ಕೆಲವರಿರುತ್ತಾರೆ. ಅವರು ದೇವರನ್ನು ನಂಬೋದಿಲ್ಲ. ದೆವ್ವವನ್ನೇ ನಂಬ್ತಾರೆ. ಧರ್ಮಕ್ಕಿಂತ ಹೆಚ್ಚು ಅಧರ್ಮವೇ ಅವರನ್ನು ಆಕರ್ಷಣೆ ಮಾಡುತ್ತೆ. ಸಾತ್ವಿಕ ಪೂಜೆ ನಂಬೋದಿಲ್ಲ. ತಾಂತ್ರಿಕ ಪೂಜೆಯನ್ನ ನಂಬ್ತಾರೆ.
ಸಾಕಷ್ಟು ಜನ ತಮ್ಮ ವ್ಯಾಪಾರಗಳಲ್ಲಿ, ಕುಟುಂಬದಲ್ಲಿ ಏನಾದರೂ ಏರುಪೇರು ಉಂಟಾಗುತ್ತಿದ್ದರೆ ಅಥವಾ ಬೇರೆ ಯಾರಿಂದಾದರೂ ಸಮಸ್ಯೆ ಕಂಡು ಬರುತ್ತಿದ್ದರೆ ಅದಕ್ಕೆ ಪರಿಹಾರ ಎನ್ನುವ ರೀತಿಯಲ್ಲಿ ಮಾಟ ಮಂತ್ರ ಮಾಡಿಸುವಂತಹ ಕೆಲಸಕ್ಕೆ ಮುಂದಾಗುತ್ತಾರೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿಯ ಮಾಟ ಮಂತ್ರ ಅಥವಾ ಇಂತಹ ಆಚರಣೆಗಳನ್ನು ನಂಬುವಂತಹ ಅಥವಾ ಆಚರಿಸುವಂತಹವರ ಪ್ರಧಾನ ರಾಶಿಗಳು ಯಾವುದು ಎನ್ನೋದನ್ನು ನೋಡಬಹುದು. ಹಾಗಂತ.. ಈ ರಾಶಿವಯರೆಲ್ಲ ಮಾಟ ಮಂತ್ರ ನಂಬ್ತಾರೆ. ದೇವರನ್ನ ನಂಬೋದೇ ಇಲ್ಲ ಎಂದೂ ಅರ್ಥವಲ್ಲ. ಈ ರಾಶಿಗಳಲ್ಲಿ ಕೆಲವರು ಹೀಗೂ ಇರ್ತಾರೆ.
ಕಟಕ ರಾಶಿ : ಕರ್ಕ ರಾಶಿಯವರ ಮನೋಭಾವನೆ ವಿಚಿತ್ರ. ಇವರು ತುಂಬಾ ಸೂಕ್ಷ್ಮ. ತುಂಬಾ ಡಿಫೆನ್ಸಿವ್. ಹೊರಗಿನ ಜಗತ್ತಿನ ಬಗ್ಗೆ ಇವರೊಂದು ನಿರ್ಧಾರಕ್ಕೆ ಬಂದರೆ.. ಮುಗಿದೇ ಹೋಯ್ತು. ಅದನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ. ಅದೇ ಕಾರಣಕ್ಕಾಗಿ ಅವರ ನಂಬಿಕೆಗಳು ಕೂಡ ವಿಭಿನ್ನವಾಗಿರುತ್ತದೆ.
ಕಟಕ ಅರ್ಥಾತ್ ಕರ್ಕಾಟಕ ರಾಶಿಯವರು ತಮ್ಮ ಪ್ರೀತಿ ಪಾತ್ರರನ್ನ ತಮ್ಮ ಜೀವಕ್ಕಿಂತ ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಪ್ರೀತಿಸುತ್ತಾರೆ ಹಾಗೂ ಇದೇ ಕಾರಣಕ್ಕಾಗಿ ಅವರನ್ನು ಕಾಪಾಡಿಕೊಳ್ಳುವುದು ಕೂಡ ಅವರು ತಮ್ಮ ಜೀವನದ ಪರಮ ಧ್ಯೇಯ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ.
