ದೇವರಾಜ ಅರಸು ಕಾರಿನಲ್ಲಿ ಓಡಾಡಿದ ತಕ್ಷಣ ಎಲ್ಲರೂ ದೇವರಾಜ ಅರಸು ಆಗುವುದಿಲ್ಲ.
ಅರಸು ಹೆಸರು ಹೇಳುವವರು ಅವರ ಮಗನಿಗೆ ವಿಧಾನಪರಿಷತ್ ಸದಸ್ಯತ್ವವನ್ನೂ ಕೊಡಲಿಲ್ಲ.
ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು ಪಂಚೆ ಕಟ್ಟಿಕೊಂಡು ಓಡಾಡಿದರೆ ಸಮಾಜವಾದಿಯಾಗಲ್ಲ.
ಹೊರಗೆ ಪಂಚೆಯುಟ್ಟಿದ್ದರೂ, ಒಳಗೆ ಖಾಕಿ ಚಡ್ಡಿ ಹಾಕ್ಕೊಂಡು ಓಡಾಡ್ತಿದ್ದಾರೆ.
ಎಲ್ಲಿಂದಲೋ ಬಂದವರಿಗೆ ಅಧಿಕಾರ ಸಿಗದಿದ್ದಾಗ ಅಡ್ವಾಣಿ ಮನೆಗೆ ಹೋಗಿ ಉಪಾಹಾರ ಮಾಡಿ ಬಿಜೆಪಿ ಸೇರುವುದಕ್ಕೆ ಹೋಗಿದ್ದರು.
ಕರ್ನಾಟಕದಲ್ಲಿ ಪರಮೇಶ್ವರ್ ಅತೀ ಹೆಚ್ಚಿನ ಸಮಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಆದರೆ ಅವರಿಂದ ಡಿಸಿಎಂ ಪದವಿಯನ್ನು ಕಿತ್ತುಕೊಂಡರು.
ಅರ್ಹತೆ ಇದ್ದರೂ ಪರಮೇಶ್ವರ್ ಅವರಿಗೆ ಡಿಸಿಎಂ ಸ್ಥಾನ ಕೊಡಲಿಲ್ಲ. ಕೊನೆಗೆ ಡಿಸಿಎಂ ಆಗಿದ್ದಾಗ ಅಧಿಕಾರವನ್ನೇ ಕಿತ್ತುಕೊಂಡರು.
ಇಂತಹ ಆರೋಪ ಮಾಡುತ್ತಿರುವ ಹರಿಪ್ರಸಾದ್ (BK Hariprasad) ಅವರ ಟಾರ್ಗೆಟ್ ಸಿಎಂ ಸಿದ್ದರಾಮಯ್ಯ ಅನ್ನೋದು ಎಲ್ಲರಿಗೂ ಗೊತ್ತು. ಹುಬ್ಲೋಟ್ ವಾಚ್ (Hu blot watch), ಅಡ್ವಾನಿ ಮನೆಯಲ್ಲಿ (LK Advani) ಉಪಾಹಾರ ಮಾಡಿರುವ ಕಾಂಗ್ರೆಸ್ಸಿಗ, ಅರಸು (Devaraja Arasu) ಕಾರಿನಲ್ಲಿ ಓಡಾಡಿರುವ ರಾಜಕಾರಣಿ ಒನ್ & ಓನ್ಲಿ ಸಿದ್ದರಾಮಯ್ಯ (CM Siddaramaiah). ಅಷ್ಟೇ ಅಲ್ಲ, ಪರಮೇಶ್ವರ್ (Parameshwar) ಅವರಿಗೆ ಡಿಸಿಎಂ ಕೊಡಲಿಲ್ಲ. ಅದು ಸಿಕ್ಕಾಗ ಸರ್ಕಾರವೇ ಉಳಿಯಲಿಲ್ಲ ಅನ್ನೋ ಆರೋಪವೂ ಸಿದ್ದರಾಮಯ್ಯ (CM Siddaramaiah) ಕುರಿತಾದದ್ದೇ. ಆದರೆ ಅವರು ಇದನ್ನೆಲ್ಲ ಮಾಡಿದ್ದು, ಮಾಡಿಸಿದ್ದು ಸಿಎಂ ಸಿದ್ದರಮಾಯ್ಯ (CM Siddaramaiah) ಎಂದು ಹೆಸರು ಮಾತ್ರ ಹೇಳಲ್ಲ.
