Saturday, March 7, 2026
  • About Us
  • Contact Us
  • Advertise
  • Privacy Policy
  • Cookie Policy (EU)
SpeciallU
  • Login
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime
SpeciallU
Home Cinema

ಅವ್ಯವಸ್ಥೆಯ ಆಗರವಾದ ಕರ್ನಾಟಕ ರತ್ನ ಸಮಾರಂಭ : ಏನು ಕಾರಣ?

SpeciallU by SpeciallU
November 2, 2022
in Cinema
Reading Time: 1 min read
0 0
0
ಅವ್ಯವಸ್ಥೆಯ ಆಗರವಾದ ಕರ್ನಾಟಕ ರತ್ನ ಸಮಾರಂಭ : ಏನು ಕಾರಣ?

ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನವಾಗಿದೆ. ಪ್ರಶಸ್ತಿಯನ್ನು ಪುನೀತ್ ಅವರ ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಸ್ವೀಕರಿಸಿದರು.ಶಿವಣ್ಣ, ರಾಘಣ್ಣ ಸೇರಿದಂತೆ ಇಡೀ ರಾಜ್ ಕುಟುಂಬವೇ ಅಲ್ಲಿ ಹಾಜರಿತ್ತು. ಹೆಚ್ಚೂ ಕಡಿಮೆ 1 ಲಕ್ಷ ಅಭಿಮಾನಿಗಳು ಸೇರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್, ರಜನಿಕಾಂತ್, ಸುಧಾಮೂರ್ತಿ, ಎನ್.ಟಿ.ಆರ್. ಮೊದಲಾದವರು ವೇದಿಕೆಯಲ್ಲಿದ್ದರು. ಕನ್ನಡಿಗರಿಗೆ ಇದು ಹೆಮ್ಮೆಯ ವಿಷಯ. ಕರ್ನಾಟಕ ರತ್ನ ಪ್ರಶಸ್ತಿ ಒಬ್ಬ ಅರ್ಹವ್ಯಕ್ತಿಗೆ ಸಿಕ್ಕಾಗ ಸಿಗುವ ಸಂಭ್ರಮವೇ ಬೇರೆ. ಅಪ್ಪು ಅವರಿದ್ದರೆ.. ಎಂಬ ನೋವು ಕಾಡುತ್ತಲೇ ಇರುತ್ತದೆ. ಆ ಮಾತು ಬೇರೆ.

ಆದರೆ ಈ ಎಲ್ಲ ಸಂಭ್ರಮಗಳ ಮಧ್ಯೆ ಕಣ್ಣು ಕುಕ್ಕಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅತ್ಯುತ್ಸಾಹ ಮತ್ತು ರಾಜಕೀಯ ಮೇಲಾಟ. ಕಾರ್ಯಕ್ರಮ ಶುರುವಾಗುವುದಕ್ಕೆ ಮೊದಲೇ ಇಡೀ ಕಾರ್ಯಕ್ರಮ ವೈಯಕ್ತಿಕ ಪ್ರತಿಷ್ಠೆಗಳ ವೇದಿಕೆಯಾಗಲಿದೆ ಎಂಬ ನಿರೀಕ್ಷೆಯಿತ್ತು. ಅದಕ್ಕೆ ಎಲ್ಲ ಕಾರಣಗಳನ್ನೂ ಬೊಮ್ಮಾಯಿ ಒದಗಿಸಿದ್ದರು.

