ಡಿ ಬಾಸ್ ಜೈಲಲ್ಲಿ ಇದ್ದರೂ ಹವಾ ನಡೆಯುತ್ತದೆ, ಹೊರಗೆ ಬಂದರೂ ಹವಾ ನಡೆಯುತ್ತಿರುತ್ತದೆ. ದರ್ಶನ್ ಅವರು ಚಿತ್ರರಂಗದ ಮೆರುನಟ, ಅವರು ಚಿತ್ರರಂಗಕ್ಕೆ ಒಂದು ತೂಕ. ಅವರು ಎಷ್ಟು ಬೇಗ ಆಚೆ ಬರುತ್ತಾರೋ, ಅಷ್ಟು ಚಿತ್ರರಂಗಕ್ಕೆ ಒಳ್ಳೇದಾಗುತ್ತದೆ. . ಅವರಿದ್ದರೆ, ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ದರ್ಶನ್ ಅವರು ನಿರಪರಾಧಿಯಾಗಿ ಹೊರಗೆ ಬರಲಿ ಎಂಬುದು ನನ್ನ ಪ್ರಾರ್ಥನೆ ಎಂದಿದ್ದಾರೆ ಡೈರೆಕ್ಟರ್ ಮಹೇಶ್.
ಅಭಿಮಾನಿಗಳು ತಮ್ಮ ತಮ್ಮ ಮೆಚ್ಚಿನ ನಟನನ್ನು ಬಾಸ್ ಎಂದೂ, ಅಣ್ಣಾ ಎಂದೂ ಕರೆಯೋದು ಮಾಮೂಲಿ. ಆದರೆ ಚಿತ್ರರಂಗದ ನಿರ್ದೇಶಕರು ನಟನೊಬ್ಬನನ್ನು ಬಾಸ್ ಎಂದು ಕರೆಯುವುದು ಅಪರೂಪ. ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್, ದರ್ಶನ್ ಅವರನ್ನು ಡಿ ಬಾಸ್ ಎಂದು ಹೇಳಿದ್ಧಾರೆ. ಅಷ್ಟೇ ಅಲ್ಲ,
ಮಹೇಶ್ ಅವರ ಪ್ರಕಾರ ಬಾಸ್ ಒಂದು ಟ್ರ್ಯಾಪ್ನಲ್ಲಿ ತಗಲಾಕಿಕೊಂಡಿರಬಹುದು. ಆದಷ್ಟು ಬೇಗ ಅವರು ಹೊರಗೆ ಬರಲಿ. ಅದು ಯಾವ ಟ್ರ್ಯಾಪ್ ಅಂತ ನನಗೆ ಗೊತ್ತಿಲ್ಲ. ಅದನ್ನು ಕಂಡುಹಿಡಿಯಲು ನಾನು ಪೊಲೀಸ್ ಅಧಿಕಾರಿಯಲ್ಲ. ನನ್ನ ಅನಿಸಿಕೆಯನ್ನು ನಾನು ಹೇಳಿದ್ದೇನೆ ಅಷ್ಟೇ. ನಿಜವಾಗಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು.
ಹಾಗಂತ ಮಹೇಶ್ ಅವರನ್ನು ದರ್ಶನ್ ಅವರು ಎಂದೂ ಹೆಸರಿಡಿದು ಕರೆದಿಲ್ಲವಂತೆ. ‘ರಾಬರ್ಟ್’ ಸಿನಿಮಾದಿಂದ ನಾನು ಅವರಿಗೆ ತುಂಬ ಹತ್ತಿರವಾದೆ. ‘ಕಾಟೇರ’ ಸಿನಿಮಾದಿಂದ ನಮ್ಮ ನಡುವಿನ ಒಡನಾಟ ಇನ್ನೂ ಜಾಸ್ತಿ ಆಯಿತು. ನನ್ನನ್ನು ಅವರು ನಿರ್ದೇಶಕರೇ ಎಂದು ಗೌರವದಿಂದ ಮಾತನಾಡಿಸುತ್ತಿದ್ದರು. ಯಾರೇ ನಿರ್ದೇಶಕರಿದ್ದರೂ, ಅವರನ್ನು ಹೆಸರಿಡಿದು ಕರೆಯೋದಿಲ್ಲ. ನಿರ್ದೇಶಕರೇ ಎಂದೇ ಕರೆಯುತ್ತಾರೆ ಎನ್ನುವ ಮಹೇಶ್ ದರ್ಶನ್ ಅವರು ಆರೋಪಿಯೇ ಹೊರತು, ಅಪರಾಧಿ ಅಲ್ಲ ಎಂದು ಹೇಳಿದ್ದಾರೆ.
