ಪ್ರತಿಯೊಬ್ಬ ಕಳ್ಳ ಖದೀಮನ ಬಳಿಯಲ್ಲೂ ಹೃದಯವೇ ಕರಗಿ ಹೋಗುವಂತಹ ಛಿಧ್ರ ಛಿದ್ರವಾಗುವಂತಹ ಕಾರಣಗಳೂ ಕಥೆಗಳೂ ಇರುತ್ತವೆ. ಈತನ ಕಥೆ ಒಂದ್ ಸ್ವಲ್ಪ ಡಿಫರೆಂಟು. ಹಗಲು ಹೊತ್ತಿನಲ್ಲಿ ಕ್ಯಾಬ್ ಡ್ರೈವರ್ Cab driver ಆಗಿದ್ದವನು ರಾತ್ರಿ ಆಗ್ತಿದ್ದಂತೆ ಎಳನೀರು ಕಳ್ಳತನ coconut water theif ಮಾಡ್ತಿದ್ದ. ಕಾರಣ ಏನೆಂದು ಹುಡುಕಿದರೆ ಹಿಂದೆ ಇದ್ದ ಕಾರಣ Rummy circle ರಮ್ಮಿ ಸರ್ಕಲ್.
ಆನ್ಲೈನ್ ಜೂಜಾಟದಲ್ಲಿ (Onlilne game) ಹಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಕ್ಯಾಬ್ ಚಾಲಕ ಮೋಹನ್ ಕುಮಾರ್ ರಾತ್ರಿ ವೇಳೆ ಎಳನೀರು Coconut water ಕದ್ದು ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಆರೋಪಿಯಿಂದ ಸಾವಿರಾರು ಎಳನೀರು ಹಾಗೂ ಕಾರು ಸೀಜ್ ಮಾಡಿದ್ದ ಪೊಲೀಸರು 8 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದರು.
ಇತ್ತೀಚಿಗೆ ಹೊಸಕೆರೆಹಳ್ಳಿಯ ಮಂಕುತಿಮ್ಮನ ಉದ್ಯಾನ ಸಮೀಪ ಎಳನೀರು ಕಳ್ಳತನವಾಗಿತ್ತು. ವ್ಯಾಪಾರಿ ರಾಜಣ್ಣ ಅವರಿಗೆ ಸೇರಿದ 1,150 ಎಳನೀರುಗಳನ್ನು ರಾತ್ರೋರಾತ್ರಿ ಕದ್ದುಕೊಂಡು ಹೋಗಿದ್ದರು. ತನಿಖೆ ಕೈಗೆತ್ತಿಕೊಂಡ ಗಿರಿನಗರ ಠಾಣೆ ಇನ್ಸ್ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಎಳನೀರು ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಒಂದು ಎಳನೀರು ಬೆಲೆ ಸದ್ಯಕ್ಕೆ 20 ರೂ.ಗಳಿಂದ 50 ರೂ.ಗಳವರೆಗೆ ಇದೆ ಎನ್ನುವುದು ಗೊತ್ತಿರಲಿ.
ಮೋಹನ್ ಮೂಲತಃ ತಮಿಳುನಾಡಿನವನು. ಏಳೆಂಟು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಕುಟುಂಬದ ಜತೆ ವೈಟ್ಫೀಲ್ಡ್ನಲ್ಲಿ ನೆಲೆಸಿದ್ದವನು ಮೊದಲು ಎಳನೀರು ವ್ಯಾಪಾರ ಮಾಡಿಕೊಂಡೇ ಬದುಕಿದ್ದ. ಅದರ ನಡುವೆಯೇ Rummy circle ಜೂಜಿನ ಚಟಕ್ಕೆ ಬಿದ್ದ ಮೋಹನ್, ಆನಂತರ ಖಾಸಗಿ ಕಂಪನಿಯೊಂದರ ಕಾರು ಪಡೆದುಕೊಂಡಿದ್ದ. ಓಲಾ ಹಾಗೂ ಉಬರ್ಗಳಿಗೆ ಟ್ರಾನ್ಸ್ಪೋರ್ಟ್ ಕಲ್ಪಿಸಿದ್ದ.
ಆನ್ಲೈನ್ ಜೂಜಾಟ Rummy circle ದ ಚಟಕ್ಕೆ ಬಿದ್ದಿದ್ದ ಮೋಹನ್, ಬಂದ ಹಣವನ್ನೆಲ್ಲ ರಮ್ಮಿ ಸರ್ಕಲ್ ಸೇರಿದಂತೆ ಜೂನು ಆಪ್ಗಳಿಗೆ ಸುರಿಯುತ್ತಿದ್ದ. ಕಳೆದುಕೊಂಡಂತೆಲ್ಲ ಇಲ್ಲಿಯೇ ವಾಪಸ್ ಪಡೆಯುತ್ತೇನೆ ಎಂಬ ಹಠಕ್ಕೆ ಬಿದ್ದ ಮೋಹನ್ (ಸಾಮಾನ್ಯವಾಗಿ ಜೂಜಿನಲ್ಲಿ ಕಳೆದುಕೊಂಡವರೆಲ್ಲ ಇದೇ ಜೂಜಿನಿಂದ ಹಣ ಪಡೆಯುತ್ತೇನೆ. ಲಕ್ಷ ಲಕ್ಷ ದುಡಿಯತ್ತೇನೆ ಎಂಬ ಕನಸು ಕಾಣುತ್ತಾರೆ), ಬಡ್ಡಿಗೆ ಸಾಲ ತಂದು ರಮ್ಮಿ ಆಡಿದ್ದ. ಇದರಿಂದ ಹಣ ಕಳೆದುಕೊಂಡು ಆತ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ಈ ಹಣಕಾಸು ಸಮಸ್ಯೆಯಿಂದ ಹೊರಬರಲು ಆತ ಎಳನೀರು ಕಳ್ಳತನಕ್ಕಿಳಿದಿದ್ದ.
ಇದು ಇವತ್ತಿನ ಕಥೆಯೂ ಅಲ್ಲ. ಮೋಹನ್, ಕಳೆದ ಐದಾರು ತಿಂಗಳಿಂದ ರಾತ್ರಿ ವೇಳೆ ನಗರ ವ್ಯಾಪ್ತಿಯಲ್ಲಿ ಎಳನೀರು ಕದಿಯುತ್ತಿದ್ದ. ಕದ್ದ ಎಳನೀರನ್ನು ತನಗೆ ಪರಿಚಿತರಿದ್ದ ಎಳನೀರು ವ್ಯಾಪಾರಿಗಳಿಗೆ ಮದ್ದೂರು ಮಾರುಕಟ್ಟೆಯಲ್ಲಿ ಖರೀದಿಸಿದ್ದಾಗಿ ಹೇಳಿ ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದ. ಮತ್ತೆ ಅದೇ ಹಣದಲ್ಲಿ ರಮ್ಮಿ Rummy circle ಆಡತುತಿದ್ದ.
ಅದೇ ರೀತಿ ನ.6 ರಂದು ರಾತ್ರಿ ಎಳನೀರು ವ್ಯಾಪಾರಿ ರಾಜಣ್ಣ ಅವರಿಗೆ ಸೇರಿದ 1150 ಎಳನೀರು ಕದ್ದು, ತನಿಖೆ ಬೆನ್ನಲ್ಲೇ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಈಗ ಮೋಹನನಿಗೆ ಎಳನೀರು ಕುಡಿಸುತ್ತಿದ್ಧಾರೆ.