Related posts

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ವಿರೋಧ ಪಕ್ಷದ ನಾಯಕರಿಗೇ ಆಹ್ವಾನವಿಲ್ಲ : ಕರ್ನಾಟಕ ರತ್ನ ಎಂಬ ಪ್ರಶಸ್ತಿ ಕೊಡುವುದು ಬಿಜೆಪಿ ಅಲ್ಲ. ರಾಜ್ಯ ಸರ್ಕಾರ. ಅಂಥಾದ್ದೊಂದು ವೇದಿಕೆಯಲ್ಲಿ ಮುಖ್ಯಮಂತ್ರಿಗಳಷ್ಟೇ ಅಲ್ಲ, ವಿರೋಧ ಪಕ್ಷದ ನಾಯಕರನ್ನೂ ಸೇರಿಸಿಕೊಳ್ಳಬೇಕು. ರಾಜ್ಯದ ಗಣ್ಯರನ್ನು ಸೇರಿಸಿದರೆ ಅದಕ್ಕೊಂದು ಮೆರಗು. ಆದರೆ ವಿರೋಧ ಪಕ್ಷದ ನಾಯಕರನ್ನೂ ಅಹ್ವಾನಿಸಿದರೆ ಪ್ರಶಸ್ತಿಗೊಂದು ಘನತೆಯಿರುತ್ತದೆ. ಆದರೆ ಸಿದ್ದರಾಮಯ್ಯನವರನ್ನು ಯಾರೊಬ್ಬರೂ ಆಹ್ವಾನಿಸರಲಿಲ್ಲ. ಆದರೆ ಅಹ್ವಾನ ಪತ್ರಿಕೆಯಲ್ಲಿ ಮಾತ್ರ ಹೆಸರು ಪ್ರಿಂಟ್ ಆಗಿತ್ತು. ಪತ್ರಿಕೆ ಪೋಸ್ಟ್‍ನಲ್ಲಿ ಹೋಗಿತ್ತಷ್ಟೇ, ವೈಯಕ್ತಿಕವಾಗಿ ಕರೆಯುವ ಸೌಜನ್ಯವನ್ನು ಸರ್ಕಾರ ತೋರಿಸಿರಲಿಲ್ಲ. ಇದನ್ನು ಬಹಿರಂಗವಾಗಿಯೇ ಹೇಳಿದ ಸಿದ್ದರಾಮಯ್ಯ, ಪುನೀತ್ ಅವರಿಗೆ ಕರ್ನಾಟಕ ರತ್ನ ಕೊಡುತ್ತಿರುವ ಸರ್ಕಾರವನ್ನು ಅಭಿನಂದಿಸಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗುತ್ತಿಲ್ಲ ಎಂದರು. ಆಗಲೂ ಸಮಯವಿತ್ತು. ಮುಖ್ಯಮಂತ್ರಿಗಳೇ ಮುಂದಾಗಿ ಗೊತ್ತಿಲ್ಲದೆ ತಪ್ಪಾಗಿದೆ. ಬನ್ನಿ ಎಂದು ದೂರವಾಣಿ ಕರೆ ಮಾಡಿ ಸಮಾಧಾನದಿಂದ ಕೇಳಿದ್ದರೆ ಬರುವ ಸಾಧ್ಯತೆಯೂ ಇತ್ತು. ಆದರೆ ಬೊಮ್ಮಾಯಿ ಸುಮ್ಮನಾಗಿಬಿಟ್ಟರು.ಸಿದ್ದರಾಮಯ್ಯ ಅಷ್ಟೇ ಅಲ್ಲ, ವೇದಿಕೆಯಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಾಗಲೀ, ವಿಧಾನಸೌಧದ ವ್ಯಾಪ್ತಿಗೆ ಬರುವ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರಾಗಲೀ ವೇದಿಕೆಯಲ್ಲಿ ಕಾಣಿಸಿಲ್ಲ. ವಿಧಾನಸಭೆ ಸ್ಪೀಕರ್ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರನ್ನು ಜನ ಹುಡುಕಿದ್ದೇ ಬಂತು.
ರಾಜ್ಯಪಾಲರಿಗೂ ಆಹ್ವಾನವಿಲ್ಲ : ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪಿಸಿದ್ದೇ ಭಾರತ ರತ್ನಕ್ಕೆ ಸಮಾನವಾಗಿ. ಭಾರತಕ್ಕೆ ಭಾರತ ರತ್ನ ಹೇಗೋ.. ಹಾಗೆಯೇ ಕರ್ನಾಟಕಕ್ಕೆ ಕರ್ನಾಟಕ ರತ್ನ ಎಂಬ ಉದ್ದೇಶದಿಂದ. ಡಾ.ರಾಜ್ ಅವರಿಗೆ ಕರ್ನಾಟಕ ರತ್ನ ಗೌರವ ಸಿಕ್ಕಾಗ ರಾಜ್ಯಪಾಲ ಖುರ್ಷಿದ್ ಅಲಂ ಖಾನ್ ಪ್ರಶಸ್ತಿ ಪ್ರದಾನ ಮಾಡಿದ್ದರು. ವೇದಿಕೆಯಲ್ಲಿ ಮುಖ್ಯಮಂತ್ರಿಗಳೂ ಇದ್ದರು. ಆದರೆ ಭಾರತರತ್ನವನ್ನು ಹೇಗೆ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೋ.. ಹಾಗೆಯೇ ಕರ್ನಾಟಕ ರತ್ನವನ್ನು ರಾಜ್ಯಪಾಲರು ಪ್ರದಾನ ಮಾಡಬೇಕಿತ್ತು. ಆದರೆ ರಾಜ್ಯಪಾಲರಿಗೆ ಆಹ್ವಾನವಿರಲಿ, ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರೂ ಇರಲಿಲ್ಲ.
