ಆಧುನಿಕ ವೈದ್ಯ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆವ ಹೇಳಿಕೆ ನೀಡುವುದು ಹಾಗೂ ಜಾಹೀರಾತು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸಿ. ಇಲ್ಲದಿದ್ದರೆ ಒಂದೊದು ಉತ್ಪನ್ನದ ಮೇಲೂ ಒಂದೊಂದು ಕೋಟಿ ದಂಡ ಹಾಕುತ್ತೇವೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿತ್ತು.
ಪತಂಜಲಿ ಔಷಧ (Patanajli prodcuts) ಉತ್ಪನ್ನಗಳ ಜಾಹೀರಾತುಗಳು ತಪ್ಪು ದಾರಿಗೆ ಎಳೆಯುವಂತಹವು. ವಿಶೇಷವಾಗಿ ಕೋವಿಡ್ ಲಸಿಕೆ (covid vaccine) ವಿರುದ್ಧ ಹಾಗೂ ಆಧುನಿಕ ಔಷಧ ಪದ್ಧತಿ ಅಲೋಪತಿ ವಿರುದ್ಧ (modern medical and allopathy medicine) ಪತಂಜಲಿ ಜಾಹೀರಾತು (Patanajli ADVT ) ನೀಡಿದೆ. ಪತಂಜಲಿ ಮುಖ್ಯಸ್ಥ ಬಾಬಾ ರಾಮದೇವ್ (Patanajli chairman BABA Ramdev) ಅದಕ್ಕೆ ತಕ್ಕಂತೆ ಬಹಿರಂಗ ಹೇಳಿಕೆ ನೀಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (IMA) ಅರ್ಜಿ ಸಲ್ಲಿಸಿತ್ತು.
ಇದರ ವಿಚಾರಣೆ ನಡೆಸಿದ ಪೀಠ, ‘ಪತಂಜಲಿ ಇಂತಹ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತು ತಕ್ಷಣವೇ ನಿಲ್ಲಿಸಬೇಕು. ನಿಲ್ಲಿಸದೇ ಹೋದರೆ ‘ನಿರ್ದಿಷ್ಟ ರೋಗ ಗುಣಪಡಿಸಬಹುದು’ ಎಂಬ ಸುಳ್ಳು ಜಾಹೀರಾತಿನ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರು. ದಂಡ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟಿದೆ.
ಅಲೋಪಥಿ ಔಷಧಗಳ ಕುರಿತು ಜನರ ಹಾದಿ ತಪ್ಪಿಸುವಂತಹ ಜಾಹೀರಾತುಗಳನ್ನು ನೀಡುತ್ತಿರುವ ಆರೋಪದ ಮೇರೆಗೆ ಯೋಗ ಗುರು ಬಾಬಾ ರಾಮ್ದೇವ್ ಸ್ಥಾಪಿಸಿರುವ ಪತಂಜಲಿ ಆಯುರ್ವೇದ ಸಂಸ್ಥೆಯ ವಿರುದ್ಧ ಸುಪ್ರೀಂ ಕೋರ್ಟ್ . ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ನ್ಯಾ. ಎಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ನ್ಯಾಯಪೀಠ ಇಂತಾದ್ದೊಂದು ವಾರ್ನಿಂಗ್ ಕೊಟ್ಟಿದೆ. ಸುದ್ದಿಗೋಷ್ಠಿಗಳಲ್ಲಿ ವೈದ್ಯಕೀಯ ಪದ್ಧತಿಗಳ ಬಗ್ಗೆ ಮಾತನಾಡುವಾಗಲೂ ಎಚ್ಚರಿಕೆ ವಹಿಸಿ ಎಂದು ಸೂಚನೆ ಕೊಟ್ಟಿದೆ.
ಪತಂಜಲಿ ಆಯುರ್ವೇದ ಸಂಸ್ಥೆ (patanajani ayurvedic co) ಕೆಲವು ರೋಗಗಳ ಬಗ್ಗೆ ಹಾಗೂ ಅಲೋಪಥಿ ವೈದ್ಯಕೀಯ ಚಿಕಿತ್ಸಾ ಪದ್ಧತಿ ಬಗ್ಗೆ ಪತಂಜಲಿ ಸಂಸ್ಥೆಯು ನೀಡುತ್ತಿರುವ ಜಾಹೀರಾತುಗಳು ಜನರಿಗೆ ತಪ್ಪು ಮಾಹಿತಿಯನ್ನು ರವಾನಿಸುತ್ತಿವೆ ಎಂದು ಅಭಿಪ್ರಾಯಪಟ್ಟಿದೆ. ತಂಜಲಿ ಸಂಸ್ಥೆಯು ಜಾಹೀರಾತಿನಲ್ಲಿ ನೀಡುವ ಮಾಹಿತಿಯ ಹಿಂದೆ ಯಾವುದೇ ಸಂಶೋಧನೆ ನಡೆಸಲಾಗಿಲ್ಲ. ಮಾಹಿತಿ ಸಾಬೀತಿಗೆ ನಿಖರ ವರದಿಗಳಿಲ್ಲ. ಹಾಗಾಗಿ ಇದು 1954ರ ಡ್ರಗ್ಸ್ ಮತ್ತು ಇತರ ಮ್ಯಾಜಿಕ್ ರೆಮಿಡೀಸ್ ಕಾಯಿದೆಯ ಉಲ್ಲಂಘನೆಯಾಗಿದೆ. ಜತೆಗೆ, ಗ್ರಾಹಕರ ರಕ್ಷಣಾ ಕಾಯಿದೆ ಅಡಿಯ ಕಾನೂನುಗಳನ್ನು ಕೂಡ ಉಲ್ಲಂಘಿಸಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರವು ನಿರ್ದಿಷ್ಟ ಶಿಫಾರಸುಗಳ ಮೂಲಕ ಮಾರ್ಗಸೂಚಿಗಳನ್ನು ಜಾರಿಗೆ ತರುವುದು ಉತ್ತಮ,” ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಪ್ರಕರಣದ ವಿಚಾರಣೆಯನ್ನು 2024ರ ಫೆ. 5ಕ್ಕೆ ಮುಂದೂಡಿದೆ.
