, ಬಿಪಿಎಲ್ ಕಾರ್ಡ್ಗಳು ಇವೆ ಎನ್ನುವುದು ಗೊತ್ತಾಗಿದೆ. ರಾಜ್ಯದ ಆಹಾರ ಇಲಾಖೆ, ಇ ಆಡಳಿತ ಕೇಂದ್ರಕ್ಕೆ ಮನವಿ ಮಾಡಿತ್ತು. ಕುಟುಂಬ ತಂತ್ರಾಂಶದಿಂದ ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳನ್ನು ಉಲ್ಲಂಘನೆ ಮಾಡಿ ಅನರ್ಹ ಪಡಿತರ ಚೀಟಿಗಳ ವಿವರ ಸಂಗ್ರಹಿಸಲಾಗಿದೆ.
ಈ ಮಾಹಿತಿ ಪ್ರಕಾರ ರಾಜ್ಯದಲ್ಲಿ
10,97,621 ಅನರ್ಹ ಬಿಪಿಎಲ್ ಕಾರ್ಡುಗಳು,
1,06,152 ಅಂತ್ಯೋದಯ ಕಾರ್ಡುಗಳು
10,54,368 ಕಾರ್ಡ್ಗಳು 1.2 ಲಕ್ಷಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರು
4,272 ಚೀಟಿ ಕೆಜಿಐಡಿ, ಎಚ್ಆರ್ಎಂಎಸ್ ನಲ್ಲಿ ಜೋಡಣೆ ಆಗಿರುವುದನ್ನು ಕುಟುಂಬ ತಂತ್ರಾಂಶದಲ್ಲಿ ಇ-ಆಡಳಿತ ಕೇಂದ್ರ ಪತ್ತೆ ಹಚ್ಚಿದೆ.
ಯಾವ್ಯಾವ ಮಾನದಂಡ ಇರಬೇಕು..? 14 ಮಾನದಂಡಗಳೇನು..?
ವಾರ್ಷಿಕ ಆದಾಯ : 1.20 ಲಕ್ಷ ರು.ಗಿಂತ ಹೆಚ್ಚು ಆದಾಯ ಪಡೆಯುತ್ತಿರುವವರಿಗೆ ಕಾರ್ಡ್ ಸಿಗಲ್ಲ.
ಮನೆಯಲ್ಲಿ ಕಾರು ಇದ್ದವರಿಗೆ ಕಾರ್ಡ್ ಕೊಡುವಂತಿಲ್ಲ.
ಆದಾಯ ತೆರಿಗೆ ಪಾವತಿಸುತ್ತಿದ್ದವರು ರೇಷನ್ ಕಾರ್ಡ್ ಪಡೆಯುವುದಕ್ಕೆ ಅರ್ಹರಲ್ಲ.
ಭೂಮಿಯ ಮಿತಿ : ಏಳೂವರೆ ಎಕರೆ ಒಣ ಅಥವಾ ನೀರಾವರಿ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯುವುದಕ್ಕೆ ಅರ್ಹರಲ್ಲ.
ಅನುದಾನಿತ- ಅನುದಾನರಹಿತ ಕಾಲೇಜು ನೌಕರರಿಗೂ ಕಾರ್ಡ್ ಕೊಡುವಂತಿಲ್ಲ. ಆದರೆ ಸಂಬಳ ಎಷ್ಟು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ.
ನೋಂದಾಯಿತ ಗುತ್ತಿಗೆದಾರರು, ಕಾಂಟ್ರಾಕ್ಟರುಗಳು ಕೂಡಾ ರೇಷನ್ ಕಾರ್ಡ್ ಪಡೆಯವುದಕ್ಕೆ ಯೋಗ್ಯರಲ್ಲ.
ಬಹುರಾಷ್ಟ್ರೀಯ ಕಂಪನಿ, ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಬಿಪಿಎಲ್ ಕಾರ್ಡ್ ಕೊಡುವಂತಿಲ್ಲ.
ಸ್ವಂತಕ್ಕಾಗಿ ಒಂದು ಆಟೋರಿಕ್ಷಾ ಹೊರತುಪಡಿಸಿ 100 ಸಿಸಿ ಮೇಲ್ಪಟ್ಟ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ, ಕಾರು ಹೊಂದಿದ್ದರೂ ರೇಷನ್ ಕಾರ್ಡ್ ಪಡೆಯುವಂತಿಲ್ಲ.
ಇಲ್ಲಿ ಗೊಂದಲ ಹುಟ್ಟಿಸುತ್ತಿರುವುದು ಕೆಲವು ನಿರ್ಬಂಧಗಳು. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಎಂದು ಹೇಳಲಾಗಿದೆ. ಎಂಎನ್ಸಿಗಳಲ್ಲಿ ಕೆಲಸ ಮಾಡುತ್ತಿದ್ದವರು ಎಂದರೆ ಅವರ ಸಂಬಳ/ವೇತನ ಎಷ್ಟು? ಆದಾಯ ಎಷ್ಟು ಬಗ್ಗೆ ಸೂಕ್ತ ಮಾಹಿತಿ ಇಲ್ಲ.
100 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನ ಎನ್ನಲಾಗಿದೆ. ಸ್ಕೂಟಿಗಳೂ ಕೂಡಾ 100 ಸಿಸಿ ಒಳಗೆ ಇರುವುದಿಲ್ಲ.
ಇನ್ನು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಶಿಕ್ಷಕರು, ಕಾಲೇಜು ಉಪನ್ಯಾಸಕರ ಪಾಡೂ ಅಷ್ಟೇ. ಹೆಸರಿಗೆ ಟೀಚರ್ಸ್, ಆದರೆ ವಾಸ್ತವದಲ್ಲಿ ಸಂಬಳ ಯಾತಕ್ಕೂ ಸಾಕಾಗಲ್ಲ. ಇಂತಹವುಗಳಿಗೆ ಉತ್ತರಗಳಿಲ್ಲ. ಇನ್ನು ಮುಂದೆ ರೇಷನ್ ಕಾರ್ಡುಗಳೂ ಇರಲ್ಲ.