ಈ ಎರಡು ಪ್ರಮಾದಗಳ ಕಥೆ ಬೇರೆ. ಆಮೇಲೆ ಮಳೆ ಬಂತು. ಅನಿರೀಕ್ಷಿತ. ಏನೂ ಮಾಡೋಕಾಗಲ್ಲ ಎನ್ನುವ ಕಾರಣ ಕೊಡುವುದು ಸುಲಭ. ಹವಾಮಾನ ಇಲಾಖೆಯವರು ಹಿಂದಿನ ದಿನವೇ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅಂತಹ ಸ್ಥಿತಿಯಲ್ಲಿ ಪರ್ಯಾಯ ಮಾರ್ಗ ಹುಡುಕಬೇಕಿದ್ದ ಸರ್ಕಾರ ವೇದಿಕೆ ಬಳಿ ಬರುವವರೆಗೂ ಮಳೆ ಬರುವವರೆಗೂ ಅದರ ಬಗ್ಗೆ ಯೋಚಿಸಲೇ ಇಲ್ಲ. ಕನಿಷ್ಠ ಜರ್ಮನ್ ಟೆಂಟ್ ವ್ಯವಸ್ಥೆಯಾಗಿದ್ದರೂ ವೇದಿಕೆಯಲ್ಲಿ ಅತಿಥಿಗಳು ಮಳೆಯಲ್ಲಿ ನಿಲ್ಲಬೇಕಿರುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಅದನ್ನು ಬಿಡಿ, ಕೊನೆಗೆ ವಿಧಾನಸೌಧದ ಒಳಗಿನ ಸಭಾಂಗಣವನ್ನು 2 ಗಂಟೆಯಲ್ಲಿ ಸಿದ್ಧ ಮಾಡಬಹುದಿತ್ತು. ಆ ಬಗ್ಗೆಯೂ ಯೋಚನೆ ಮಾಡದೆ ಹೆಮ್ಮೆಯ ವೇದಿಕೆಯನ್ನು ಆಟದ ವೇದಿಕೆಯಾಗಿ ಬಳಸಿಕೊಂಡಿತು. ಮುಖ್ಯಮಂತ್ರಿಗಳೇ ನಿರೂಪಣೆಗೆ ನಿಂತು ಸಮಯವಿಲ್ಲ ಎಂದು ಹೇಳಿಕೊಂಡೇ ಉದ್ದುದ್ದ ಭಾಷಣ ಮಾಡುತ್ತಾ ಕಾಲ ಕಳೆದರು. ಆರ್.ಅಶೋಕ್ ಕೂಡಾ ಅಷ್ಟೆ. ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ವೇದಿಕೆಯಲ್ಲಿ ಮೈಕಿಗಾಗಿ ಹೋರಾಟ ನಡೆಸಿದ್ದು ನಗು ಬರಿಸುತ್ತಿತ್ತು.
ದೊಡ್ಮನೆಯ ಸದಸ್ಯರಾದ ಶಿವ ರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ವೇದಿಕೆಗೆ ಯಾವಾಗ ಬಂದರು, ಯಾವಾಗ ಹೋದರು ಎನ್ನುವುದನ್ನು ನೋಡುಗರೇ ಹುಡುಕಿಕೊಳ್ಳಬೇಕಾಯಿತು. ಪುನೀತ್ ಅವರ ಪರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಗೌರವ ಸ್ವೀಕರಿಸಬೇಕಿದ್ದ ಅಶ್ವಿನಿಯವರನ್ನು ವೇದಿಕೆಯಲ್ಲಿ ಕೂರಿಸಲು ಅತಿಥಿಯಾಗಿ ಬಂದಿದ್ದ ಎನ್.ಟಿ.ಆರ್. ಅವರೇ ಕುರ್ಚಿ ಒರೆಸಿ ಕೂರಿಸಬೇಕಾಯ್ತು. ಎನ್.ಟಿ.ಆರ್. ಸಜ್ಜನಿಕೆ ಎಂದು ಗೌರವಿಸೋಣ. ಆದರೆ ಒಂದು ಹೆಮ್ಮೆಯ ಪುರಸ್ಕಾರ ನೀಡಬೇಕಿರುವ ಸರ್ಕಾರದ ವರ್ತನೆ ಮಾತ್ರ ಇದಾಗಿರಲಿಲ್ಲ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸದಸ್ಯ ಸುನಿಲ್ ಕುಮಾರ್ ಎಲ್ಲಿ ಮರೆಯಾಗಿದ್ದರೋ ಏನೋ.. ಒಟ್ಟಿನಲ್ಲಿ ರಾಜಕೀಯ ಮೇಲಾಟದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಹೆಮ್ಮೆಯ ಸಮಾರಂಭ ಘನತೆಯಿಲ್ಲದೆ ಸೊರಗಬೇಕಾಯಿತು.

