ಇತ್ತೀಚೆಗಷ್ಟೇ 34 ಮಂದಿ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ದ ಸರ್ಕಾರ, ಈಗ 44 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಅಂತಿಮ ಮುದ್ರೆ ಒತ್ತಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ಪ್ರಕ್ರಿಯೆ ಹಾಗೆಯೇ ಇತ್ತು. ಕಾಂಗ್ರೆಸ್ ಕಳಿಸಿದ್ದ 34 ಕಾರ್ಯಕರ್ತರ ಜೊತೆ ಮತ್ತೂ 10 ಜನರನ್ನು ಸೇರಿಸಿರುವ ಹೈಕಮಾಂಡ್, 44 ಮಂದಿಯ ಹೆಸರು ಅಂತಿಮಗೊಳಿಸಿದೆ.
44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಈ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆಯಾಗಿದೆ. ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ ಎನ್ನಲಾಗಿದೆ. ರಾಜ್ಯ ಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ವಿವರವಾಗಿ ಪ್ರಕಟಿಸಿವೆ.
ಸಿದ್ದರಾಮಯ್ಯ ಅವರ ಆಪ್ತರಾದ
ಕೆ. ಮರಿಗೌಡ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ), ಸರೋವರ ಶ್ರೀನಿವಾಸ್ (ಪ್ರವಾಸೋದ್ಯಮ ಅಭಿವೃದ್ಧಿ ನಿಗಮ)
ವಿನೋದ್ ಅಸೂಟಿ (ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ)
ಅಲ್ತಾಫ್ (ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ)
ಕಾಂತಾ ನಾಯಕ್ (ಕೌಶಲ್ಯ ಅಭಿವೃದ್ಧಿ ನಿಗಮ)
ನಾಗಲಕ್ಷ್ಮೀ ಚೌಧರಿ (ಮಹಿಳಾ ಆಯೋಗ)
ಮಾಜಿ ಜಿಲ್ಲಾಧ್ಯಕ್ಷರಾದ ಜೆ.ಎಸ್.ಆಂಜನೇಯುಲು (ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ)
ಹಿರಿಯ ನಾಯಕ ಎಸ್.ಇ. ಸುಧೀಂದ್ರ, ಎನ್ಎಸ್ಯುಐ ಅಧ್ಯಕ್ಷ ಕೀರ್ತಿ ಗಣೇಶ್, ಮಾಜಿ ಮೇಯರ್ಗಳಾದ ಸಂಪತ್ ರಾಜ್ ಹಾಗೂ ಪದ್ಮಾವತಿ, ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರಿದ್ದ ತೀರ್ಥ ಹಳ್ಳಿಯ ಆರ್. ಎಂ.ಮಂಜುನಾಥಗೌಡ, ಯುವ ನಾಯಕ ಎಸ್.ಮನೋಹರ್, ಸುಂದರೇಶ್ಗೆ ಸ್ಥಾನ ಲಭಿಸಿದೆ.
ಒಟ್ಟಾರೆ ನಿಗಮ ಮಂಡಳಿ ಅಧ್ಯಕ್ಷರ ವಿವರ ಹೀಗಿದೆ..
1 ವಿನೋದ್ ಅಸೂಟಿ-ಉಪಾಧ್ಯಕ್ಷ, ಕ್ರೀಡಾ ಪ್ರಾಧಿಕಾರ
2 ಸರೋವರ ಶ್ರೀನಿವಾಸ್, ಅಧ್ಯಕ್ಷ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
3 ಅಲ್ತಾಫ್, ಅಧ್ಯಕ್ಷ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
4 ಕಾಂತಾ ನಾಯಕ್, ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ ನಿಗಮ
5 ನಾಗಲಕ್ಷ್ಮಿ ಚೌಧರಿ, ಅಧ್ಯಕ್ಷ, ಮಹಿಳಾ ಆಯೋಗ
6 ಆಂಜನೇಯಲು, ಅಧ್ಯಕ್ಷ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
7 ಮರಿಗೌಡ, ಅಧ್ಯಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
8 ಆರ್.ಎಂ.ಮಂಜುನಾಥ ಗೌಡ -ಮಲೆನಾಡು ಅಭಿವೃದ್ಧಿ ಮಂಡಳಿ
9 ಸುಂದರೇಶ್ -ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
10 ಪಲ್ಲವಿ, ಸಾಂಬಾರು ಮಂಡಳಿ
11 ಮಂಡ್ಯ ಡಾ.ಹೆಚ್ ಕೃಷ್ಣ- ಆಹಾರ ನಿಗಮ
12 ಮುಂಡರಗಿ ನಾಗರಾಜ್
13 ಬಿ.ಹೆಚ್.ಹರೀಶ್
14 ಡಾ.ಅಂಶುಮಂಥ್
15 ರಘುನಂದನ್ ರಾಮಣ್ಣ
16 ಡಾ.ಬಿ.ಯೋಗೇಶ್ ಬಾಬು
17 ಡಾ.ಎಚ್.ಕೃಷ್ಣ
18 ದೇವಿಂದ್ರಪ್ಪ ಮರ್ತೂರು
19 ರಾಜಶೇಖರ್ ರಾಮಸ್ವಾಮಿ
20 ಎಸ್.ರಾಮಪ್ಪ
21 ಜಯಣ್ಣ
22 ಎಸ್.ಮನೋಹರ್
23 ಆಯೂಬ್ ಖಾನ್
24 ಮಮತಾ ಗುಟ್ಟಿ
25 ಸುಧೀಂದ್ರ
26 ಹೆಚ್.ಎಸ್.ಸುಂದರೇಶ್
27 ಸಂಪತ್ ರಾಜು
28 ಸವಿತ ರಘು
29 ಶಾಕಿರ್ ಸನದಿ
30 ಸೋಮಣ್ಣ ಬೇವಿನಮರದ್
31 ಮಹಬೂಬ್ ಪಾಷ
32 ಕೀರ್ತಿ ಗಣೇಶ್
33 ಮಜರ್ ಖಾನ್
34 ಲಲಿತ್ ರಾಘವ್
35 ಜಿ.ಎಸ್.ಮಂಜುನಾಥ್
36 ಪದ್ಮಾವತಿ
37 ಜಗದೇವ ಗುತ್ತೆದಾರ್
38 ರಮೇಶ್ ಬಾಬು
39 ಸೋಮಣ್ಣ ಬೇವಿನ ಮರದ್