ಇದೇ ಕಾರಣಕ್ಕಾಗಿ ಅವರು ಸಾಕಷ್ಟು ಬಾರಿ ಅತ್ಯಂತ ಸಂದಿಗ್ದ ಕಷ್ಟಕರ ಪರಿಸ್ಥಿತಿಗಳಲ್ಲಿ ಈ ರೀತಿಯ ಮಾಟ ಮಂತ್ರದ ಮೊರೆ ಹೋಗುವುದು ಸರ್ವೆ ಸಾಮಾನ್ಯ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ತುಲಾ ರಾಶಿ : ತುಲಾ ರಾಶಿಯವರು ಸಾಕಷ್ಟು ಕ್ರಿಯೇಟಿವ್ ಆಗಿರ್ತಾರೆ. ಪ್ರತಿಯೊಂದು ವಿಚಾರಗಳನ್ನು ವಿಭಿನ್ನವಾಗಿ ವಿಶ್ಲೇಷಣೆ ಮಾಡುತ್ತಾರೆ. ಕೆಲವೊಂದು ನಿಗೂಢ ವಿಚಾರ ಹಾಗೂ ವಸ್ತುಗಳ ಬಗ್ಗೆ ಅತ್ಯಂತ ಆಳವಾದ ಕನೆಕ್ಷನ್ ಹೊಂದಿರುತ್ತಾರೆ. ಈ ರೀತಿ ಅತಿಂದ್ರಿಯವಾಗಿ ನಡೆಯುವಂತಹ ಘಟನೆಗಳ ಬಗ್ಗೆ ಅಥವಾ ವಸ್ತುಗಳ ಬಗ್ಗೆ ಅವರಲ್ಲಿ ಸಹಜವಾಗಿಯೇ ಕುತೂಹಲ ಮೂಡಿಸುವಂತೆ ಮಾಡಿ ಅವುಗಳ ಬಗ್ಗೆ ಇವರಿಗೆ ಒಲವು ಹೆಚ್ಚಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಮಾಟಾ, ವಾಮಾಚಾರಗಳಂತಹ ಹಾಗೂ ಪ್ರೇತಭೂತಗಳಂತಹ ವಿಚಾರಗಳಲ್ಲಿ ಇವರ ಆಸಕ್ತಿ ಹೆಚ್ಚಾಗಿ ಅವುಗಳು ನಿಜಕ್ಕೂ ಕೂಡ ಇದ್ದಾವೋ ಇಲ್ಲವೋ ಎನ್ನುವ ತನಿಖೆಯನ್ನು ಅವರು ಮಾಡುವುದಕ್ಕೆ ಪ್ರಾರಂಭಿಸುವ ಮಟ್ಟಿಗೆ ಈ ಕುತೂಹಲ ಅವರನ್ನು ಎಳೆದುಕೊಂಡು ಹೋಗುತ್ತದೆ.
ಕನ್ಯಾ ರಾಶಿ : ಈ ರಾಶಿಯವರದ್ದು ಪಕ್ಕಾ ಲೆಕ್ಕಾಚಾರದ ಬದುಕು. ಲೆಕ್ಕಾಚಾರ ಮಾಡಿ ಯಾವ ಹೆಜ್ಜೆ ಇಡಬೇಕು ಎನ್ನುವಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಪ್ರತಿಯೊಂದು ವಿಚಾರಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುವವರು.
ಇದೇ ಕಾರಣಕ್ಕಾಗಿ ವಾಮಾಚಾರಗಳಂತಹ ನಿಗೂಢ ಶೈಲಿಯ ಬಗ್ಗೆ ಹೆಚ್ಚಿನ ಒಲವು ಇವರಿಗೆ ಇರುತ್ತದೆ ಹಾಗೂ ಅದರ ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲ ಕೂಡ ಕನ್ಯಾ ರಾಶಿ ಅವರಿಗೆ ಹೆಚ್ಚಾಗಿರುತ್ತದೆ. ಮೂಢನಂಬಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುವಂತಹ ಕನ್ಯಾರಾಶಿಯವರು ಮಾಟ ಮಂತ್ರಗಳ ಬಗ್ಗೆ ಕೂಡ ನಂಬಿಕೆಯನ್ನು ಹೊಂದಿರುತ್ತಾರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ವೃಶ್ಚಿಕ ರಾಶಿ : ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯವರನ್ನು ಅತ್ಯಂತ ಎನರ್ಜಿಟಿಕ್ ಹಾಗೂ ಪವರ್ಫುಲ್ ರಾಶಿಗಳಲ್ಲಿ ಒಂದು. ಬದುಕು ಹಾಗೂ ಮರಣದ ನಡುವೆ ಇರುವಂತಹ ಕೆಲವೊಂದು ನಿಗೂಢವಾಗಿರುವಂತಹ ವಸ್ತುಗಳನ್ನು ತಿಳಿದುಕೊಂಡು ಅದರ ಬಗ್ಗೆ ಅಧ್ಯಯನ ಮಾಡುವ ಆಸಕ್ತಿ, ಇವರಿಗೆ ಹೆಚ್ಚು. ಈ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ತಮಗೆ ತಿಳಿಯದೆ ಇರುವಂತಹ ಅಥವಾ ಕಾಣದೆ ಇರುವಂತಹ ಪ್ರಪಂಚದ ಬಗ್ಗೆ ಅರಿತುಕೊಳ್ಳುವಂತಹ ಹಾಗೂ ಮಾಟ ಮಂತ್ರಗಳ ಬಗ್ಗೆ ಕೂಡ ಹೆಚ್ಚಿನ ಮಾಹಿತಿಯನ್ನು ಹೊಂದುವಂತಹ ಕುತೂಹಲವನ್ನು ಹೊಂದಿರುತ್ತಾರೆ . ತಾವು ತಿಳಿದುಕೊಳ್ಳುವಂತಹ ನಿಗೂಢ ಹಂತ ಎಷ್ಟೇ ಅಪಾಯಕರವಾಗಿದ್ದರೂ ಕೂಡ ವೃಶ್ಚಿಕ ರಾಶಿಯವರು ಅದನ್ನ ತಿಳಿದುಕೊಂಡೆ ತೀರುವ ಹಠ ಇವರದ್ದು. ಚಿಕ್ಕವಯಸ್ಸಿನಿಂದಲೂ ಕೂಡ ವೃಶ್ಚಿಕ ರಾಶಿ ಅವರಿಗೆ ಜೀವನದ ಕುರಿತಂತೆ ಇರುವಂತಹ ಕೆಲವೊಂದು ಅವ್ಯಕ್ತ ಹಾಗೂ ರಹಸ್ಯಮಯ ಸತ್ಯವನ್ನು ತಿಳಿದುಕೊಳ್ಳುವಂತಹ ಆಸಕ್ತಿ ಇದ್ದೇ ಇರುತ್ತೆ. ಅದನ್ನ ಈಗ ಪೂರ್ತಿಗೊಳಿಸಲು ಅವರು ಬೇಕಾಗಿರುವಂತಹ ಪ್ರತಿಯೊಂದು ಪ್ರಯತ್ನಗಳನ್ನು ಕೂಡ ಮಾಡುತ್ತಾರೆ.