ಆದರೆ ಜಗತ್ತಿಗೇ ಅರ್ಥವಾದರೂ ಅರ್ಥವಾಗದಂತೆ ಇರಬೇಕಾದ ಪರಿಸ್ಥಿತಿ ಸಿದ್ದರಾಮಯ್ಯ (CM Siddaramaiah) ಅವರದ್ದು. ಅವರು ನನ್ನ ಹೆಸರು ಹೇಳಿದ್ದಾರಾ.. ಹಂಗಾದ್ರೆ ನೋ ರಿಯಾಕ್ಷನ್ ಎನ್ನುತ್ತಿದ್ದಾರೆ ಸಿದ್ದರಾಮಯ್ಯ. ಉಕ್ಕಿ ಬರುತ್ತಿರುವ ಕೋಪವನ್ನು ಬಚ್ಚಿಟ್ಟುಕೊಂಡಿದ್ದಾರೆ. ಯಾವಾಗ ಸ್ಫೋಟವಾಗುತ್ತದೋ.. ಏನೋ..
ಇಷ್ಟಕ್ಕೂ ಹರಿಪ್ರಸಾದ್ (BK Hariprasad) ಅವರ ಆಕ್ರೋಶವನ್ನು ತಣ್ಣಗೆ ಮಾಡುವ ಕೆಲಸವನ್ನು ಕಾಂಗ್ರೆಸ್ ಹೈಕಮಾಂಡ್ ಮಾಡುತ್ತಿಲ್ಲ. ಹರಿಪ್ರಸಾದ್ (BK Hariprasad) ಮಾತನಾಡುತ್ತಿದ್ದರಷ್ಟೇ ಹೈಕಮಾಂಡಿಗೆ ಬೆಲೆ. ಆಗ ಹೈಕಮಾಂಡ್ ಬಳಿ ಸಿದ್ದರಾಮಯ್ಯ ಬರುತ್ತಾರೆ. ಆಗಷ್ಟೇ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯ ಅನ್ನೋದು ಹೈಕಮಾಂಡಿಗೆ ಗೊತ್ತು. ಈ ಹಿಂದೆ 2013ರಲ್ಲಿ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಬೆಳೆದ ಪರಿ ಹೈಕಮಾಂಡ್ ಅನುಭವಕ್ಕೂ ಬಂದಿದೆ. ಹೀಗಾಗಿಯೇ ಹರಿಪ್ರಸಾದ್ ಆಕ್ರೋಶವನ್ನು ಹಾಗೆಯೇ ಇರಲು ಬಿಟ್ಟಿರುವಂತಿದೆ. ಆದರೆ ಸಿದ್ದರಾಮಯ್ಯ ಅದಕ್ಕೆ ಪ್ರತಿ ಏಟು ಕೊಡುವ ಪ್ಲಾನ್ ಇಟ್ಟುಕೊಂಡಿದ್ದಾರೆ. ಏಕೆಂದರೆ ಈಗಲೂ ಸರ್ಕಾರದಲ್ಲಿ ಹಾಗೂ ಪಕ್ಷದಲ್ಲಿ ಸಿದ್ದರಾಮಯ್ಯ ಬಣದವರದ್ದೇ ಮೇಲುಗೈ. ಆದರೆ ಹೈಕಮಾಂಡ್ ಗಮನಕ್ಕೆ ತರುವುದು ಅದಾದ ನಂತರ ಹೈಕಮಾಂಡ್ ಏನೂ ಕ್ರಮ ತೆಗೆದುಕೊಳ್ಳದೇ ಹೋದರೆ, ಹೈಕಮಾಂಡಿನವರೇ ಓಡೋಡಿ ಬರುವ ವಾತಾವರಣ ಸೃಷ್ಟಿಸುವ ಯೋಜನೆ ಸಿದ್ದರಾಮಯ್ಯ ಬಣದ್ದು.



