ಸುದೀಪ್ ಅವರಿಗೆ ಸಿನಿಮಾ ಮಾಡಲು ಚಿತ್ರರಂಗದಲ್ಲಿ ಕ್ಯೂ ಇದೆ. ಕಥೆ ಸಿದ್ಧವಾಗಬೇಕಷ್ಟೆ. ಆ ಕಥೆಗಳೂ ಸಿದ್ಧಗೊಂಡಿವೆ. ಸುದೀಪ್ ಮಂದಿನ ಸಿನಿಮಾ ಯಾವುದು..? ಹೊಸ ಸಿನಿಮಾ ಯಾರು ಡೈರೆಕ್ಟ್ ಮಾಡ್ತಾರೆ..? ಪ್ರಯೋಗಕ್ಕೆ ಹೋಗ್ತಾರಾ..? ಕಮಷಿಯಲ್ ಸಿನಿಮಾ ಮಾಡ್ತಾರಾ..? ಕನ್ನಡಕ್ಕಷ್ಟೇ ಮಾಡ್ತಾರಾ..? ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ..? ಹೀಗೆ ಹಲವು ತಿಂಗಳಿಂದ ಪ್ರೇಕ್ಷಕರನ್ನು ಕಾಡುತ್ತಿದ್ದ ಪ್ರಶ್ನೆಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ. ತಡೆದ ಮಳೆ ಜಡಿದು ಬಂದಂತೆ ಆಗಿದೆ. ಒಂದಲ್ಲ..ಎರಡಲ್ಲ..ಮೂರು ಸಿನಿಮಾಗೆ ಒಟ್ಟಿಗೇ ಯೆಸ್ ಎಂದಿದ್ದಾರೆ ಕಿಚ್ಚ ಸುದೀಪ್.
ವಿಕ್ರಾಂತ್ ರೋಣ ಹಾಗೂ ಕಬ್ಜ ನಂತರ ಕಿಚ್ಚ ಸುದೀಪ್ ಯಾವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ? ಈ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ, ಮೂರು ಸಿನಿಮಾಗಳನ್ನ ಒಪ್ಪಿಕೊಂಡಿರುವುದಾಗಿ ಕಿಚ್ಚ ಸುದೀಪ್ ಹೇಳಿದ್ದಾರೆ. ಮೂರು ಕಥೆಗಳನ್ನ ಫೈನಲ್ ಮಾಡಿರುವ ಬಗ್ಗೆ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.
About my Next
❤️🥂 pic.twitter.com/3vkCmS6FBF— Kichcha Sudeepa (@KicchaSudeep) April 2, 2023
ಕಿಚ್ಚ 46 ಕುರಿತಾಗಿ ನಿಮ್ಮ ಟ್ವೀಟ್ಗಳು ಮತ್ತು ಮೀಮ್ಗಳು ನನಗೆ ಅರ್ಥವಾಗಿದೆ. ಧನ್ಯವಾದಗಳು. ಈಗ ಇದೇ ವಿಚಾರದ ಕುರಿತಾಗಿ ಈ ಸಣ್ಣ ಸ್ಪಷ್ಟೀಕರಣವನ್ನು ನೀಡಲು ನಿರ್ಧರಿಸಿದ್ದೇನೆ. ನಾನು ವಿರಾಮ ತೆಗೆದುಕೊಂಡಿದ್ದೆ. ಇದು ನನ್ನ ವೃತ್ತಿಜೀವನದ ಮೊಟ್ಟಮೊದಲ ವಿರಾಮ. ವಿಕ್ರಾಂತ್ ರೋಣ ಚಿತ್ರದ ನಂತರ ನನಗೆ ಬ್ರೇಕ್ ಬೇಕಾಗಿತ್ತು. ತೀವ್ರಕರವಾದ ಕೋವಿಡ್ ಮತ್ತು ಸುದೀರ್ಘವಾದ ವೇಳಾಪಟ್ಟಿ ಹೊಂದಿದ್ದ ಬಿಗ್ ಬಾಸ್ ವಿಕ್ರಾಂತ್ ರೋಣ’ ಚಿತ್ರದಲ್ಲಿ ಭಾಗಿಯಾಗುವುದು ಶ್ರಮದಾಯಕವಾಗಿತ್ತು. ಆದ್ದರಿಂದ ಈ ವಿರಾಮ ನನಗೆ ಅಗತ್ಯವಿತ್ತು. ನನ್ನ ವಿರಾಮ ಆನಂದಿಸಲು ಉತ್ತಮ ಮಾರ್ಗವೆಂದರೆ ನನಗೆ ಸಂತೋಷ ನೀಡುವ ಕೆಲಸವನ್ನು ಮಾಡುವುದು. ಕ್ರಿಕೆಟ್ ಖಂಡಿತವಾಗಿಯೂ ನನಗೆ ವಿಶ್ರಾಂತಿ ನೀಡುವ ಕ್ರೀಡೆ.


ಆ ಮೂರು ಸಿನಿಮಾ ಯಾವುದು..? ಒಂದೇನೋ ಅನೂಪ್ ಭಂಡಾರಿಯವರ ಜೊತೆ ಎನ್ನಲಾಗಿದೆ. ಬಿಲ್ಲ ರಂಗ ಬಾಷಾ ಚಿತ್ರದ ಕಥೆ ಈಗಾಗಲೇ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಆದರೆ ಉಳಿದ ಇಬ್ಬರು ಡೈರೆಕ್ಟರ್ಸ್ ಯಾರು..? ಕಥೆ ಏನು..? ನಿರ್ಮಾಪಕರು ಯಾರು..? ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೆಆರ್ಜಿ, ಹೊಂಬಾಳೆಯವರ ಜೊತೆ ಸಿನಿಮಾ ಮಾಡುತ್ತಿದ್ದು, ಶೀಘ್ರದಲ್ಲೇ ಎಲ್ಲವೂ ಗೊತ್ತಾಗಲಿದೆ.