Tags: #ಕರ್ನಾಟಕರತ್ನ #ಪುನೀತ್‍ರಾಜ್‍ಕುಮಾರ್ #ಬೊಮ್ಮಾಯಿ #ರಜನಿಕಾಂತ್ #ಎನ್‍ಟಿಆರ್ #KarnatakaRathna #PuneethRajkukmar #Bommai #Rajinikanth #NTR #Rain
ShareTweetSendShareShare

POPULAR NEWS

  • ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    ಮೊಸರಲ್ಲಿ ಕಲ್ಲು ಸಿಗುತ್ತಂತೆ.. ಕಾಂತಾರದಲ್ಲಿ ಕಲ್ಲುರಾಶಿಯೇ ಸಿಕ್ಕಲ್ವಾ? ಉತ್ತರಗಳು ಇಲ್ಲಿವೆ

    0 shares
    Share 0 Tweet 0
  • ಪತ್ನಿ ಗೀತಾಗಾಗಿ ಕಾಂಗ್ರೆಸ್ ಪರ ಶಿವರಾಜ್ ಕುಮಾರ್ ಪ್ರಚಾರ : ಶಿವಣ್ಣ ಇದು ಬೇಕಿತ್ತಾ ಅಂದ್ರು ಫ್ಯಾನ್ಸ್..!

    0 shares
    Share 0 Tweet 0
  • ಲಿಯೋ ಮಿಯಾಂವ್ ಮಿಯಾಂವ್.. ಘೋಸ್ಟ್ ಬೆಸ್ಟ್ : ಮತ್ತೆ ಗೆದ್ದ ಶಿವಣ್ಣ.. ಕಲೆಕ್ಷನ್ ಎಷ್ಟಾಯ್ತಣ್ಣ..

    0 shares
    Share 0 Tweet 0
  • ಕನಸಿನಲ್ಲಿ ದುಡ್ಡು, ಹಣ, ನಾಣ್ಯ ಕಂಡರೆ ಶುಭವೋ..? ಅಶುಭವೋ..?

    0 shares
    Share 0 Tweet 0
  • ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು : ಒಂದೊಂದಕ್ಕೂ ಒಂದೊಂದು ಅರ್ಥವಿದೆ..

    0 shares
    Share 0 Tweet 0

Follow us on social media:

Recent News

  • ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ
  • ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?
  • 2 ತಿಂಗಳ ನಂತರವೇ  OTTಗೆ : ಟಾಲಿವುಡ್‌ ನಿರ್ಧಾರ

Category

  • Astrology
  • Cinema
  • Commerce
  • Crime
  • Health
  • News
  • Politics
  • Sports

Recent News

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

ಪ್ರೀತಿ ಹುಟ್ಟಿದ ಕಥೆ ಹೇಳಿಕೊಂಡ ರಶ್ಮಿಕಾ ದೇವರಕೊಂಡ

February 27, 2026
ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

ದರ್ಶನ್‌ ರಿಲೀಸ್‌ : ಕೋಡಿಮಠ ಶ್ರೀಗಳು ಹೇಳಿದ್ದೇನು..?

February 27, 2026
  • About Us
  • Contact Us
  • Advertise
  • Privacy Policy
  • Cookie Policy (EU)

© 2022 SpeciallU. All Rights Reserved.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

Manage Cookie Consent
To provide the best experiences, we use technologies like cookies to store and/or access device information. Consenting to these technologies will allow us to process data such as browsing behavior or unique IDs on this site. Not consenting or withdrawing consent, may adversely affect certain features and functions.
Functional Always active
The technical storage or access is strictly necessary for the legitimate purpose of enabling the use of a specific service explicitly requested by the subscriber or user, or for the sole purpose of carrying out the transmission of a communication over an electronic communications network.
Preferences
The technical storage or access is necessary for the legitimate purpose of storing preferences that are not requested by the subscriber or user.
Statistics
The technical storage or access that is used exclusively for statistical purposes. The technical storage or access that is used exclusively for anonymous statistical purposes. Without a subpoena, voluntary compliance on the part of your Internet Service Provider, or additional records from a third party, information stored or retrieved for this purpose alone cannot usually be used to identify you.
Marketing
The technical storage or access is required to create user profiles to send advertising, or to track the user on a website or across several websites for similar marketing purposes.
  • Manage options
  • Manage services
  • Manage {vendor_count} vendors
  • Read more about these purposes
View preferences
  • {title}
  • {title}
  • {title}
No Result
View All Result
  • Home
  • News
  • Politics
  • Cinema
  • Astrology
  • Sports
  • Commerce
  • Health
  • Crime

© 2022 SpeciallU. All Rights Reserved.