2024ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 19 ರಂದು ಸೋಮವಾರ ಆಚರಿಸಲಾಗುತ್ತಿದೆ. ಆ ದಿನ ಮಧ್ಯಾಹ್ನ 1.30ರ ನಂತರ ರಕ್ಷಾಬಂಧನ ಕಟ್ಟುವ ಶುಭ ಸಮಯ. ಅದಕ್ಕೂ ಮೊದಲು ರಾಖಿ ಕಟ್ಟಿದರೆ, ಶನಿಯ ಸೋದರಿ ಭದ್ರಾಳ ನೆರಳು ಬೀಳುತ್ತದೆ ಎನ್ನುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಈ ದಿನ ಪ್ರತಿ ರಾಶಿಯವರಿಗೂ ಒಂದು ವಿಶೇಷ ಬಣ್ಣದ ರಾಖಿ ಇರುತ್ತದೆ. ರಕ್ಷಾಬಂಧನದ ದಿನ ಸಹೋದರಿಯರು ತನ್ನ ಸಹೋದರರ ಮಣಿಕಟ್ಟಿನ ಮೇಲೆ ರಕ್ಷಾ ಸೂತ್ರವನ್ನು ಕಟ್ಟುವ ಮೂಲಕ ಸಂತೋಷ ಮತ್ತು ರಕ್ಷಣೆಯ ಜೀವನವನ್ನು ಬಯಸುತ್ತಾರೆ. ರಾಶಿಚಕ್ರ ಚಿಹ್ನೆಯ ಪ್ರಕಾರ, ಬಣ್ಣ ಮತ್ತು ವಿನ್ಯಾಸದ ಆಧಾರದ ಮೇಲೆ ಸಹೋದರನಿಗೆ ರಾಖಿ ಕಟ್ಟುವುದರಿಂದ ಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತದೆ. ಹಾಗೂ ಸಹೋದರನ ಜೀವನದಲ್ಲಿನ ಅದೆಷ್ಟೋ ಸಮಸ್ಯೆಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
ಮೇಷ ರಾಶಿ :
ಮೇಷ ರಾಶಿಯ ಸಹೋದರರಿ ಕೆಂಪು ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವು ಮೇಷ ರಾಶಿಯ ಧೈರ್ಯ ಮತ್ತು ಶಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ.
ವೃಷಭ ರಾಶಿ :
ವೃಷಭ ರಾಶಿಯ ಅಣ್ಣ ಅಥವಾ ತಮ್ಮನಿಗೆ ಬಿಳಿ ಅಥವಾ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಅವರ ಶಾಂತಿ ಮತ್ತು ತಾಳ್ಮೆಯನ್ನು ಹೆಚ್ಚಿಸುತ್ತದೆ ಮತ್ತು ಅವರಿಗೆ ಮಾನಸಿಕ ಸ್ಥಿರತೆಯನ್ನು ಒದಗಿಸುತ್ತದೆ. ಇದರಿಂದಾಗಿ ಅವರಿಗೆ ತಮ್ಮ ಸಹೋದರಿಯ ಮೇಲೆ ಪ್ರೀತಿ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.
ಮಿಥುನ ರಾಶಿ :
ಮಿಥುನ ರಾಶಿಯ ಸಹೋದರನಾಗಿದ್ದರೆ ಅವರಿಗೆ ಹಸಿರು ಬಣ್ಣದ ರಾಖಿಯನ್ನು ಕಟ್ಟಬೇಕು. ಹಸಿರು ಬಣ್ಣವನ್ನು ಮಿಥುನ ರಾಶಿಯವರಿಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣವು ಮಿಥುನ ರಾಶಿಯ ಜನರ ಮನಸ್ಸನ್ನು ಚುರುಕುಗೊಳಿಸುತ್ತದೆ ಮತ್ತು ಅವರ ಸಂವಹನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಕಟಕ ರಾಶಿ :
ಕರ್ಕ ರಾಶಿಯ ಸಹೋದರನಿದ್ದರೆ, ಅವರಿಗೆ ಬಿಳಿ, ಬೆಳ್ಳಿ ಅಥವಾ ನೀಲಿ ಬಣ್ಣದ ರಾಖಿಯನ್ನು ಕಟ್ಟಬೇಕು. ಈ ಬಣ್ಣವು ಅವರ ಭಾವನಾತ್ಮಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ ಮತ್ತು ಅವರಿಗೆ ಮಾನಸಿಕ ಶಾಂತಿಯನ್ನು ಒದಗಿಸುತ್ತದೆ.