ಧನು ರಾಶಿ : ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವಂತಹ ಧನು ರಾಶಿಯವರು ಯಾವತ್ತೂ ಕೂಡ ಕಲ್ಪನೆಗೆ ಸಿಗದಂತಹ ಮನೋಭಾವನೆಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ಕೆಲಸಗಳು ಧನು ರಾಶಿಯವರಿಗೆ ಅಷ್ಟೊಂದು ಇಷ್ಟವಾಗುವುದಿಲ್ಲ ಇದಕ್ಕಾಗಿ ಅವರು ಕೆಲವರಗೂ ಕೂಡ ನಿಲುಕ ದಂತಹ ಅಸಾಮಾನ್ಯ ಕೆಲಸಗಳನ್ನ ಮಾಡೋದಕ್ಕೆ ಅಥವಾ ಅದರ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. . ಅದರಲ್ಲೂ ವಿಶೇಷವಾಗಿ ಈ ಕಪ್ಪು ಮ್ಯಾಜಿಕ್ ಅನ್ನೋದು ಅವರ ಅತ್ಯಂತ ಇಂಟರೆಸ್ಟಿಂಗ್ ವಿಚಾರಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ತಿಂದ್ರಿಯ ಕೆಲಸಗಳನ್ನು ಮಾಡುವವರ ಬಳಿಗೆ ಈ ವಿಚಾರದ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಕೂಡ ಧನು ರಾಶಿಯವರು ಹಿಂಜರಿಯೋದಿಲ್ಲ.
ಮಕರ ರಾಶಿ : ಮಕರ ರಾಶಿಯವರು ಯಾವತ್ತೂ ಕೂಡ ಮಹತ್ವಾಕಾಂಕ್ಷಿಗಳು. ನೈಜತೆಯ ವಿಚಾರದ ಬಗ್ಗೆ ಮಕರ ರಾಶಿಯವರು ಹೆಚ್ಚಿನ ಒಲವನ್ನು ಹೊಂದಿದ್ದರೂ ಕೂಡಾ, ತಾವು ಹೇಳಿದಂತೆ ಎಲ್ಲ ನಡೆಯಬೇಕು ಎನ್ನುವಂತಹ ಮನೋಭಾವನೆ ಇದ್ದೇ ಇರುತ್ತದೆ. ಇದೇ ಕಾರಣಕ್ಕಾಗಿ ಕೆಲವು ಮಕರ ರಾಶಿಯವರು ವಾಮಚಾರದ ವಿಧಿ ವಿಧಾನಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ ಅಥವಾ ಅದರ ಪ್ರಕ್ರಿಯೆಗಳನ್ನು ಅನುಸರಿಸುತ್ತಾರೆ. ಕೆಲವೊಂದು ವಿಚಾರಗಳನ್ನು ಅಥವಾ ವಸ್ತುಗಳನ್ನು ತಮ್ಮ ಇಚ್ಛೆಯ ಪ್ರಕಾರ ಮಾಡೋದಕ್ಕೆ ಅವರು ಕೂಡ ಮಾಟ ಮಂತ್ರಗಳ ಮೊರೆ ಹೋಗುತ್ತಾರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಈ ರೀತಿಯ ಅತಿಂದ್ರಿಯ ವಿಜ್ಞಾನವನ್ನ ಇನ್ನಷ್ಟು ಅಧ್ಯಯನ ಮಾಡುವುದಕ್ಕೆ ಅವರು ತಮ್ಮನ ತಾವು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ ಹಾಗೂ ಇದನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡುತ್ತಾರೆ. ಪ್ರತಿಯೊಂದು ವಿಚಾರಗಳು ಕೂಡ ತಾವು ಹೇಳಿದ ಹಾಗೆ ನಡೆಯಬೇಕು ಎನ್ನುವ ಕಾರಣಕ್ಕಾಗಿ ಅವರು ಮಾಟ ಮಂತ್ರಗಳ ಸಹಾಯವನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ವೈದಿಕ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.