ಸಾರಥಿ ರಿಲೀಸ್ ಆದ ದಿನ ದರ್ಶನ್ ಮನೆಗೆ ಹೋಗೋಕೆ ಮಧ್ಯಾಹ್ನವಾಗಿತ್ತು. ಈ ಬಾರಿ ಅವರು ಬಿಡುಗಡೆಯಾದರೆ ಅವರನ್ನು ಅಭಿಮಾನಿಗಳು ಮೆರವಣಿಗೆ ಮಾಡ್ಕೊಂಡ್ ಹೋಗ್ತಾರೆ. ಬೆಳಗ್ಗೆ ಹೊರಟರೂ.. ಮನೆ ತಲುಪುವುದಕ್ಕೆ ರಾತ್ರಿಯಾಗುತ್ತೆ ಎಂದು ಹೇಳಿದ್ದಾರೆ.
‘ಅಯೋಗ್ಯ’, ‘ಮದಗಜ’ ಸಿನಿಮಾಗಳ ನಿರ್ದೇಶಕ ಮಹೇಶ್ ಕುಮಾರ್. ದರ್ಶನ್ ಅವರ ಜೊತೆಗೆ ಆತ್ಮೀಯ ಒಡನಾಟ ಹೊಂದಿದ್ದಾರೆ. ಕ್ರಾಂತಿ, ರಾಬರ್ಟ್ ಚಿತ್ರಗಳ ಪ್ರಚಾರವನ್ನು ಸ್ವತಃ ಮಹೇಶ್ ಕುಮಾರ್ ಅವರೇ ವಹಿಸಿಕೊಂಡಿದ್ದರು. ಇತ್ತೀಚೆಗೆ ಅಭಿಷೇಕ್ ಅಂಬರೀಷ್ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುತ್ತಿದ್ಧಾರೆ. ಆದರೆ ಅಭಿಷೇಕ್ ಅವರ ಚಿತ್ರ ಶುರುವಾಗುವುದು ಇನ್ನೂ ನಿಧಾನವಾಗಲಿದೆ. ಅದಕ್ಕೆ ಮೊದಲೇ ಮತ್ತೊಂದು ಸಿನಿಮಾ ಮಾಡಲಿದ್ದೇನೆ ಎನ್ನುವ ಮಹೇಶ್ ಕುಮಾರ್, ಅದು ಅಯೋಗ್ಯ 2 ಅಥವಾ ಮದಗಜ 2 ಆಗಬಹುದು ಎಂದಿದ್ದಾರೆ.
ಅಯೋಗ್ಯದ ಸೀಕ್ವೆಲ್ ಏನೋ ಓಕೆ, ಏಕೆಂದರೆ ಅಯೋಗ್ಯ ಹಿಟ್ ಸಿನಿಮಾ. ಮದಗಜ ಸೀಕ್ವೆಲ್ ಚಿಂತನೆ ಯಾಕೆ..? ಏಕೆಂದರೆ ಮದಗಜ ಹಿಟ್ ಚಿತ್ರವಂತೂ ಅಲ್ಲ. ಏನೋ.. ಒಟ್ಟಿನಲ್ಲಿ ಡೈರೆಕ್ಟರ್ ಮಹೇಶ್ ಕುಮಾರ್ ಮತ್ತೊಂದು ಸಿನಿಮಾ ಮಾಡ್ತಿದ್ದಾರಂತೆ.