ಸಿಂಹ ರಾಶಿ :
ಸಿಂಹ ರಾಶಿಯ ಅಣ್ಣತಮ್ಮಂದಿರಿಗೆ ಕೆಂಪು, ಕಿತ್ತಳೆ ಅಥವಾ ಚಿನ್ನದ ಬಣ್ಣದ ರಾಖಿಯನ್ನು ಕಟ್ಟುವುದು ಒಳ್ಳೆಯದು. ಈ ಬಣ್ಣವು ಅವರ ಸ್ವಾಭಿಮಾನ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅವರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ಇದು ಅವರಿಗೆ ಸೂರ್ಯ ದೇವನ ಆಶೀರ್ವಾದ ನೀಡುತ್ತಾನೆ ಎನ್ನುವ ನಂಬಿಕೆಯಿದೆ.
ಕನ್ಯಾ ರಾಶಿ :
ಕನ್ಯಾ ರಾಶಿಯವರಿಗೆ ಹಸಿರು ಅಥವಾ ತಿಳಿ ಹಳದಿ ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರ. ಈ ಬಣ್ಣವು ಅವರ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಜೀವನದಲ್ಲಿ ಸ್ಥಿರತೆಯನ್ನು ತರುತ್ತದೆ.
ತುಲಾ ರಾಶಿ :
ತುಲಾ ರಾಶಿಯವರಿಗೆ ಸಹೋದರಿಯರು ಗುಲಾಬಿ, ಬಿಳಿ ಅಥವಾ ನೀಲಿ ಬಣ್ಣದ ರಾಖಿಯನ್ನು ಕಟ್ಟಬಹುದು. ತುಲಾ ರಾಶಿಯವರಿಗೆ ಈ ಬಣ್ಣದ ರಾಖಿ ಕಟ್ಟುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಸೌಂದರ್ಯ ಮತ್ತು ಸಮತೋಲನವನ್ನು ಪ್ರತಿನಿಧಿಸುವ ಈ ಬಣ್ಣಗಳು ತುಲಾ ರಾಶಿಯವರಿಗೆ ಶಾಂತಿಯನ್ನು ನೀಡುತ್ತವೆ.
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರಿಗೆ ಕೆಂಪು ಅಥವಾ ಮರೂನ್ ಬಣ್ಣದ ರಾಖಿಯನ್ನು ಕಟ್ಟಬಹುದು. ಈ ಬಣ್ಣವು ಅವರ ಧೈರ್ಯ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.
ಧನು ರಾಶಿ :
ಧನು ರಾಶಿಯವರು ಹಳದಿ ಅಥವಾ ಕಿತ್ತಳೆ ಬಣ್ಣದ ರಾಖಿಯನ್ನು ಕಟ್ಟಬೇಕು. ಈ ಬಣ್ಣವು ಧನು ರಾಶಿ ಜನರ ಉತ್ಸಾಹ ಮತ್ತು ಆಶಾವಾದವನ್ನು ಹೆಚ್ಚಿಸುತ್ತದೆ ಮತ್ತು ಪ್ರಗತಿಯ ಹೊಸ ಮಾರ್ಗವನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.
ಮಕರ ರಾಶಿ :
ಮಕರ ರಾಶಿಯವರಿಗೆ ಕಪ್ಪು, ಕಂದು ಅಥವಾ ನೀಲಿ ಬಣ್ಣದ ರಾಖಿಯನ್ನು ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಣ್ಣವು ಅವರ ತಾಳ್ಮೆ ಮತ್ತು ಸಂತೋಷ ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಅವರ ಗುರಿಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಉತ್ತಮ ಬದಲಾವಣೆಯನ್ನು ಕೂಡ ತರುತ್ತದೆ.
ಕುಂಭ ರಾಶಿ :
ನೀಲಿ ಬಣ್ಣದ ರಾಖಿಯನ್ನು ಕಟ್ಟಬೇಕು. ಈ ಬಣ್ಣವು ಅವರ ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಉತ್ತೇಜಿಸುತ್ತದೆ ಮತ್ತು ನವೀನ ಆಲೋಚನೆಗಳೊಂದಿಗೆ ಅವರನ್ನು ಪ್ರೇರೇಪಿಸುತ್ತದೆ.
ಮೀನ ರಾಶಿ :
ಮೀನ ರಾಶಿಯ ಸಹೋದರರಿಗೆ ಹಳದಿ ಅಥವಾ ತಿಳಿ ಹಸಿರು ಬಣ್ಣದ ರಾಖಿಯನ್ನು ಕಟ್ಟುವುದು ಶುಭದಾಯಕ. ಈ ಬಣ್ಣದ ರಕ್ಷಾಬಂಧನವು ಸೋದರರ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಹಾಗೂ ಮಾನಸಿಕವಾಗಿ ಪ್ರಬಲರನ್ನಾಗಿ ಮಾಡುತ್ತದೆ.