ಆದರೆ ಇದಕ್ಕೆ ಬಾಬಾ ರಾಮ್ ದೇವ್ ಸವಾಲು ಹಾಕಿದ್ಧಾರೆ. ಯೋಗ Yoga, ಭಾರತದ ಆಯುರ್ವೇದ ವೈದ್ಯಪದ್ಧತಿ Indian Ayurvedic medical, ಪ್ರಾಕೃತಿಕ ಚಿಕಿತ್ಸೆ Naturopathy ಹಾಗೂ ಸನಾತನ ಧರ್ಮದ ತತ್ವಗಳ ವಿರುದ್ಧ ಅಪಪ್ರಚಾರ ನಡೆಸುತ್ತಲೇ ಇದ್ದಾರೆ. ಇದೊಂದು ಸುಳ್ಳು ಅಜೆಂಡಾ. ಸಿಂಥೆಟಿಕ್ ಮೆಡಿಕಲ್ ಜಗತ್ತಿನಲ್ಲಿ ಇವತ್ತಿಗೂ ಬಿಪಿ BP (blood pressure) (ಬ್ಲಡ್ ಪ್ರೆಷರ್, ರಕ್ತದೊತ್ತಡ), ಶುಗರ್ (ಡಯಾಬಿಟೀಸ್, ಮಧುಮೇಹ Diabetes), ಅಸ್ತಮಾ Asthama, ಆರ್ಥಿರಿಟೀಸ್ Artherites (ಮೂಳೆಗಳ ಕೀಲುಗಳಲ್ಲಿ ಊತ), ಕರುಳಿನ ಹುಣ್ಣು, ಮೂತ್ರಪಿಂಡ ವೈಫಲ್ಯ Kidney failure ಮೊದಲಾದ ರೋಗಗಳಿಗೆ ಔಷಧಿಗಳಿಲ್ಲ.
ಆದರೆ ನಮ್ಮ ಪತಂಜಲಿ ಉತ್ಪನ್ನಗಳು ಕೊಡುತ್ತಿರುವ ಔಷಧಕ್ಕೆ ದಾಖಲೆಗಳಿವೆ. ವೈಜ್ಞಾನಿಕ ಆಧಾರಗಳಿವೆ. ಯೋಗ, ಆಯುರ್ವೇದ, ಪ್ರಾಕೃತಿಕ ಚಿಕಿತ್ಸೆಯಲ್ಲಿ ಟೈಪ್ 1 ಡಯಾಬಿಟೀಸ್, ಥೈರಾಯ್ಡ್ ಸಮಸ್ಯೆ, ಬ್ಲಡ್ ಪ್ರೆಷರ್ ಹಾಗೂ ಮಧುಮೇಹ ನಿಯಂತ್ರಣಕ್ಕೆ ತಂದಿರುವ ದಾಖಲೆಗಳಿವೆ. ಗ್ಯಾಸ್ಟ್ರಿಕ್ ಸಮಸ್ಯೆಗೂ ಪರಿಹಾರ ಕೊಟ್ಟಿದ್ದೇವೆ. ಇದು ಸುಳ್ಳಲ್ಲ, ಸತ್ಯ ಎಂದು ವಾದಿಸಿದ್ಧಾರೆ ಬಾಬಾ ರಾಮ್ʻದೇವ್.
ನಾವೇನಾದರೂ ಸುಳ್ಳು ಸುಳ್ಳೇ ಪ್ರಚಾರ ಪಡೆದುಕೊಂಡಿದ್ದರೆ ಎಷ್ಟು ಬೇಕಾದರು ದಂಡ ಹಾಕಿ, ಗಲ್ಲಿಗೇ ಹಾಕಿ. ಸುಳ್ಳು ಪ್ರಚಾರ ತೆಗೆದುಕೊಂಡಿದ್ದರೆ ಗಲ್ಲು ಶಿಕ್ಷೆಗೂ ನಾವು ಸಿದ್ಧ ಎಂದಿದ್ದಾರೆ ಬಾಬಾ ರಾಮ್ʻದೇವ್. ಆಯುರ್ವೇದ ಔಷಧಿ, ಕಂಪೆನಿಗಳ ವಿರುದ್ಧ ಯೋಜಿತ ವ್ಯವಸ್ಥಿತ ಸುಳ್ಳು ಪ್ರಚಾರ ನಡೆಯುತ್ತಿದೆ ಎನ್ನವುದು ಅವರ ವಾದ.



